ಜಗ ಬದಲಾದರು ಜೀವನ ಬದಲದು!

ಜಗದೊಳಗಲ್ಲೆಲ್ಲಿಯು ಕ್ರಾಂತಿ
ಹಬ್ಬಿ, ದಲಿತ ಜನಜೀವನದುನ್ನತಿ
ಸಾಧಿಸುತ್ತಿದೆ. ತರುತಿದೆ ಶಾಂತಿ,
ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ?
ಜಗ ಬದಲಾದರು, ಜೀವನ ಬದಲದು!

ರಷ್ಯದ ವೀರರ ಕೆಚ್ಚು ಕಾಳಗ,
ಏಷ್ಯದ ಜನತೆಯ ಸ್ವಾತಂತ್ರದ ರವ,
ಮೊಳಗಿವೆ ನಾಳಿನ ಮಂಗಳದೋಲಗ.
ಆದರು ನನಗಿಲ್ಲದರೊಂದನುಭವ!
ಜಗ ಬದಲಾದರು, ಜೀವನ ಬದಲದು!

ನಾಡಿನ ಬಾಳಿಗೆ ಸ್ವಾತಂತ್ರ್ಯದ ಸಿರಿ
ಸಾಧಿಪರಾಡುವ ಮಾತುಗಳೇನು
ಒಲವಿನ ಗೆಳತಿಯು ಅಳಿದ ನೆನಪ ಝರಿ
ತುಂಬಿಹ ಕಂಬನಿ ನಿಲ್ಲಿಪುವೇನು ?
ಜಗ ಬದಲಾದರು, ಜೀವನ ಬದಲದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೧
Next post ಅವಳು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…