ಆನಂದ

ರಸ ತುಂಬಿದ ಬಣ್ಣ ಬಣ್ಣದ ಹಣ್ಣ
ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ
ನೋಡುತ್ತಾ ಕೂಡುವುದೇನೋ!
ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ!
ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ,
ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ!
ಮೂಸಿ ಮೂಗು ತುಂಬಿಕೊಳ್ಳುತ್ತಾ
ಕಣ್ಣು ಮುಚ್ಚಿಕೊಳ್ಳುವುದೇನೋ!

ಅಷ್ಟಿಷ್ಟು ನೀರುಂಡು ಸವಿಗೂಂಡ ನೆಲ
ಬಂದೇ ಬರುವನೆಂದು ನಲ್ಲನೆದುರು ನೋಡುತ್ತ
ನಾಳಿನ ಸುಖವ ಮೆಲಕು ಹಾಕುತ್ತ
ಹಣೆಗೆ ಕೈ ಹಚ್ಚಿ ದೂರದೂರದ ದಾರಿಯ
ನೋಡುತ್ತಾ ನಿಲ್ಲುವುದೇನೋ!

ಯಾವುದೋ ದನಿಕೇಳಿ, ಯಾವುದೋ ರೂಪನೆನೆದು,
ಯಾವುದೋ ಬೆಂಕಿ ಮೈಯಲ್ಲಿ ಹರಿದಾಡಿ
ಝರಿಯೊಳಗೀಜಿದ್ದನ್ನು ದಂಡೆಯಲ್ಲಿ ಕುಳಿತೇ
ನೆನೆದು ಮೈಪುಳಕದಿಂದ ಅರಳುವುದೇನೋ!

ಈ ನೆಲ ಈ ಗಾಳಿ ಈ ಬೆಳಕು ಈ ನೀರ
ಹಂಗುದೊರೆದು ಬಯಲಾಗುವುದನ್ನೂಹಿಸಿ
ಮಣ್ಣ ಮಡಿಕೆಯಲ್ಲೇ ಮೈ ಮುದುಡಿಕೊಂಡು
ಮುಚ್ಚಳ ಬೋರಲು ಹಾಕಿಕೊಳ್ಳುವುದೇನೋ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಲಧಾತು ಒಂದೇ
Next post ಲಿಂಗಮ್ಮನ ವಚನಗಳು – ೭೩

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys