ಆನಂದ

ರಸ ತುಂಬಿದ ಬಣ್ಣ ಬಣ್ಣದ ಹಣ್ಣ
ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ
ನೋಡುತ್ತಾ ಕೂಡುವುದೇನೋ!
ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ!
ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ,
ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ!
ಮೂಸಿ ಮೂಗು ತುಂಬಿಕೊಳ್ಳುತ್ತಾ
ಕಣ್ಣು ಮುಚ್ಚಿಕೊಳ್ಳುವುದೇನೋ!

ಅಷ್ಟಿಷ್ಟು ನೀರುಂಡು ಸವಿಗೂಂಡ ನೆಲ
ಬಂದೇ ಬರುವನೆಂದು ನಲ್ಲನೆದುರು ನೋಡುತ್ತ
ನಾಳಿನ ಸುಖವ ಮೆಲಕು ಹಾಕುತ್ತ
ಹಣೆಗೆ ಕೈ ಹಚ್ಚಿ ದೂರದೂರದ ದಾರಿಯ
ನೋಡುತ್ತಾ ನಿಲ್ಲುವುದೇನೋ!

ಯಾವುದೋ ದನಿಕೇಳಿ, ಯಾವುದೋ ರೂಪನೆನೆದು,
ಯಾವುದೋ ಬೆಂಕಿ ಮೈಯಲ್ಲಿ ಹರಿದಾಡಿ
ಝರಿಯೊಳಗೀಜಿದ್ದನ್ನು ದಂಡೆಯಲ್ಲಿ ಕುಳಿತೇ
ನೆನೆದು ಮೈಪುಳಕದಿಂದ ಅರಳುವುದೇನೋ!

ಈ ನೆಲ ಈ ಗಾಳಿ ಈ ಬೆಳಕು ಈ ನೀರ
ಹಂಗುದೊರೆದು ಬಯಲಾಗುವುದನ್ನೂಹಿಸಿ
ಮಣ್ಣ ಮಡಿಕೆಯಲ್ಲೇ ಮೈ ಮುದುಡಿಕೊಂಡು
ಮುಚ್ಚಳ ಬೋರಲು ಹಾಕಿಕೊಳ್ಳುವುದೇನೋ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಲಧಾತು ಒಂದೇ
Next post ಲಿಂಗಮ್ಮನ ವಚನಗಳು – ೭೩

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys