ಪಂಢರಪುರದಲ್ಲಿ

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ

ಯಾವ ಭಾಗ್ಯದಿಂದಿಲ್ಲಿಗೆ ಬಂದೆ?
ನಿನ್ನ ಕಂಡು ಧನ್ಯನಾದೆ ತಂದೆ!
ಇನ್ನಾದಡಮೆನಿಸೆನ್ನೆದೆಯಿಂದೆ-
ಜಯ ಜಯ ಪಂಢರಿನಾಥ ವಿಠೋಬಾ! ||೧||

ತುಕಾರಾಮ ನಾಮದೇವರಿಲ್ಲಿ
ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ
ನಿನ್ನ ನಾಮಮೆದೆಯೊತ್ತುವೆನಲ್ಲಿ-
ಜಯ ಜಯ ಪಂಢರಿನಾಥ ವಿಠೋಬಾ! ||೨||

ನಡುವಲಿ ಕೆಯ್ಮಡಗುತ ನಿಡುನಿಂತೆ
ಕೃತಕೃತ್ಯನೊಲೆನ್ನ ಕಾವ ಮುಂತೆ
ಮುಗಿವುದೆಂತು ನಿನ್ನ ಕೆಲಸದಂತೆ?
ಜಯ ಜಯ ಪಂಢರಿನಾಥ ವಿಠೋಬಾ! ||೩||

೨ಬಬ್ಬುಳಿಯ ಮುಳ್ಳ ಮೆಳೆಯಲಿ ನಿಲ್ಲೆ,
ಏಕೆ ವಿಷಯವಿಷಮ ಮನಮನೊಲ್ಲೆ?
ನೀತಿಯಿದೇಂ, ದೇವ, ನೀನೆ ಬಲ್ಲೆ!
ಜಯ ಜಯ ಪಂಢರಿನಾಥ ವಿಠೋಬಾ ||೪||

ಸಕೂಬಾಯಿಯೊಡಬೀಸಿದೆ ಕಲ್ಲಂ,
ಗೋಮಾಯಿಯ ೩ಕಡಸಲಾಂತೆ ಜಲ್ಲಂ-
ನನ್ನ ಕಡೆಗೆ ಕಣ್ಣೆತ್ತಿದುದಿಲ್ಲಂ!
ಜಯ ಜಯ ಪಂಢರಿನಾಥ ವಿಠೋಬಾ ||೫||

೪ಹಳಸಿರದೆ ೫ಅಂದಿನಿಟ್ಟಿಗೆ ನಿನ್ನ?
ನೋಡ ಜೀಯ ತಂದಿಹೆ ಹೊಸತನ್ನ-
ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ,
ಜಯ ಜಯ ಪಂಢರಿನಾಥ ವಿಠೋಬಾ! ||೬||

ಪುಣ್ಯಸಲಿಲೆ ತಾಯೆ ಚಂದ್ರಭಾಗೆ,
ತೊಳಸೆನ್ನ ಮನದ ಶಂಕೆಯ ನೀಗೆ,
ಗುಳುಗುಳಿಸೊಡೆಯನ ನೆನವೆದೆ ಬೀಗೆ-
ಜಯ ಜಯ ಪಂಢರಿನಾಥ ವಿಠೋಬಾ! ||೭||

ಪೊರೆಯ! ತೊರೆಯ! ಇನ್ನೆರೆಯ ನೀನೆನ್ನ-
ಧನ್ಯನಾದೆ ಕಂಡೆನೆಂದೆ ನಿನ್ನ!
ನೀ ಮರೆವೊಡಮಿನ್ನಿದೆ ಮರೆಯೆನ್ನ-
ಜಯ ಜಯ ಪಂಢರಿನಾಥ ವಿಠೋಬಾ! ||೮||

ಗೆಯ್ದ ಪಾಪಮನಿತುಂ ನಿನಗರ್ಪಣ,
ಗೆಯ್ಯದ ಪುಣ್ಯಮದುಂ ನಿನಗರ್ಪಣ,
ಕಳೆದುಳಿದ ಜೀವಿತಂ ನಿನಗರ್ಪಣ,
ಜಯ ಜಯ ಪಂಢರಿನಾಥ ವಿಠೋಬಾ! ||೯||

ನಿನ್ನನೊಡೆಯ ಮತ್ತೇನನು ಬೇಡೆ-
ಬೇಡಲೇಕೆ ನೀ ಬೇಡದೆ ನೀಡೆ?
ಸಾಕಂತ್ಯವರಂ ನಾಲಗೆಯಾಡೆ –
ಜಯ ಜಯ ಪಂಢರಿನಾಥ ವಿಠೋಬಾ! ||೧೦||
*****
೧ ಮರುಧ್ವನಿಸು
೨ ಜಾಲೀಗಿಡ
೩ ಕಡವನ್ನು ದಾಟಿಸು
೪ ಹಳತಾಗು
೫ ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗೃತ ಗೀತೆ
Next post ಹೆಂಗಸರು ಕಾಫಿ ಕುಡಿಯುವುದು ಯೋಗ್ಯ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…