ಜಾಗೃತ ಗೀತೆ

ಬಂಡವಾಳವಾಗುತಿದೆ
ಕನ್ನಡ ಭಾಷೆ – ನಮ್ಮ
ಕನ್ನಡ ಭಾಷೆ
ಬಂಡವಾಳವಾಗುತಲಿ
ಅಳಿದು ಹೋಗುತ್ತಲಿದೆ
ಕನ್ನಡ ಭಾಷೆ – ನನ್ನ
ಕನ್ನಡ ಭಾಷೆ
ಓಟಿಗಾಗಿ ಸೀಟಿಗಾಗಿ
ಜನರ ಕುಣಿಸೊ ನೋಟಿಗಾಗಿ
ಕನ್ನಡವನೆ ನಂಬಿಹರು
ಸ್ವಾರ್ಥಭರಿತ ಧೂರ್ತರು
ಎತ್ತ ಹೋದರತ್ತ ಇವರು
ಜಯ್ ಜಯ್ ಜಯ್ ಕನ್ನಡಕೆ
ಮತ್ತೆ ಬಂದರಿತ್ತ ಇವರೆ
ಶರಣು ಅನ್ಯಭಾಷೆಗೆ
ಬಂಗಲೆಗಳ ಕಟ್ಟಿಹರು
ಗದ್ದುಗೆಗಳ ಹಿಡಿದಿಹರು
ಕನ್ನಡದ ಹೆಸರಿನಲಿ
ಆಕಾಶವ ಮುಟ್ಟಿಹರು
ಅಳಿದರೇನು? ಉಳಿದರೇನು?
ಈ ಮಣ್ಣಿನ ಕನ್ನಡ
ಇದರಿಂದಲೆ ತುಂಬುತ್ತಿದೆ
ಇವರ ಮನೆಯ ಸಿರಿಕೊಡ
*   *   *
ಏಳಿರಣ್ಣ ಎದ್ದೇಳಿ
ನಶಿಸುತ್ತಿದೆ ಕನ್ನಡ
ಚರಿತ್ರೆಯಲೆ ಉಳಿವುದಕೆ
ಬಿಡದಿರಿ ಈ ಕನ್ನಡ
ನಮ್ಮ ಉಸಿರು ಕನ್ನಡ
ನಾಡ ಹಸಿರು ಕನ್ನಡ
ಕನ್ನಡ ಹೆಸರಾಗುವಲ್ಲಿ
ದುಡಿಯಿರೆಲ್ಲ ಸಂಗಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳುದಿಂಗಳು
Next post ಪಂಢರಪುರದಲ್ಲಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys