ಜಾಗೃತ ಗೀತೆ

ಬಂಡವಾಳವಾಗುತಿದೆ
ಕನ್ನಡ ಭಾಷೆ – ನಮ್ಮ
ಕನ್ನಡ ಭಾಷೆ
ಬಂಡವಾಳವಾಗುತಲಿ
ಅಳಿದು ಹೋಗುತ್ತಲಿದೆ
ಕನ್ನಡ ಭಾಷೆ – ನನ್ನ
ಕನ್ನಡ ಭಾಷೆ
ಓಟಿಗಾಗಿ ಸೀಟಿಗಾಗಿ
ಜನರ ಕುಣಿಸೊ ನೋಟಿಗಾಗಿ
ಕನ್ನಡವನೆ ನಂಬಿಹರು
ಸ್ವಾರ್ಥಭರಿತ ಧೂರ್ತರು
ಎತ್ತ ಹೋದರತ್ತ ಇವರು
ಜಯ್ ಜಯ್ ಜಯ್ ಕನ್ನಡಕೆ
ಮತ್ತೆ ಬಂದರಿತ್ತ ಇವರೆ
ಶರಣು ಅನ್ಯಭಾಷೆಗೆ
ಬಂಗಲೆಗಳ ಕಟ್ಟಿಹರು
ಗದ್ದುಗೆಗಳ ಹಿಡಿದಿಹರು
ಕನ್ನಡದ ಹೆಸರಿನಲಿ
ಆಕಾಶವ ಮುಟ್ಟಿಹರು
ಅಳಿದರೇನು? ಉಳಿದರೇನು?
ಈ ಮಣ್ಣಿನ ಕನ್ನಡ
ಇದರಿಂದಲೆ ತುಂಬುತ್ತಿದೆ
ಇವರ ಮನೆಯ ಸಿರಿಕೊಡ
*   *   *
ಏಳಿರಣ್ಣ ಎದ್ದೇಳಿ
ನಶಿಸುತ್ತಿದೆ ಕನ್ನಡ
ಚರಿತ್ರೆಯಲೆ ಉಳಿವುದಕೆ
ಬಿಡದಿರಿ ಈ ಕನ್ನಡ
ನಮ್ಮ ಉಸಿರು ಕನ್ನಡ
ನಾಡ ಹಸಿರು ಕನ್ನಡ
ಕನ್ನಡ ಹೆಸರಾಗುವಲ್ಲಿ
ದುಡಿಯಿರೆಲ್ಲ ಸಂಗಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳುದಿಂಗಳು
Next post ಪಂಢರಪುರದಲ್ಲಿ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…