ಸತ್ಯ ನುಡಿ ಇರಲಿ

ಇಂದು ನನ್ನ ಮನ ಮಲಿನ ವಾಯ್ತು
ಸುಳ್ಳು ಮೋಸಗಳ ಹುಟ್ಟಿಸಿತ್ತು
ಸುಖದ ಬಾಳಿನ ಗುರಿಗೆ
ಯಾವುದಕ್ಕೆ ಹೇಸದೆ ವಟಗುಡಿಸಿತು

ತೂತು ಹೊಂದಿದ ಮಡಕೆಯಲಿ
ನೀರು ತಾನೇ ನಿಲ್ಲಬಹುದೆ
ಆತ್ಮ ಸತ್ಯದ ದಾರಿಯಲ್ಲಿದಾಗ
ಸುಳ್ಳಿದ್ದರೆ ಆತ್ಮ ನಲಿಯಬಹುದೆ!

ಹೃದಯದ ಮನೆಯಲ್ಲಿ ಗುಡಿಸದೆ
ಮತ್ತೆ ಸತ್ಯದಿ ಸಾರಣಿಸದೆ
ಹಾಕಬಹುದೆ ಓಂ ರಂಗವಲ್ಲಿ
ರಾಮನ ಪ್ರತಿಷ್ಠೆ ಪೂರ್‍ಣಿಸುವುದೇ

ಬೇಕಾದಾಗಲೆಲ್ಲ ನಡೆ, ವಂಚಿಸಿ
ಮತ್ತೆ ಉತ್ತಮ ಮಾತುಗಳೇಕೆ!
ಉತ್ತಮ ಮಾತುಗಳ ಮುಂಚೆ
ಆತ್ಮ ಪರಿಶೀಲನೆ ಬಾರದೇಕೆ

ಈಗ ಸಾಕು ನಿನ್ನ ಸುಳ್ಳು ಮೋಸ
ಒಂದೊಂದು ಸುಳ್ಳು ನಿನ್ನ ಘಾತಕ
ಸತ್ಯದ ಅಹ್ವಾನವೊಂದೇ ಸಾಕು
ಮಾಣಿಕ್ಯ ವಿಠಲನದೇ ಜಾತಕ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೨
Next post ಪಾಪಿಯ ಪಾಡು – ೨೫

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…