ಸ೦ಧ್ಯಾ

ದಿವಸಾವಸಾನದೊಳು
ಬುವಿಯ ನುತಿಗೆಚ್ಚರಿಸೆ
‘ಮುನಸ್ಸೀನ’ನಂದದೊಳು ಅಸ್ತಗಿರಿಯ
ರವಿಯಡರಿ ರಂಜಿಸಿಹ-
ನವನ ಪಾವನ ಕಾಂತಿ
ಅವತರಿಸಿ ಹರಸುತಿದ ಅಂಜುವಿಳೆಯ.

ಇನಿಯನೊಲಿಯಲಿ ಎಂದೊ
ಮನದಾಸೆ ಸಲಲೆಂದೊ-
ಎನಗರಿಯದಾ ಹರಕೆ-ಮುಗಿಲ ಕರೆಯ
ಹೊನಲಿನೊಳು ಸುರಕನ್ಯೆ
ಹಣತೆಯಿದ ತೇಲಿಸಿಹ-
ಳೆನುವಂತೆ ಬಾಲೆಶಶಿ ತೇಲುತಿಹನು.

ಸುತ್ತ ಗಿರಿಗಳೆ ಭಿತ್ತಿ,
ಹೊತ್ತಿರುವ ಬಾಂದಳವೆ
ಬಿತ್ತರದ ಗುಮ್ಮಟವು, ಬಯಲೆ ನೆಲವು;
ಅತ್ತ ನೀರವವನವೆ
ಮೊತ್ತ ಭಕ್ತರ-ಚೋದ್ಯ!-
ಚಿತ್ತಕೆಸೆವುದು ವಿಶ್ವದೇಗುಲದೊಲು.

ಮೊಳಗುತಿದೆ ಖಗವಾದ್ಯ,
ಮಲರು ಕಂಪೊಗೆಯುತಿದೆ,
ಹೊಲದೊಳದೊ ಮಣಿದಿಹನು ಮುಸಲ ರೈತ.
ಕೊಳದೊಳಂಜಲಿ ಮುಗಿದು
ಕುಳಿತಿಹರು ಭೂಸುರರು,
ಎಲರು ಪಿಸುಗುಟ್ಟುತಿದೆ: “ಅವ ಬರುತಿಹಂ!”

ತನ್ನ ಮಂದಿರಕೀಗ
ಚೆನ್ನಿಗನು ಬರುತಿಹನು!
ನನ್ನಿ ಇದು, ಬಾ ನೀರ, ನುತಿಗೊಡುವ ಬಾ.
ಪಿನ್ನೆಲ್ಲ ಹುಸಿಮಾಡೆ
ಮುನ್ನ ಮಂಗಳ ಮಾಡೆ
ಚೆನ್ನ ಅವ ಬರುತಿಹನು, ನುತಿಗೊಡುವ ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕಿನ ಭಿಕ್ಷೆ
Next post ಸಾವಿರಾರು ನದಿಗಳು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys