ಸ೦ಧ್ಯಾ

ದಿವಸಾವಸಾನದೊಳು
ಬುವಿಯ ನುತಿಗೆಚ್ಚರಿಸೆ
‘ಮುನಸ್ಸೀನ’ನಂದದೊಳು ಅಸ್ತಗಿರಿಯ
ರವಿಯಡರಿ ರಂಜಿಸಿಹ-
ನವನ ಪಾವನ ಕಾಂತಿ
ಅವತರಿಸಿ ಹರಸುತಿದ ಅಂಜುವಿಳೆಯ.

ಇನಿಯನೊಲಿಯಲಿ ಎಂದೊ
ಮನದಾಸೆ ಸಲಲೆಂದೊ-
ಎನಗರಿಯದಾ ಹರಕೆ-ಮುಗಿಲ ಕರೆಯ
ಹೊನಲಿನೊಳು ಸುರಕನ್ಯೆ
ಹಣತೆಯಿದ ತೇಲಿಸಿಹ-
ಳೆನುವಂತೆ ಬಾಲೆಶಶಿ ತೇಲುತಿಹನು.

ಸುತ್ತ ಗಿರಿಗಳೆ ಭಿತ್ತಿ,
ಹೊತ್ತಿರುವ ಬಾಂದಳವೆ
ಬಿತ್ತರದ ಗುಮ್ಮಟವು, ಬಯಲೆ ನೆಲವು;
ಅತ್ತ ನೀರವವನವೆ
ಮೊತ್ತ ಭಕ್ತರ-ಚೋದ್ಯ!-
ಚಿತ್ತಕೆಸೆವುದು ವಿಶ್ವದೇಗುಲದೊಲು.

ಮೊಳಗುತಿದೆ ಖಗವಾದ್ಯ,
ಮಲರು ಕಂಪೊಗೆಯುತಿದೆ,
ಹೊಲದೊಳದೊ ಮಣಿದಿಹನು ಮುಸಲ ರೈತ.
ಕೊಳದೊಳಂಜಲಿ ಮುಗಿದು
ಕುಳಿತಿಹರು ಭೂಸುರರು,
ಎಲರು ಪಿಸುಗುಟ್ಟುತಿದೆ: “ಅವ ಬರುತಿಹಂ!”

ತನ್ನ ಮಂದಿರಕೀಗ
ಚೆನ್ನಿಗನು ಬರುತಿಹನು!
ನನ್ನಿ ಇದು, ಬಾ ನೀರ, ನುತಿಗೊಡುವ ಬಾ.
ಪಿನ್ನೆಲ್ಲ ಹುಸಿಮಾಡೆ
ಮುನ್ನ ಮಂಗಳ ಮಾಡೆ
ಚೆನ್ನ ಅವ ಬರುತಿಹನು, ನುತಿಗೊಡುವ ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕಿನ ಭಿಕ್ಷೆ
Next post ಸಾವಿರಾರು ನದಿಗಳು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…