Home / ಕಥೆ / ಸಣ್ಣ ಕಥೆ / ಕೆಂಬಲ್ಲಿನ ಗೆಲುವು

ಕೆಂಬಲ್ಲಿನ ಗೆಲುವು

ರಾಜ ಒಡೆಯರವರು ಶ್ರೀರಂಗಪಟ್ಟಣದಲ್ಲಿದ್ದ ತಿರುಮಲ ರಾಯನ ಆಸ್ಥಾನಕ್ಕೆ ಹೋಗುತ್ತಲಿರಬೇಕಾಗಿತ್ತು. ಏಕೆಂದರೆ ಆಗಿನಕಾಲದ ಪಾಳಯಗಾರರೂ ಒಡೆಯರೂ ವಿಜಯನಗರದ ಅರಸರಿಗೆ ಅಧೀನರಾಗಿದ್ದು ಶ್ರೀರಂಗಪಟ್ಟಣದಲ್ಲಿದ್ದ ಅವರ ಪ್ರತಿನಿಧಿಯ ವಶವರ್ತಿಗಳಾಗಿದ್ದರು. ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಒಡೆಯರೂ ಪಾಳಯಗಾರರೂ ಪರಸ್ಪರ ಸೇರಿ ಜಗಳವಾಡುವುದು ಸಾಮಾನ್ಯವಾಗಿತ್ತು.

ಶ್ರೀರಂಗಪಟ್ಟಣಕ್ಕೆ ರಾಜ ಒಡೆಯರು ತಮ್ಮ ಮೈಗಾವಲಿನ ಭಟರೊಡನೆಯೂ ವಾಲಗ ಮೇಳದೊಡನೆಯೂ ಹೊರಟರು. ದಾರಿಯಲ್ಲಿ ಕೆಂಬಲ್ಲೆಂಬ ಗ್ರಾಮದ ಒಡೆಯನೂ ಅದೇ ರೀತಿಯಲ್ಲಿ ಮೇಳತಾಳಗಳೊಡನೆ ಹೋಗುತ್ತಿದ್ದನು. ರಾಜ ಒಡೆಯರಿಗೆ ಇದು ಅವಮಾನವಾಗಿ ತೋರಿತು. “ಮೇಳತಾಳಗಳೊಡನೆ ನಮ್ಮೆದುರಿಗೆ ಯಾರು ಹೋಗುತ್ತಿರುವವರು” ಎಂದು ಕೇಳಲು “ಕೆಂಬಲ್ಲಿನ ಒಡೆಯರು” ಎಂಬ ಉತ್ತರ ಬಂತು. ಕೂಡಲೆ ರಾಜ ಒಡೆಯರು ತಮ್ಮ ವಾದ್ಯಗಳನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದರು. ಸದ್ದಿಲ್ಲದೆ ಶ್ರೀರಂಗಪಟ್ಟಣವನ್ನು ಸೇರಿ ತಿರುಮಲರಾಯರ ಆಸ್ಥಾನವನ್ನು ಹೊಕ್ಕರು. ಇದನ್ನು ಕಂಡು ತಿರುಮಲರಾಯರು “ಇದೇನು ರಾಜ ಒಡೆಯರೇ ತಮ್ಮ ಪದವಿಗೆ ತಕ್ಕಂತೆ ಮೇಳತಾಳಗಳೊಡನೆ ಪ್ರವೇಶಮಾಡದೆ ಮೌನದಿಂದ ಬಂದಿರಿ?” ಎಂದು ಕೇಳಲು ರಾಜ ಒಡೆಯರು ಕ್ರೋಧದಿಂದ “ಮೇಳತಾಳಗಳನ್ನು ನಮಗಿಂತಲೂ ಕೀಳಾದವರೂ ಇಟ್ಟುಕೊಳ್ಳುವಾಗ ಅದರಿಂದ ನಮ್ಮ ಪದವಿಗೇನು ಗೌರವ?” ಎಂದು ನುಡಿದರು. ಇದನ್ನು ಕೇಳಿದ ಕಂಬಲ್ಲಿನ ಒಡೆಯನು ಕೋಪದಿಂದ ಕಣು ಕೆರಳಿಸಿದನು. ಅದನ್ನು ಕಂಡು ರಾಜ ಒಡೆಯರು “ಏಕೆ? ಒಡೆಯರೇ? ನಿಮಗಿಷ್ಟವಾದರೆ ಈಗಲೇ ಯಾರು ಶ್ರೇಷ್ಟರೆಂದು ಕಾಣುವ! ತಾಳಮೇಳಗಳು ಯಾರಿಗೆ ಸಲ್ಲತಕ್ಕದ್ದೆಂದು ನಿರ್ಣಯವಾಗಲಿ ” ಎಂದರು. ತಿರುಮಲರಾಯರು “ನೀವಿಬ್ಬರೂ ಹೀಗೆ ಕಲಹವಾಡಬಾರದು” ಎನ್ನಲು ಅವರೆದುರಿಗೇನೂ ಮಾಡಲಾರದೆ ಇಬ್ಬರೂ ರೋಷವನ್ನು ನುಂಗಿಕೊಂಡು ಸುಮ್ಮನಿದ್ದರು. ಮಾರನೆ ದಿವಸ ಬಂದಕೂಡಲೆ ರಾಜ ಒಡೆಯರು ಕೆಂಬಲ್ಲಿನ ಮೇಲೆ ಪಡೆಸಹಿತ ಹೊರಟು ಆ ಒಡೆಯರನ್ನು ಸೋಲಿಸಿ ಕೆಂಬಲ್ಲನ್ನು ವಶಪಡಿಸಿಕೊಂಡರು.
*****
[ವಿಲ್ಕ್ಸ್, ಸಂ. ೧. ಪುಟ ೨೪]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...