ಬದುಕಿನ ಭಿಕ್ಷೆ

ಲೋಕದಲಿ ಕಷ್ಟಗಳು ಬಂದರೆ
ನಿನ್ನ ಮನೆ ಬಾಗಿಲಿಗೇ
ಏಕೆ ಬಂದವು ಹೇಳು?
ನಿನ್ನ ಕಷ್ಟಗಳೇ ಲೋಕವಲ್ಲ
ಹೆರವರ ಕಾಲಿಗೆ ಚುಚ್ಚಿದ
ಮುಳ್ಳನೊಮ್ಮೆ ತೆಗೆದಾದರೂ ನೋಡು
ಆಗ ಹೇಳು ನಿನಗೆ ಹೇಗನಿಸುತ್ತದೆ?

ಖಡ್ಗದಿಂದಾದ ಗಾಯಕ್ಕಿಂತ
ನಾಲಿಗೆಯ ಮಾತುಗಳ ನೋವು
ಎಷ್ಟಿದೆ ನೋಡು ಸಹಿಸಲಾಗುತ್ತಿಲ್ಲ.
ತನುವಿಗಾದ ಗಾಯ ಮಾಯುತ್ತದೆ
ಮನಸಿನ ಗಾಯ ಮಾಯದು ನೋಡು
ನಾಲಿಗೆಯ ನೋವಿನ ಮುಂದೆ
ಖಡ್ಗದ ನೋವು ಸೋಲುತ್ತದೆ ನೋಡು!

ಆಗೊಮ್ಮೆ ನೀರು ಸಮುದ್ರವೇ ಅವರಾಗಿದ್ದರು
ಖಾಲಿ ಕೊಡ ಹಿಡಿದು ಈಗ ನಿಂತಿದ್ದಾರೆ ನೋಡು
ತಮ್ಮ ಮಹಲುಗಳ ಕಳೆದುಕೊಂಡು
ಗುಡಿಸಲಿಗಾಗಿ ತುಂಡು ಭೂಮಿ
ಭಿಕ್ಷೆ ಕೇಳಲು ಬಂದಿದ್ದಾರೆ ನೋಡು.
ಬದುಕಿಗೆ ಕಾಲಿಂದ ಒದ್ದುಹೋದ ಅವರೇ
ಇಂದು-ಬದುಕಿನ ಭಿಕ್ಷೆ ಕೇಳುತ್ತಿದ್ದಾರೆ ನೋಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಗಸರು ಕಾಫಿ ಕುಡಿಯುವುದು ಯೋಗ್ಯ
Next post ಸ೦ಧ್ಯಾ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys