ಬೆಳುದಿಂಗಳು

ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು
ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು
ತಾರೆಗಳ ಬಳಗವನು ಚದರಿಸುತ ಬಳಸುವದು,-
ಮುಗಿಲ ಮಂಡಲದೀಚೆ ಕಾರ್‍ಮುಗಿಲೊ ಎನೆ ನಿಂದು,
ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು.
ಕಾರಣವನರಿಯದಲೆ ಲೋಕ ಕಳವಳಿಸುವುದು,
ಹೊಳೆಯದಿರೆ ಗೂಢವಿದು ಮನವು ಹಳಹಳಿಸುವುದು.
ಆಗ ಕಂಡಿತು ನೊಂದ ಕಾದಲರ ಜೋಡೊಂದು.

ಎಲೆಲೆ! ಚಿತ್ರವಿದೆನಲು ನಿಕಟ ಕಲಹವನೆಸಗಿ
ಕಡುನೊಂದ ಕಾದಲರು ಒಮ್ಮಿಗಿಲೆ ಒಂದಾಗಿ
ತಬ್ಬುವರು, ಮುತ್ತಿಡುವರಲ್ಲ ರೋದನವಳಿಯೆ!
ಬರುತಿಹುದು ಮತ್ತಾಗ ಬೆಳುದಿಂಗಳದು ಮಸಗಿ,
ಹೋಗಿಹುದು ಮುಗಿಲೋಳಿ ತಾನಿಲ್ಲದಂತಾಗಿ
ಚಿಕ್ಕೆಗಳು ಮಿನುಗುವವು, ನಗುತ ನಿಂತಿಹಳಿಳೆಯೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಕಂದನ ವಚನಗಳು : ಐದು
Next post ಕಾಡುತಾವ ನೆನಪುಗಳು – ೨

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…