ಮುದ್ದು ಕಂದನ ವಚನಗಳು : ಐದು

ಶಿವಯೋಗಿ
ಲಂಗೋಟಿ ಕಟ್ಕೊಂಡು ಕಾಡು ಸೇರುವ ಯೋಗಿ
ನೀನೊಬ್ಬ ಹೆಂಬೇಡಿ ಅಂಜುಬುರುಕ
ಇದ್ದ ಜೀವನದಲ್ಲಿ ಇದ್ದಂತೆ ಎದೆಯೊಡ್ಡು
ಶೂರನೇ ಶಿವಯೋಗಿ ಮುದ್ದುಕಂದ

ಲಾಂಛನ
ಪ್ಯಾಂಟು ತೊಟ್ಟರು ಶರಣ ಬೂಟು ತೊಟ್ಟರು ಶರಣ
ಲಾಂಛನದ ಪ್ರಿಂಟಿನಲಿ ಶರಣನಿಲ್ಲ
ಮಾರ್‍ಕೆಟಿನಲಿ ನಿಂತು ಶರಣನಾಗಲು ಬಲ್ಲೆ
ಶರಣತ್ವ ಸಹಜತ್ವ ಮುದ್ದುಕಂದ

ಶರಣ
ಮ್ಯಾಲ ಶಿವಶಿವ ಮಂತ್ರ ಒಳಗ ಕತ್ತರಿ ತಂತ್ರ
ಒಳಗೊಂದು ಹೊರಗೊಂದು ಶರಣಗಿಲ್ಲ
ಬಿಚ್ಚುಗತ್ತಿಯ ವೀರ ಬಯಲ ಯುದ್ಧದ ಶೂರ
ಶರಣ ಸತ್ಯದ ಧೀರ ಮುದ್ದುಕಂದ

ಸಂಯಮ
ಭುವನ ಸುಂದರ ತೋಟ ಶಿವತಾನೆ ಕೈಲಾಸ
ಗೂಳಿಗಳು ಹೊಕ್ಕಾವು ನೋಡು ನೋಡು
ಅತ್ತ ಕಳ್ಳರ ಕಾಟ ಇತ್ತ ಬೆಲ್ಲದ ಬೇಟ
ಸಂಯಮವೆ ಶಿವತತ್ತ್ವ ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು
Next post ಬೆಳುದಿಂಗಳು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys