ಕಳೆದು ಹೋದೆಯಲ್ಲೇ

ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ
ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ
ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು
ಗರಿಗರಿಯಾದ ಸೀರೆಯುಟ್ಟು
ನನ್ನ ಮನೆಗೆ ಬಂದಿದ್ದೆಯಲ್ಲೆ
ಲಕ್ಷ್ಮೀ ಕಳೆದು ಹೋದೆಯೆಲ್ಲೆ…

ಮೊನ್ನೆ ರಾಜ್ಯೋತ್ಸವದಂದು ನಿನಗೂ
ಭುವನೇಶ್ವರಿಗೂ ಒಂದೇ sweet ಮಾಡಿದ್ದೆ
ಅದಕ್ಕೇನಾದರೂ ಸಿಟ್ಟುಮಾಡಿಕೊಂಡೆಯೋ!
ಕಳ್ಳರ ಕಾಟ ಜಾಸ್ತಿ ಎಂದು ಒಂದೆಳೆ
ಸರದ ಮೇಲೆಯೇ ನಿನ್ನ ಪೂಜಿಸಿದ್ದೆ
ಅದಕ್ಕೇನಾದರೂ ಬೇಸರ ಪಟ್ಟುಕೊಂಡೆಯೋ!
ಎಲ್ಲವೂ ನಿನ್ನದೇ ಅಂದೆ
ಸ್ವಲ್ಪ ನಿರ್ಲಕ್ಷಿಸಿದ್ದೇನೋ ನಿಜ
ಆದರೆ ಇಂದು ಒಮ್ಮಿಂದೊಮ್ಮೆಲೆ
ನನ್ನ ಮರೆತು Megesticನಲ್ಲಿ ಇಳಿದು ಬಿಡುವುದೇ
ಲಕ್ಷ್ಮೀ ಕಳೆದುಹೋದೆಯಲ್ಲೆ…..

ನೀನು ಅದೆಷ್ಟು ಚೆಂದ ಅಂದ ಆಕರ್ಷನೀಯಳು
ಆಘಾತವಾಗದಂತೆ ಕಾಯುತ್ತಲೇ ಇದ್ದೆ
ನೀನು ಹೀಽಗೆ ತುಂಬಾ ಚಂಚಲಿ
ನೀನು ನಿನ್ನ ಹಾಗೆಯೇ,
ನಿನ್ನ ಕಳೆದುಕೊಂಡ ನನ್ನ ಮನ ಮೌನವಾಯಿತು
ಬೆವರು ಬೆನ್ನಕಾವಲಿಗೆ ಇಳಿಯಿತು
ಗೊತ್ತಾಗಲೇ ಇಲ್ಲ ನೋಡು ನನಗೆ ನೀನು
ಇದ್ದಕ್ಕಿದ್ದ ಹಾಗೆ ಒಮ್ಮೆಲೇ ತಪ್ಪಿಸಿಕೊಳ್ಳುವಿಯೆಂದು
ಒಂದಿಷ್ಟೇನಾದರೂ ಸಂಶಯ ಬಂದಿದ್ದರೆ
ಕೈಯಲ್ಲಿ ಕೈ ಹಿಡಿದು ನಡೆಯುತ್ತಿದ್ದೆ
ಲಕ್ಷ್ಮೀ ಕಳೆದುಹೋದೆಯಲ್ಲೆ….
ಪ್ರವಾಸಿಗರೇ ತುಂಬಿದ Megesticನಲ್ಲಿ
ಕಳ್ಳರ ಹಾವಳಿಗೆ ತುತ್ತಾಗಿ ದಿನ ದಿನವೂ
ಮೌಲ್ಯವೇ ಕಳೆದುಕೊಳ್ಳುತ್ತಿರುವೆಯಲ್ಲೆ….
ಹಾಯಾಗಿ ಬದುಕಲೂ ಬಿಡದ ಬೆಂಗಳೂರಿನಲ್ಲಿ
ನೀನು ಬದುಕುತ್ತಲೇ ಕಳೆದುಕೊಳ್ಳುತ್ತಿದ್ದಿಯಲ್ಲ
ಬಡವರ ಕನಸಿಗೆ ಕೊಳ್ಳಿ ಇಡುತ್ತಾ
ಸಿರಿಗರವ ಹೊಡೆದವರಲ್ಲೇ ಇರುವೆನೆನುತ
ಕುಡಿತಗಳ ಜನರ ನಡುವೆಯೇ
ಹೊರಳಾಡುತ್ತ ನೆರಳಾಡುತ್ತ
ಬೆಲೆಯೇ ಕಳೆದುಕೊಳ್ಳುತ್ತಿರುವಿಯಲ್ಲ ಲಕ್ಷ್ಮಿ
ಬಾಗಿಲು ತಟ್ಟಿ ಬರುವವಳಲ್ಲ ನೀನು
ಬಾಗಿಲು ಒದ್ದು ಹೋಗುವುದು ಮಾತ್ರ ಗೊತ್ತು
ಅದಕ್ಕೆಂದೇ ನೀನು ಚಂಚಲೆ ಲಕ್ಷ್ಮಿ
ಲಕ್ಷ್ಮಿ ಕಳೆದುಹೋದೆಯಲ್ಲೆ.

(Megesticನಲ್ಲಿ ಇತ್ತೀಚೆಗೆ ಸಾವಿರಾರು ರೂಪಾಯಿ ಕಳೆದುಕೊಂಡಾಗ, ವಾರವಿಡೀ ಆ ಬೇಸರದಲ್ಲಿಯೇ ಇದ್ದಾಗ ಬರದದ್ದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೈರ್ಯ ಬೇಕು
Next post ಲಿಂಗಮ್ಮನ ವಚನಗಳು – ೩೯

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…