ಕಳೆದು ಹೋದೆಯಲ್ಲೇ

ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ
ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ
ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು
ಗರಿಗರಿಯಾದ ಸೀರೆಯುಟ್ಟು
ನನ್ನ ಮನೆಗೆ ಬಂದಿದ್ದೆಯಲ್ಲೆ
ಲಕ್ಷ್ಮೀ ಕಳೆದು ಹೋದೆಯೆಲ್ಲೆ…

ಮೊನ್ನೆ ರಾಜ್ಯೋತ್ಸವದಂದು ನಿನಗೂ
ಭುವನೇಶ್ವರಿಗೂ ಒಂದೇ sweet ಮಾಡಿದ್ದೆ
ಅದಕ್ಕೇನಾದರೂ ಸಿಟ್ಟುಮಾಡಿಕೊಂಡೆಯೋ!
ಕಳ್ಳರ ಕಾಟ ಜಾಸ್ತಿ ಎಂದು ಒಂದೆಳೆ
ಸರದ ಮೇಲೆಯೇ ನಿನ್ನ ಪೂಜಿಸಿದ್ದೆ
ಅದಕ್ಕೇನಾದರೂ ಬೇಸರ ಪಟ್ಟುಕೊಂಡೆಯೋ!
ಎಲ್ಲವೂ ನಿನ್ನದೇ ಅಂದೆ
ಸ್ವಲ್ಪ ನಿರ್ಲಕ್ಷಿಸಿದ್ದೇನೋ ನಿಜ
ಆದರೆ ಇಂದು ಒಮ್ಮಿಂದೊಮ್ಮೆಲೆ
ನನ್ನ ಮರೆತು Megesticನಲ್ಲಿ ಇಳಿದು ಬಿಡುವುದೇ
ಲಕ್ಷ್ಮೀ ಕಳೆದುಹೋದೆಯಲ್ಲೆ…..

ನೀನು ಅದೆಷ್ಟು ಚೆಂದ ಅಂದ ಆಕರ್ಷನೀಯಳು
ಆಘಾತವಾಗದಂತೆ ಕಾಯುತ್ತಲೇ ಇದ್ದೆ
ನೀನು ಹೀಽಗೆ ತುಂಬಾ ಚಂಚಲಿ
ನೀನು ನಿನ್ನ ಹಾಗೆಯೇ,
ನಿನ್ನ ಕಳೆದುಕೊಂಡ ನನ್ನ ಮನ ಮೌನವಾಯಿತು
ಬೆವರು ಬೆನ್ನಕಾವಲಿಗೆ ಇಳಿಯಿತು
ಗೊತ್ತಾಗಲೇ ಇಲ್ಲ ನೋಡು ನನಗೆ ನೀನು
ಇದ್ದಕ್ಕಿದ್ದ ಹಾಗೆ ಒಮ್ಮೆಲೇ ತಪ್ಪಿಸಿಕೊಳ್ಳುವಿಯೆಂದು
ಒಂದಿಷ್ಟೇನಾದರೂ ಸಂಶಯ ಬಂದಿದ್ದರೆ
ಕೈಯಲ್ಲಿ ಕೈ ಹಿಡಿದು ನಡೆಯುತ್ತಿದ್ದೆ
ಲಕ್ಷ್ಮೀ ಕಳೆದುಹೋದೆಯಲ್ಲೆ….
ಪ್ರವಾಸಿಗರೇ ತುಂಬಿದ Megesticನಲ್ಲಿ
ಕಳ್ಳರ ಹಾವಳಿಗೆ ತುತ್ತಾಗಿ ದಿನ ದಿನವೂ
ಮೌಲ್ಯವೇ ಕಳೆದುಕೊಳ್ಳುತ್ತಿರುವೆಯಲ್ಲೆ….
ಹಾಯಾಗಿ ಬದುಕಲೂ ಬಿಡದ ಬೆಂಗಳೂರಿನಲ್ಲಿ
ನೀನು ಬದುಕುತ್ತಲೇ ಕಳೆದುಕೊಳ್ಳುತ್ತಿದ್ದಿಯಲ್ಲ
ಬಡವರ ಕನಸಿಗೆ ಕೊಳ್ಳಿ ಇಡುತ್ತಾ
ಸಿರಿಗರವ ಹೊಡೆದವರಲ್ಲೇ ಇರುವೆನೆನುತ
ಕುಡಿತಗಳ ಜನರ ನಡುವೆಯೇ
ಹೊರಳಾಡುತ್ತ ನೆರಳಾಡುತ್ತ
ಬೆಲೆಯೇ ಕಳೆದುಕೊಳ್ಳುತ್ತಿರುವಿಯಲ್ಲ ಲಕ್ಷ್ಮಿ
ಬಾಗಿಲು ತಟ್ಟಿ ಬರುವವಳಲ್ಲ ನೀನು
ಬಾಗಿಲು ಒದ್ದು ಹೋಗುವುದು ಮಾತ್ರ ಗೊತ್ತು
ಅದಕ್ಕೆಂದೇ ನೀನು ಚಂಚಲೆ ಲಕ್ಷ್ಮಿ
ಲಕ್ಷ್ಮಿ ಕಳೆದುಹೋದೆಯಲ್ಲೆ.

(Megesticನಲ್ಲಿ ಇತ್ತೀಚೆಗೆ ಸಾವಿರಾರು ರೂಪಾಯಿ ಕಳೆದುಕೊಂಡಾಗ, ವಾರವಿಡೀ ಆ ಬೇಸರದಲ್ಲಿಯೇ ಇದ್ದಾಗ ಬರದದ್ದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೈರ್ಯ ಬೇಕು
Next post ಲಿಂಗಮ್ಮನ ವಚನಗಳು – ೩೯

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…