Home / ಕವನ / ಕವಿತೆ / ಕಳೆದು ಹೋದೆಯಲ್ಲೇ

ಕಳೆದು ಹೋದೆಯಲ್ಲೇ

ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ
ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ
ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು
ಗರಿಗರಿಯಾದ ಸೀರೆಯುಟ್ಟು
ನನ್ನ ಮನೆಗೆ ಬಂದಿದ್ದೆಯಲ್ಲೆ
ಲಕ್ಷ್ಮೀ ಕಳೆದು ಹೋದೆಯೆಲ್ಲೆ…

ಮೊನ್ನೆ ರಾಜ್ಯೋತ್ಸವದಂದು ನಿನಗೂ
ಭುವನೇಶ್ವರಿಗೂ ಒಂದೇ sweet ಮಾಡಿದ್ದೆ
ಅದಕ್ಕೇನಾದರೂ ಸಿಟ್ಟುಮಾಡಿಕೊಂಡೆಯೋ!
ಕಳ್ಳರ ಕಾಟ ಜಾಸ್ತಿ ಎಂದು ಒಂದೆಳೆ
ಸರದ ಮೇಲೆಯೇ ನಿನ್ನ ಪೂಜಿಸಿದ್ದೆ
ಅದಕ್ಕೇನಾದರೂ ಬೇಸರ ಪಟ್ಟುಕೊಂಡೆಯೋ!
ಎಲ್ಲವೂ ನಿನ್ನದೇ ಅಂದೆ
ಸ್ವಲ್ಪ ನಿರ್ಲಕ್ಷಿಸಿದ್ದೇನೋ ನಿಜ
ಆದರೆ ಇಂದು ಒಮ್ಮಿಂದೊಮ್ಮೆಲೆ
ನನ್ನ ಮರೆತು Megesticನಲ್ಲಿ ಇಳಿದು ಬಿಡುವುದೇ
ಲಕ್ಷ್ಮೀ ಕಳೆದುಹೋದೆಯಲ್ಲೆ…..

ನೀನು ಅದೆಷ್ಟು ಚೆಂದ ಅಂದ ಆಕರ್ಷನೀಯಳು
ಆಘಾತವಾಗದಂತೆ ಕಾಯುತ್ತಲೇ ಇದ್ದೆ
ನೀನು ಹೀಽಗೆ ತುಂಬಾ ಚಂಚಲಿ
ನೀನು ನಿನ್ನ ಹಾಗೆಯೇ,
ನಿನ್ನ ಕಳೆದುಕೊಂಡ ನನ್ನ ಮನ ಮೌನವಾಯಿತು
ಬೆವರು ಬೆನ್ನಕಾವಲಿಗೆ ಇಳಿಯಿತು
ಗೊತ್ತಾಗಲೇ ಇಲ್ಲ ನೋಡು ನನಗೆ ನೀನು
ಇದ್ದಕ್ಕಿದ್ದ ಹಾಗೆ ಒಮ್ಮೆಲೇ ತಪ್ಪಿಸಿಕೊಳ್ಳುವಿಯೆಂದು
ಒಂದಿಷ್ಟೇನಾದರೂ ಸಂಶಯ ಬಂದಿದ್ದರೆ
ಕೈಯಲ್ಲಿ ಕೈ ಹಿಡಿದು ನಡೆಯುತ್ತಿದ್ದೆ
ಲಕ್ಷ್ಮೀ ಕಳೆದುಹೋದೆಯಲ್ಲೆ….
ಪ್ರವಾಸಿಗರೇ ತುಂಬಿದ Megesticನಲ್ಲಿ
ಕಳ್ಳರ ಹಾವಳಿಗೆ ತುತ್ತಾಗಿ ದಿನ ದಿನವೂ
ಮೌಲ್ಯವೇ ಕಳೆದುಕೊಳ್ಳುತ್ತಿರುವೆಯಲ್ಲೆ….
ಹಾಯಾಗಿ ಬದುಕಲೂ ಬಿಡದ ಬೆಂಗಳೂರಿನಲ್ಲಿ
ನೀನು ಬದುಕುತ್ತಲೇ ಕಳೆದುಕೊಳ್ಳುತ್ತಿದ್ದಿಯಲ್ಲ
ಬಡವರ ಕನಸಿಗೆ ಕೊಳ್ಳಿ ಇಡುತ್ತಾ
ಸಿರಿಗರವ ಹೊಡೆದವರಲ್ಲೇ ಇರುವೆನೆನುತ
ಕುಡಿತಗಳ ಜನರ ನಡುವೆಯೇ
ಹೊರಳಾಡುತ್ತ ನೆರಳಾಡುತ್ತ
ಬೆಲೆಯೇ ಕಳೆದುಕೊಳ್ಳುತ್ತಿರುವಿಯಲ್ಲ ಲಕ್ಷ್ಮಿ
ಬಾಗಿಲು ತಟ್ಟಿ ಬರುವವಳಲ್ಲ ನೀನು
ಬಾಗಿಲು ಒದ್ದು ಹೋಗುವುದು ಮಾತ್ರ ಗೊತ್ತು
ಅದಕ್ಕೆಂದೇ ನೀನು ಚಂಚಲೆ ಲಕ್ಷ್ಮಿ
ಲಕ್ಷ್ಮಿ ಕಳೆದುಹೋದೆಯಲ್ಲೆ.

(Megesticನಲ್ಲಿ ಇತ್ತೀಚೆಗೆ ಸಾವಿರಾರು ರೂಪಾಯಿ ಕಳೆದುಕೊಂಡಾಗ, ವಾರವಿಡೀ ಆ ಬೇಸರದಲ್ಲಿಯೇ ಇದ್ದಾಗ ಬರದದ್ದು)
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...