Home / ಕವನ / ಕವಿತೆ / ಧೈರ್ಯ ಬೇಕು

ಧೈರ್ಯ ಬೇಕು

ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು
ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ
ಅದರ ತಲೆಗೆ ಹೊಡೆಯಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು

ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್ಯ ರಸವು
ರಸದ ಇಂಥ ಕಲಬೆರಕೆಗೆ || ಧೈರ್ಯ….
ಸುತಮುತ್ತಲ ಕಡೆಗೆ | ಕತ್ತಲೊಂದೆ ತುಂಬಿದಾಗ
ಕಿರಣವನ್ನು ಕಾಣಲಿಕ್ಕೆ || ಧೈರ್ಯ….

ಸಂಶಯ ನಿರಾಶೆ ತುಂಬಿ | ಉಸಿರು ಕಟ್ಟಿ ಹೋಗುವಾಗ
ನಂಬಿಕೆಯಲಿ ತಲೆಯನೆತ್ತೆ || ಧೈರ್ಯ….
ನಮ್ಮ ಅಳುವೆ ಹೊರ ಒಳಗಿರೆ | ಇತರರಳುವ ತವಿಸಿ ನಗುವ
ಹೊಮ್ಮಿಸುವಾ ಸಾಹಸಕ್ಕೆ || ಧೈರ್ಯ….

ದೇಹಶಕ್ತಿ ಇಳಿದು ಹೋಗಿ | ದಿನದ ಕೆಲಸ ಸಪ್ಪೆಯಾಗಿ
ಇರುವ ಕಸವ ರಸ ಮಾಡಲು || ಧೈರ್ಯ….
ಮಾತುಗಳಿಗೆ ಬಣ್ಣ ಕೊಟ್ಟು| ಮೋಸ ಬಲೆಗೆ ಎಳೆಯುವಾಗ
ಇದ್ದುದಿದ್ದ ಹಾಗೆ ಪೇಳೆ || ಧೈರ್ಯ….

ನೀಚತನವು ದನಿಯನೆತ್ತಿ | ಎಳೆಯ ಸತ್ಯವನೊತ್ತಲು
ಎಳೆಯ ಲತೆಯು ಮರವಾಗಲು || ಧೈರ್ಯ….
ಗುಡ್ಡ ತಲೆಯ ಮೇಲೆ ಬಿದ್ದ| ರೀತಿಯಲ್ಲಿ ದುಃಖವಡಸೆ
ನಿನ್ನ ಇಚ್ಛೆ ದೇವ ಎನಲು || ಧೈರ್ಯ….
ವಿಧಿಯು ನಿನ್ನ ಬಲಗೆನ್ನೆಗೆ ಹೊಡೆತ ಕೊಡಲು ಸಿಟ್ಟಾಗದೆ
ನಿನ್ನ ಎಡದ ಕೆನ್ನೆ ಕೊಡಲು || ಧೈರ್ಯ….
ಕತ್ತಿ ಮದ್ದು ಗುಂಡುಗಳಲಿ ತೋರುವಂಥದಲ್ಲ ಧೈರ್ಯ
ಸೃಷ್ಟಿಯಲ್ಲಿ ಮಗುವು ಕೂಡ ಮಾಡಬಲ್ಲ ಸಹಜ ಧೈರ್ಯ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...