ಧೈರ್ಯ ಬೇಕು

ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು
ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ
ಅದರ ತಲೆಗೆ ಹೊಡೆಯಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು

ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್ಯ ರಸವು
ರಸದ ಇಂಥ ಕಲಬೆರಕೆಗೆ || ಧೈರ್ಯ….
ಸುತಮುತ್ತಲ ಕಡೆಗೆ | ಕತ್ತಲೊಂದೆ ತುಂಬಿದಾಗ
ಕಿರಣವನ್ನು ಕಾಣಲಿಕ್ಕೆ || ಧೈರ್ಯ….

ಸಂಶಯ ನಿರಾಶೆ ತುಂಬಿ | ಉಸಿರು ಕಟ್ಟಿ ಹೋಗುವಾಗ
ನಂಬಿಕೆಯಲಿ ತಲೆಯನೆತ್ತೆ || ಧೈರ್ಯ….
ನಮ್ಮ ಅಳುವೆ ಹೊರ ಒಳಗಿರೆ | ಇತರರಳುವ ತವಿಸಿ ನಗುವ
ಹೊಮ್ಮಿಸುವಾ ಸಾಹಸಕ್ಕೆ || ಧೈರ್ಯ….

ದೇಹಶಕ್ತಿ ಇಳಿದು ಹೋಗಿ | ದಿನದ ಕೆಲಸ ಸಪ್ಪೆಯಾಗಿ
ಇರುವ ಕಸವ ರಸ ಮಾಡಲು || ಧೈರ್ಯ….
ಮಾತುಗಳಿಗೆ ಬಣ್ಣ ಕೊಟ್ಟು| ಮೋಸ ಬಲೆಗೆ ಎಳೆಯುವಾಗ
ಇದ್ದುದಿದ್ದ ಹಾಗೆ ಪೇಳೆ || ಧೈರ್ಯ….

ನೀಚತನವು ದನಿಯನೆತ್ತಿ | ಎಳೆಯ ಸತ್ಯವನೊತ್ತಲು
ಎಳೆಯ ಲತೆಯು ಮರವಾಗಲು || ಧೈರ್ಯ….
ಗುಡ್ಡ ತಲೆಯ ಮೇಲೆ ಬಿದ್ದ| ರೀತಿಯಲ್ಲಿ ದುಃಖವಡಸೆ
ನಿನ್ನ ಇಚ್ಛೆ ದೇವ ಎನಲು || ಧೈರ್ಯ….
ವಿಧಿಯು ನಿನ್ನ ಬಲಗೆನ್ನೆಗೆ ಹೊಡೆತ ಕೊಡಲು ಸಿಟ್ಟಾಗದೆ
ನಿನ್ನ ಎಡದ ಕೆನ್ನೆ ಕೊಡಲು || ಧೈರ್ಯ….
ಕತ್ತಿ ಮದ್ದು ಗುಂಡುಗಳಲಿ ತೋರುವಂಥದಲ್ಲ ಧೈರ್ಯ
ಸೃಷ್ಟಿಯಲ್ಲಿ ಮಗುವು ಕೂಡ ಮಾಡಬಲ್ಲ ಸಹಜ ಧೈರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೀಳರಿಮೆ ಏಕೆ?
Next post ಕಳೆದು ಹೋದೆಯಲ್ಲೇ

ಸಣ್ಣ ಕತೆ

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…