ನೀನಿಲ್ಲದೆ ನಾನಿಲ್ಲವೋ

ನೀನಿಲ್ಲದೆ ನಾನಿಲ್ಲವೋ
ಹರಿ ನಿನ್ನ ಲೀಲೆಯಲ್ಲಿ
ನನ್ನ ನಿಲುವೊ ||

ಯುಗ ಯುಗಾಂತರವೂ
ಅವತರಿಸಿದೆ ಭಕುತರಿಗಾಗಿ
ಧರ್ಮಕರ್ಮ ಭೇದ ತೊರೆದು
ನೀ ನಿಂದೆ ಪರಾತ್ಪರನಾಗಿ ||

ರೂಪ ರೂಪದಲ್ಲೂ ನೀನು
ನಾಮಕೋಟಿ ಹಲವು ಬಗೆ
ನಿನ್ನ ನಾಮ ಸ್ಮರಣೆಯಲ್ಲಿ
ಎನ್ನ ನಿಲುವು ಕಂಡುಕೊಂಡನು ||

ಜಪ ತಪ ಉಪವಾಸವೇಕೆ
ಯಾಗ ಯೋಗ ಭೋಗವೇಕೆ
ತ್ಯಾಗ ಒಂದೇ ನಿನ್ನ ರೀತಿಯಲ್ಲಿ
ಭಕ್ತಿ ಎಂಬ ಮನವ ಕಂಡೆನು ||

ಧ್ಯಾನ ಮನನ ಕರ್‍ಪೂರ
ಎನ್ನೆದೆ ಗುಡಿಯೊಳಗೆ ಸತ್ಯಶಾಂತಿ
ನಿನ್ನ ನಿಲುವು ಕಾಯಕವೇ ನಿನ್ನ ಗೆಲುವು
ಸಾಧನೆ ಯುಕ್ತಿಯು ಸ್ಥೈರ್‍ಯ ಒಂದೇ ಮುಕ್ತಿಯು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೀಟ್ಸ್ ಎಂಬ ಕವಿ
Next post ಲಂಚ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys