Home / ಕವನ / ಕವಿತೆ / ಮನದೊಳಗಣ…

ಮನದೊಳಗಣ…

ಮನದೊಳಗಣ
ಮನೆಯ ಕಟ್ಟಿದೆ
ಹೇ ದೇವ ಹೋ ದೇವ
ಎಂಥ ಚೆಂದವೋ

ಪಂಚ ತತ್ವವೆಂಬ
ಇಟ್ಟಿಗೆಯನಿಟ್ಟು
ಗೋಡೆಗಳ ಕಟ್ಟಿ ಭದ್ರಪಡಿಸಿ
ಮುತ್ತುಗಳ ಸೇರಿಸಿ ಒಳಗಣ
ನೂಲುಗಳ ಸುತ್ತಿಸಿ ಒಂಬತ್ತು
ಗೂಡುಗಳನಿರಿಸಿ ಉಸಿರಾಗಿಸಿದೆ
ಧಮನಿಗಳಲ್ಲಿ ಎಂಥ ಚೆಂದವೋ
ಹೇ ದೇವ ಹೇ ದೇವ

ಸತ್ಯಧರ್ಮವೆಂಬ
ಜ್ಯೋತಿಯನ್ನಿರಿಸಿ ಬಾಳಿಗೆ
ತುಲಾಭಾರವೆಂಬ ತೂಕವನ್ನಿರಿಸಿ
ಗೊಂಬೆಯಾಗಿಸಿದೆ
ಎಂಥ ಚೆಂದವೋ
ಹೇ ದೇವ ಹೇ ದೇವ
ಮೂರೇ ದಿನದ ಜೋಗುಳದಲಿ
ನೋವುನಲಿವುಗಳ
ತೊಟ್ಟಿಲ ಕಟ್ಟಿ ತೂಗಿಸಿ
ಆಟವಾಡಿಸುತಿಹೆ
ಹೇ ದೇವ ಹೇ ದೇವ

ಬಣ್ಣಿಸಲಸದಳವೂ
ಹೇಗಾದರೂ ಸರಿಯೇ
ನೀನೇ ಜೀವನವೋ ನಮ್ಮ ಬಾಳಿಗೆ.
ಶಿವನು ಆಡಿಸಿದ ಡಮರುಗ
ಢಂ ಢಂ ಢಂ ಢಮರುಗ.
ನರ್ತಿಸಿತು ಭಾವತರಂಗ
ರುದ್ರರೂಪ ತಾಳ ಹಿಮ್ಮೇಳ
ಜೀವ ನರನಾಡಿಗಳು
ಓಂಕಾರ ಹೂಂಕಾರ
ನಾದರೂಪ ಜಗವ
ಆವರಿಸಿತು
ಮನನ ತನನ ತೋಂ ತನನ ||

ಧರೆಗೆ ಇಳಿದ
ಜಟಾಧಾರಿ ಆನಂದ
ಮಹದಾನಂದ ತ್ರಿನೇತ್ರಧಾರಿ
ತ್ರಿಪುರಾರಿ ವಿಶ್ವರೂಪಧಾರಿ ||

ಗಜಚರ್ಮಾಂಬರಧಾರಿ
ಸಚ್ಚಿದಾನಂದ ಸ್ವರೂಪ
ಮಹದೇವ ಮೂರುವರ
ಕೊಟ್ಟು ಸಲಹೆನ್ನ ಮುಕ್ಕಣ್ಣ ||

ಬಾರನ್ನ ಬಾಳು ಬಂಗಾರವಾಗಿಸು
ಶಂಭೋ ಲಿಂಗೈಕ್ಯ ಹಂಸರೂಪ
ಎನ್ನಯ್ಯ ರಕ್ಷಿಸೈ ಮುದದಿ
ನೂರು ವರುಷದಾ ಹಾದಿಯಲಿ ||

ಸುಗಮವಾಗಿಸೋ ದೇವ
ನಾರಾಯಣಾ ಆತ್ಮಜನೆ
ಶಿವಲಿಂಗ ಎನ್ನ ಅಂತರಂಗದಲಿ ನಿಲ್ಲಯ್ಯ
ಬಾರಯ್ಯ ಬಾರೋ ಎನ್ನಯ್ಯ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...