Home / ಕವನ / ಕವಿತೆ / ಮನದೊಳಗಣ…

ಮನದೊಳಗಣ…

ಮನದೊಳಗಣ
ಮನೆಯ ಕಟ್ಟಿದೆ
ಹೇ ದೇವ ಹೋ ದೇವ
ಎಂಥ ಚೆಂದವೋ

ಪಂಚ ತತ್ವವೆಂಬ
ಇಟ್ಟಿಗೆಯನಿಟ್ಟು
ಗೋಡೆಗಳ ಕಟ್ಟಿ ಭದ್ರಪಡಿಸಿ
ಮುತ್ತುಗಳ ಸೇರಿಸಿ ಒಳಗಣ
ನೂಲುಗಳ ಸುತ್ತಿಸಿ ಒಂಬತ್ತು
ಗೂಡುಗಳನಿರಿಸಿ ಉಸಿರಾಗಿಸಿದೆ
ಧಮನಿಗಳಲ್ಲಿ ಎಂಥ ಚೆಂದವೋ
ಹೇ ದೇವ ಹೇ ದೇವ

ಸತ್ಯಧರ್ಮವೆಂಬ
ಜ್ಯೋತಿಯನ್ನಿರಿಸಿ ಬಾಳಿಗೆ
ತುಲಾಭಾರವೆಂಬ ತೂಕವನ್ನಿರಿಸಿ
ಗೊಂಬೆಯಾಗಿಸಿದೆ
ಎಂಥ ಚೆಂದವೋ
ಹೇ ದೇವ ಹೇ ದೇವ
ಮೂರೇ ದಿನದ ಜೋಗುಳದಲಿ
ನೋವುನಲಿವುಗಳ
ತೊಟ್ಟಿಲ ಕಟ್ಟಿ ತೂಗಿಸಿ
ಆಟವಾಡಿಸುತಿಹೆ
ಹೇ ದೇವ ಹೇ ದೇವ

ಬಣ್ಣಿಸಲಸದಳವೂ
ಹೇಗಾದರೂ ಸರಿಯೇ
ನೀನೇ ಜೀವನವೋ ನಮ್ಮ ಬಾಳಿಗೆ.
ಶಿವನು ಆಡಿಸಿದ ಡಮರುಗ
ಢಂ ಢಂ ಢಂ ಢಮರುಗ.
ನರ್ತಿಸಿತು ಭಾವತರಂಗ
ರುದ್ರರೂಪ ತಾಳ ಹಿಮ್ಮೇಳ
ಜೀವ ನರನಾಡಿಗಳು
ಓಂಕಾರ ಹೂಂಕಾರ
ನಾದರೂಪ ಜಗವ
ಆವರಿಸಿತು
ಮನನ ತನನ ತೋಂ ತನನ ||

ಧರೆಗೆ ಇಳಿದ
ಜಟಾಧಾರಿ ಆನಂದ
ಮಹದಾನಂದ ತ್ರಿನೇತ್ರಧಾರಿ
ತ್ರಿಪುರಾರಿ ವಿಶ್ವರೂಪಧಾರಿ ||

ಗಜಚರ್ಮಾಂಬರಧಾರಿ
ಸಚ್ಚಿದಾನಂದ ಸ್ವರೂಪ
ಮಹದೇವ ಮೂರುವರ
ಕೊಟ್ಟು ಸಲಹೆನ್ನ ಮುಕ್ಕಣ್ಣ ||

ಬಾರನ್ನ ಬಾಳು ಬಂಗಾರವಾಗಿಸು
ಶಂಭೋ ಲಿಂಗೈಕ್ಯ ಹಂಸರೂಪ
ಎನ್ನಯ್ಯ ರಕ್ಷಿಸೈ ಮುದದಿ
ನೂರು ವರುಷದಾ ಹಾದಿಯಲಿ ||

ಸುಗಮವಾಗಿಸೋ ದೇವ
ನಾರಾಯಣಾ ಆತ್ಮಜನೆ
ಶಿವಲಿಂಗ ಎನ್ನ ಅಂತರಂಗದಲಿ ನಿಲ್ಲಯ್ಯ
ಬಾರಯ್ಯ ಬಾರೋ ಎನ್ನಯ್ಯ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...