ಮನದೊಳಗಣ…

ಮನದೊಳಗಣ
ಮನೆಯ ಕಟ್ಟಿದೆ
ಹೇ ದೇವ ಹೋ ದೇವ
ಎಂಥ ಚೆಂದವೋ

ಪಂಚ ತತ್ವವೆಂಬ
ಇಟ್ಟಿಗೆಯನಿಟ್ಟು
ಗೋಡೆಗಳ ಕಟ್ಟಿ ಭದ್ರಪಡಿಸಿ
ಮುತ್ತುಗಳ ಸೇರಿಸಿ ಒಳಗಣ
ನೂಲುಗಳ ಸುತ್ತಿಸಿ ಒಂಬತ್ತು
ಗೂಡುಗಳನಿರಿಸಿ ಉಸಿರಾಗಿಸಿದೆ
ಧಮನಿಗಳಲ್ಲಿ ಎಂಥ ಚೆಂದವೋ
ಹೇ ದೇವ ಹೇ ದೇವ

ಸತ್ಯಧರ್ಮವೆಂಬ
ಜ್ಯೋತಿಯನ್ನಿರಿಸಿ ಬಾಳಿಗೆ
ತುಲಾಭಾರವೆಂಬ ತೂಕವನ್ನಿರಿಸಿ
ಗೊಂಬೆಯಾಗಿಸಿದೆ
ಎಂಥ ಚೆಂದವೋ
ಹೇ ದೇವ ಹೇ ದೇವ
ಮೂರೇ ದಿನದ ಜೋಗುಳದಲಿ
ನೋವುನಲಿವುಗಳ
ತೊಟ್ಟಿಲ ಕಟ್ಟಿ ತೂಗಿಸಿ
ಆಟವಾಡಿಸುತಿಹೆ
ಹೇ ದೇವ ಹೇ ದೇವ

ಬಣ್ಣಿಸಲಸದಳವೂ
ಹೇಗಾದರೂ ಸರಿಯೇ
ನೀನೇ ಜೀವನವೋ ನಮ್ಮ ಬಾಳಿಗೆ.
ಶಿವನು ಆಡಿಸಿದ ಡಮರುಗ
ಢಂ ಢಂ ಢಂ ಢಮರುಗ.
ನರ್ತಿಸಿತು ಭಾವತರಂಗ
ರುದ್ರರೂಪ ತಾಳ ಹಿಮ್ಮೇಳ
ಜೀವ ನರನಾಡಿಗಳು
ಓಂಕಾರ ಹೂಂಕಾರ
ನಾದರೂಪ ಜಗವ
ಆವರಿಸಿತು
ಮನನ ತನನ ತೋಂ ತನನ ||

ಧರೆಗೆ ಇಳಿದ
ಜಟಾಧಾರಿ ಆನಂದ
ಮಹದಾನಂದ ತ್ರಿನೇತ್ರಧಾರಿ
ತ್ರಿಪುರಾರಿ ವಿಶ್ವರೂಪಧಾರಿ ||

ಗಜಚರ್ಮಾಂಬರಧಾರಿ
ಸಚ್ಚಿದಾನಂದ ಸ್ವರೂಪ
ಮಹದೇವ ಮೂರುವರ
ಕೊಟ್ಟು ಸಲಹೆನ್ನ ಮುಕ್ಕಣ್ಣ ||

ಬಾರನ್ನ ಬಾಳು ಬಂಗಾರವಾಗಿಸು
ಶಂಭೋ ಲಿಂಗೈಕ್ಯ ಹಂಸರೂಪ
ಎನ್ನಯ್ಯ ರಕ್ಷಿಸೈ ಮುದದಿ
ನೂರು ವರುಷದಾ ಹಾದಿಯಲಿ ||

ಸುಗಮವಾಗಿಸೋ ದೇವ
ನಾರಾಯಣಾ ಆತ್ಮಜನೆ
ಶಿವಲಿಂಗ ಎನ್ನ ಅಂತರಂಗದಲಿ ನಿಲ್ಲಯ್ಯ
ಬಾರಯ್ಯ ಬಾರೋ ಎನ್ನಯ್ಯ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಬ್ಬಂದಿ
Next post ಹುಚ್ಚು

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…