ಹುಚ್ಚು

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’
‘ಯಾರು ನೀನು ಮರಿಯಾ?’
‘ನಾನು ರಾಣಿ | ನಾನು ರಾಣಿ |
ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’

ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’
‘ನೀನ ಯಾರು ಮರಿಯಾ?’
‘ಅಪ್ಪ ಗೊತ್ತಿಲ್ಲ, ಅಮ್ಮ ಗೊತ್ತಿಲ್ಲ, ಯಾಕೋ ತಿಳಿಯೆ
ನಾನು ಬಡವಿ.’

‘ಹಾಗಾದರೆ ಬಡ ಹುಡುಗಿ
ಎಲ್ಲರೂ ವಂದಿಸಬೇಕಾದ ರಾಣಿ ಆದದ್ದು ಹೇಗೆ?’
‘ಭಿಕ್ಷುಕಿ ಅಂದುಕೊಂಡದ್ದೇ ಬೇರೆ
ಈಗ ಆದದ್ದೇ ಬೇರೆ, ಅದಕ್ಕೇ.’
‘ಹಾಗಾದರೆ ನಿನ್ನ ಭ್ರಮೆ ನಿನ್ನ ಸಿಂಹಾನದ ಏರಿಸಿತೆ?
ನಿಜವೂ ನಿನಗನ್ನಿಸಿದ್ದೂ ಬೇರೆ ಆದದ್ದು ಯವಾಗ, ಹೇಗೆ?’

‘ಅವತ್ತು ರಾತ್ರಿ, ಅವತ್ತೊಂದೇ ದಿನ ರಾತ್ರಿ
ಎಲ್ಲರ ಕಣ್ಣಲ್ಲಿ ಬೇರೆ ಥರ ಕಂಡೆ ನಾನು
ಬೀದಿಯಲ್ಲಿ ನಡೆದಿದ್ದೆ
ನನ್ನೊಳಗೆ ಕಂಪಿಸುವ ತಂತಿಗಳು ಮಿಡಿದವು
ಮರಿಯಾ ಸಂಗೀತವಾದಳು, ಸಂಗೀತ…
ಅವರ ಹಾಡಿಗೆ ಕುಣಿದಳು,
ನೋಡಿದವರು ಹೆದರಿ
ಕಾಲು ನಿಂತಲ್ಲೇ ಬೇರು ಬಿಟ್ಟವು.
ರಾಣಿ ಮಾತ್ರ ಹೀಗೆ ನರ್ತಿಸುವ ಧೈರ್ಯ,
ಊರ ಬೀದಿಯಲ್ಲಿ ಕುಣಿಯುವ ಧೈರ್ಯ.’
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದೊಳಗಣ…
Next post ಬನ್ನಿ ಒಂದು ಹೃದಯವನ್ನು ತನ್ನಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…