ಹುಚ್ಚು

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’
‘ಯಾರು ನೀನು ಮರಿಯಾ?’
‘ನಾನು ರಾಣಿ | ನಾನು ರಾಣಿ |
ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’

ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’
‘ನೀನ ಯಾರು ಮರಿಯಾ?’
‘ಅಪ್ಪ ಗೊತ್ತಿಲ್ಲ, ಅಮ್ಮ ಗೊತ್ತಿಲ್ಲ, ಯಾಕೋ ತಿಳಿಯೆ
ನಾನು ಬಡವಿ.’

‘ಹಾಗಾದರೆ ಬಡ ಹುಡುಗಿ
ಎಲ್ಲರೂ ವಂದಿಸಬೇಕಾದ ರಾಣಿ ಆದದ್ದು ಹೇಗೆ?’
‘ಭಿಕ್ಷುಕಿ ಅಂದುಕೊಂಡದ್ದೇ ಬೇರೆ
ಈಗ ಆದದ್ದೇ ಬೇರೆ, ಅದಕ್ಕೇ.’
‘ಹಾಗಾದರೆ ನಿನ್ನ ಭ್ರಮೆ ನಿನ್ನ ಸಿಂಹಾನದ ಏರಿಸಿತೆ?
ನಿಜವೂ ನಿನಗನ್ನಿಸಿದ್ದೂ ಬೇರೆ ಆದದ್ದು ಯವಾಗ, ಹೇಗೆ?’

‘ಅವತ್ತು ರಾತ್ರಿ, ಅವತ್ತೊಂದೇ ದಿನ ರಾತ್ರಿ
ಎಲ್ಲರ ಕಣ್ಣಲ್ಲಿ ಬೇರೆ ಥರ ಕಂಡೆ ನಾನು
ಬೀದಿಯಲ್ಲಿ ನಡೆದಿದ್ದೆ
ನನ್ನೊಳಗೆ ಕಂಪಿಸುವ ತಂತಿಗಳು ಮಿಡಿದವು
ಮರಿಯಾ ಸಂಗೀತವಾದಳು, ಸಂಗೀತ…
ಅವರ ಹಾಡಿಗೆ ಕುಣಿದಳು,
ನೋಡಿದವರು ಹೆದರಿ
ಕಾಲು ನಿಂತಲ್ಲೇ ಬೇರು ಬಿಟ್ಟವು.
ರಾಣಿ ಮಾತ್ರ ಹೀಗೆ ನರ್ತಿಸುವ ಧೈರ್ಯ,
ಊರ ಬೀದಿಯಲ್ಲಿ ಕುಣಿಯುವ ಧೈರ್ಯ.’
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದೊಳಗಣ…
Next post ಬನ್ನಿ ಒಂದು ಹೃದಯವನ್ನು ತನ್ನಿ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…