ಹುಚ್ಚು

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’
‘ಯಾರು ನೀನು ಮರಿಯಾ?’
‘ನಾನು ರಾಣಿ | ನಾನು ರಾಣಿ |
ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’

ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’
‘ನೀನ ಯಾರು ಮರಿಯಾ?’
‘ಅಪ್ಪ ಗೊತ್ತಿಲ್ಲ, ಅಮ್ಮ ಗೊತ್ತಿಲ್ಲ, ಯಾಕೋ ತಿಳಿಯೆ
ನಾನು ಬಡವಿ.’

‘ಹಾಗಾದರೆ ಬಡ ಹುಡುಗಿ
ಎಲ್ಲರೂ ವಂದಿಸಬೇಕಾದ ರಾಣಿ ಆದದ್ದು ಹೇಗೆ?’
‘ಭಿಕ್ಷುಕಿ ಅಂದುಕೊಂಡದ್ದೇ ಬೇರೆ
ಈಗ ಆದದ್ದೇ ಬೇರೆ, ಅದಕ್ಕೇ.’
‘ಹಾಗಾದರೆ ನಿನ್ನ ಭ್ರಮೆ ನಿನ್ನ ಸಿಂಹಾನದ ಏರಿಸಿತೆ?
ನಿಜವೂ ನಿನಗನ್ನಿಸಿದ್ದೂ ಬೇರೆ ಆದದ್ದು ಯವಾಗ, ಹೇಗೆ?’

‘ಅವತ್ತು ರಾತ್ರಿ, ಅವತ್ತೊಂದೇ ದಿನ ರಾತ್ರಿ
ಎಲ್ಲರ ಕಣ್ಣಲ್ಲಿ ಬೇರೆ ಥರ ಕಂಡೆ ನಾನು
ಬೀದಿಯಲ್ಲಿ ನಡೆದಿದ್ದೆ
ನನ್ನೊಳಗೆ ಕಂಪಿಸುವ ತಂತಿಗಳು ಮಿಡಿದವು
ಮರಿಯಾ ಸಂಗೀತವಾದಳು, ಸಂಗೀತ…
ಅವರ ಹಾಡಿಗೆ ಕುಣಿದಳು,
ನೋಡಿದವರು ಹೆದರಿ
ಕಾಲು ನಿಂತಲ್ಲೇ ಬೇರು ಬಿಟ್ಟವು.
ರಾಣಿ ಮಾತ್ರ ಹೀಗೆ ನರ್ತಿಸುವ ಧೈರ್ಯ,
ಊರ ಬೀದಿಯಲ್ಲಿ ಕುಣಿಯುವ ಧೈರ್ಯ.’
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದೊಳಗಣ…
Next post ಬನ್ನಿ ಒಂದು ಹೃದಯವನ್ನು ತನ್ನಿ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys