Home / ಕಥೆ / ಸಣ್ಣ ಕಥೆ / ಹೆಗ್ಗಡದೇವನಕೋಟೆ

ಹೆಗ್ಗಡದೇವನಕೋಟೆ

ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು.

ಆ ಕೋಟೆಯ ಯಜಮಾನನಾಗಿದ್ದ ಚನ್ನರಾಜಒಡೆಯನೆಂಬಾತನು ಆಗ ಕೋಟೆಯಲ್ಲಿರಲಿಲ್ಲ. ತನ್ನ ಸೈನ್ಯವನ್ನು ತೆಗೆದುಕೊಂಡು ದೂರವಾಗಿ ಹೋಗಿದ್ದರು. ಮೈಸೂರಿನ ದಳವು ಕೋಟೆಯನ್ನು ಮುತ್ತಿದಾಗ ಕೋಟೆಯ ಒಳಗಿದ್ದವರು ನಿಸ್ಸಹಾಯರಾಗಿದ್ದರು. ಅವರ ಕಡೆಯ ವಕೀಲನು ಅತಿಸಾಧುವಾಗಿದ್ದನು; ಆತನು ಕಾಣಿಸಿಕೊಂಡು “ನಮ್ಮ ಒಡೆಯರವರು ಸೈನ್ಯವನ್ನು ಕರೆದುಕೊಂಡು ದೂರದೇಶದಲ್ಲಿದ್ದಾರೆ. ರಾಣಿಯವರು ಗರ್ಭಿಣಿಯಾಗಿದ್ದಾರೆ ಮತ್ತು ನಿಮ್ಮ ಮುತ್ತಿಗೆಯಿಂದ ಬಹಳ ಗಾಬರಿಪಟ್ಟಿದ್ದಾರೆ. ಕೋಟೆಯಲ್ಲಿರುವವರು ೫೦ ಸೈನಿಕರು ಮಾತ್ರ. ಅಲ್ಲದೆ ದಕ್ಷಿಣಮುಖಕ್ಕೂ ಪೂರ್ವಮುಖಕ್ಕೂ ಮಳೆಗಾಲದ ಹಾವಳಿಯಿಂದ ಪೌಳಿಗೋಡೆಯು ಹಾಳಾಗಿದೆ. ಇಂತಹ ಸಮಯದಲ್ಲಿ ತೀವ್ರ ಬಂದು ಮುತ್ತುವುದು ಧರ್ಮವಲ್ಲ” ಎಂದು ಹೇಳಿದನು. ಮೈಸೂರಿನವರು ಕೊಳ್ಳೆಯನ್ನು ದಕ್ಕಿಸಿಕೊಂಡು ಹಿಂತಿರುಗಿದರು.
*****
[ವಿಲ್ಕ್ಸ್, ಸಂ. ೧ ಪುಟ ೨೯]

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...