Home / ಕವನ / ಅನುವಾದ / ಮರುಸೃಷ್ಟಿ

ಮರುಸೃಷ್ಟಿ

ಮೂಲ: ವಿಷ್ಣು ಡೇ

ನರಕ ಹೊರಕ್ಕೆ ಬರಲಿ, ಪಾಪಲೋಕ
ತಾಪದಿಂದ ಬಿಡುಗಡೆಯಾಗಲಿ;
ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ
ಕುಂತೀಪುತ್ರನ ಹಾಗೆ
ಶುದ್ದಿಲೋಕದ ಕಡೆಗೆ ಸಾಗಲಿ.

ಪಯಣಕ್ಕೆ ಜೊತೆಗಾರ ಅಪರಿಚಿತ ನಾಯಿ,
ಸತತ ಅನ್ವೇಷಣೆಯ ದಾರಿಯುದ್ದಕ್ಕೂ
ರಕ್ತ ಬಸಿಯುವ ಹೆಜ್ಜೆ;
ಹೆಜ್ಜೆ ಹೆಜ್ಜೆಗು ಕಾಟ ಕೊಡುವ ಹಮ್ಮು
ಆದರೂ ಸಾಗಿದೆ ಹೇಗೋ ಪಯಣ.

ಕತ್ತಿಯಲುಗಿನ ಮೇಲೆ ನಡೆವ ಪಯಣ ಘೋರ ವ್ರತಕ್ಕೆ ಬದ್ಧ
ಕೂಗಿ ಕರೆಯುತ್ತಾರೆ ತಾಯಿ, ಪತ್ನಿ, ಜೊತೆಗೆ
ಬೆನ್ನಲ್ಲಿ ಬಿದ್ದ ಸೋದರರು,
ಎಲ್ಲವೂ ವ್ಯರ್ಥ.
ತನ್ನ ಪಾಪವ ತಾನೇ ತೇದು ಸಮೆಸುತ್ತ
ದಾರಿ ಕರಗಿಸಬೇಕು ಆ ರಾಜಗೂಲಿ.

ಬಿದ್ದ ಹಿಮವನ್ನೆಲ್ಲ ಬದಿಗೆ ತಳ್ಳುತ್ತ
ನರಕದ ಕುದಿಬಾಣಲೆಗೆ ಎಲ್ಲರೆದುರೇ ತನ್ನ ತಲೆಯನ್ನೆತ್ತಿ
ಮರ್ತ್ಯರ ಜಗತ್ತಿನಲ್ಲೇ ತಾನು ಸಾಗುತ್ತ
ಚಿಂತಿಸುತ್ತಾನೆ ಅವನು;
ಸ್ವಂತದ ಸ್ವರ್ಗವನ್ನು ಸಾವಿನ ಕದದವರೆಗೆ
ಮರುಸೃಷ್ಟಿಸಿದ ಹಾಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...