Home / ಕವನ / ಅನುವಾದ / ಮರುಸೃಷ್ಟಿ

ಮರುಸೃಷ್ಟಿ

ಮೂಲ: ವಿಷ್ಣು ಡೇ

ನರಕ ಹೊರಕ್ಕೆ ಬರಲಿ, ಪಾಪಲೋಕ
ತಾಪದಿಂದ ಬಿಡುಗಡೆಯಾಗಲಿ;
ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ
ಕುಂತೀಪುತ್ರನ ಹಾಗೆ
ಶುದ್ದಿಲೋಕದ ಕಡೆಗೆ ಸಾಗಲಿ.

ಪಯಣಕ್ಕೆ ಜೊತೆಗಾರ ಅಪರಿಚಿತ ನಾಯಿ,
ಸತತ ಅನ್ವೇಷಣೆಯ ದಾರಿಯುದ್ದಕ್ಕೂ
ರಕ್ತ ಬಸಿಯುವ ಹೆಜ್ಜೆ;
ಹೆಜ್ಜೆ ಹೆಜ್ಜೆಗು ಕಾಟ ಕೊಡುವ ಹಮ್ಮು
ಆದರೂ ಸಾಗಿದೆ ಹೇಗೋ ಪಯಣ.

ಕತ್ತಿಯಲುಗಿನ ಮೇಲೆ ನಡೆವ ಪಯಣ ಘೋರ ವ್ರತಕ್ಕೆ ಬದ್ಧ
ಕೂಗಿ ಕರೆಯುತ್ತಾರೆ ತಾಯಿ, ಪತ್ನಿ, ಜೊತೆಗೆ
ಬೆನ್ನಲ್ಲಿ ಬಿದ್ದ ಸೋದರರು,
ಎಲ್ಲವೂ ವ್ಯರ್ಥ.
ತನ್ನ ಪಾಪವ ತಾನೇ ತೇದು ಸಮೆಸುತ್ತ
ದಾರಿ ಕರಗಿಸಬೇಕು ಆ ರಾಜಗೂಲಿ.

ಬಿದ್ದ ಹಿಮವನ್ನೆಲ್ಲ ಬದಿಗೆ ತಳ್ಳುತ್ತ
ನರಕದ ಕುದಿಬಾಣಲೆಗೆ ಎಲ್ಲರೆದುರೇ ತನ್ನ ತಲೆಯನ್ನೆತ್ತಿ
ಮರ್ತ್ಯರ ಜಗತ್ತಿನಲ್ಲೇ ತಾನು ಸಾಗುತ್ತ
ಚಿಂತಿಸುತ್ತಾನೆ ಅವನು;
ಸ್ವಂತದ ಸ್ವರ್ಗವನ್ನು ಸಾವಿನ ಕದದವರೆಗೆ
ಮರುಸೃಷ್ಟಿಸಿದ ಹಾಗೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...