ತಿದ್ದಲಾರದ ಭೂತ

ತಿದ್ದಲಾರದ ನಿನ್ನೆ ಕಾಣಲಾರದ ನಾಳೆ
ಇದ್ದರೂ ಇರದಂಥ ವರ್‍ತಮಾನ
ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ
ಮರಳದಿದ್ದರು ಮರಳಿದಂಥ ಅನುಮಾನ

ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು
ಬೇಕೆಂದು ಬೇಡಿದರು ತಡೆವ ವಿಸ್ಮೃತಿಗಳು
ಕ್ಷಣ ಕೂಡ ನಿಂತಲ್ಲಿ ನಿಲ್ಲಲಾರದ ಮನ
ಯುಗವ ಹಿಡಿಯಲು ಹೋಗಿ ಮುಗಿವಂಥ ಕ್ಷಣ

ಈಗ ಬರದೆಂದರೆ ಬಂದೆಬಿಡುವುದು
ಈಗ ಬರುವುದೆಂದರೆ ಬರದೆ ಇರುವುದು
ಈಗಲೋ ಆಗಲೋ ಒಮ್ಮೆ ಸುರುವಾದುದು
ಅದರ ಕಾಲಕ್ಕೆ ಅದು ಮುಗಿಯದೆ ಇರದು

ಸಿದ್ಧವಾಗಿರು ಸದಾ ಎಂದವರು ಯಾರು
ಪಕ್ವವಾಗಿರು ಸದಾ ಎಂದವರೆ ಅವರು
ಮಾಗಿಯೋ ಸುಗ್ಗಿಯೋ ದಿನ ದಿನವು ನೀ
ಮಧುರವಾಗಿಯೆ ಇರು ಎನ್ನುವರು

ದಿವ್ಯತೆಯ ಮುಹೂರ್ತವ ಹುಡುಕಿ
ಹೋಗುವುದು ಇನ್ನೆಲ್ಲಿಗೆ
ಗಿಡದಲ್ಲಿ ಮುಡಿಯಲ್ಲಿ ಎಲ್ಲಿಯೇ ಇದ್ದರೂ
ಅರಳದಿರುವುದೆ ಸಂಜೆ ಮಲ್ಲಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು
Next post ಆಶಾಕಿರಣ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…