ಆಶಾಕಿರಣ

ಇತಿಹಾಸದ ಪುಟಪುಟಗಳಲ್ಲಿ
ಸಾವು, ನೋವು, ರಕ್ತ
ಮಾನವರ ಬೇಟೆ ನರಮೇಧ
ಸಾವಿನ ಬಾಯಿಗೆ ಬಲಿಯಾದವರು,
ಉಳಿದು ಊನರಾಗಿ ಭಾರವಾದವರು,
ತೋಪಿನ ಬಾಯಿಗೆ ಎದೆಕೊಟ್ಟು
ವೀರ ಪಟ್ಟವ ಪಡೆದು
ಸ್ವಾತಂತ್ರ್ಯಕ್ಕಾಗಿ ಹಗಲಿರುಳೂ
ಹಂಬಲಿಸಿ ಮಣ್ಣಾದವರು.
ಇವರ ಹೆಂಗಸರಿಗೆ ಉಳಿದದ್ದು
ವಿಧವೆಯರ ಪಟ್ಟ
ಹಸಿವು ದಾರಿದ್ರ್ಯಗಳ ನರ್ತನ,
ಜಾತಿ-ಮತಗಳ ಮತ್ಸರ
ದುಷ್ಟ ಶಕ್ತಿಗಳ ಕೈವಾಡ
ಆಂತರಿಕ ಭಯ
ಅಭದ್ರತೆಯ ಕಾಟ
ಅಸಹಾಯಕ ಜನತೆಯನು
ಬಲಿಕೊಡುವ ಕಸಾಯಿಗಳ
ಕೈಯಿಂದ ಜನರನು
ಹೇಗೆ ಉಳಿಸಿಕೊಳ್ಳಲಿ?

ನನ್ನವರೆ ಒಂದಾಗಿರಿ
ಹಿಂದಿನವರ ತ್ಯಾಗ
ಬಲಿದಾನಗಳ ನೆನೆದು
ಸಾಮ್ರಾಜ್ಯಶಾಹಿಗಳ ಸೊಕ್ಕಡಗಿಸಲು
ಪಟ್ಟಭದ್ರರ – ಕುಟಿಲ ತಂತ್ರಗಳನ್ನು
ಹುಸಿಗೊಳಿಸಲು ಒಂದಾಗಿರಿ
ದೇಶದ ಮೇಲೆ ಹರಡಿದ
ಕಪ್ಪು ಕತ್ತಲೆಯ ಸರಿಸಲು
ಬೆಳಕಿನ ಆಶಾಕಿರಣವಾಗಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿದ್ದಲಾರದ ಭೂತ
Next post ತಾಯಿಯ ಒಲವು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys