Home / ಕಥೆ / ಕಾದಂಬರಿ / ಮಲ್ಲಿ – ೧೩

ಮಲ್ಲಿ – ೧೩

ಬರೆದವರು: Thomas Hardy / Tess of the d’Urbervilles

ರಾಜಕುಮಾರನು ಹೊರಟು ಹೋಗಿ ಇನ್ನೂ ಹದಿನೈದು ದಿನ ವಾಗಿಲ್ಲ. ನಾಯಕನು ಊಟ ಮುಗಿಸಿಕೊಂಡು ದಿವಾನಖಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹೆಚ್ಚಿದ ಗೋಡಂಬಿ, ಎರಡೂ ತಟ್ಟಿಯಲ್ಲಿ ಎದುರಿಗಿವೆ. ಪೊಸ್ಟ್ ಬಂತು ಎಂದು ಮನೆವಾರ್ತೆ ನಂಜಪ್ಪನು ಬಂದು ಉದ್ದದ ಕವರುಗಳನ್ನು ತಂದಿಟ್ಟ. ಒಂದರ ಮೇಲೆ “ಹಿಸ್ ಮೆಜಸ್ಟ್ರೀಸ್ ಸರ್ವಿಸ್ ಎಂದಿದೆ.’ ಇನ್ನೊಂದರ ಮೇಲೆ “ಆನ್ ಮೈಸೂರ್ ಗವರ್ನ್ಮೆಂಟ್ ಸರ್ವಿಸ್’ ಎಂದಿದೆ ಎರಡೂ ಕಾನ್ಫಿಡೆನ್ಷಿಯಲ್ ಎಂದು ಗುರ್ತು ಆಗಿವೆ. ನಂಜಪ್ಪನು ನಾಯಕನ ಅಪ್ಪಣೆಯಿಂದ ಅವೆರಡನ್ನೂ ಒಡೆದನು. ಒಂದರಲ್ಲಿ “ವೈಸ್ರಾಯರು ತಮಗೆ ರಾವ್ಬಹದ್ದೂರು ಬಿರುದು ದಯಪಾಲಿಸಿದ್ದಾರೆ ಎಂದಿತ್ತು. ಮತ್ತೊಂದರಲ್ಲಿ “ಶ್ರೀಮನ್ಮಹಾರಾಜರು ತಮ್ಮನ್ನು ಈ ಸಲದ ವರ್ಧಂತಿಯ ದರ್ಬಾರಿಗೆ ಆಹ್ವಾನಿಸಬೇಕೆಂದು ವಿಶೇಷವಾದ ಅಪ್ಪಣೆ ಯನ್ನು ದಯಪಾಲಿಸಿದ್ದಾರೆ. ದರ್ಬಾರ್ ಭಕ್ಷಿ” ಎಂದಿತ್ತು.

ನಾಯಕನು ಆ ಕಾಗದಗಳನ್ನು ನೋಡುತ್ತಿರುವಾಗಲೇ ಮಲ್ಲ ಣ್ಣನೂ ಓಡಿ ಬಂದ: “ಬುದ್ಧಿ ತಮ್ಮ ಕರುಣ” ಎಂದು ಒಂದು ಕಾಗದವನ್ನು ತಂದು ಮುಂದಿಟ್ಟು ಅಡ್ಡ ಬಿದ್ದ.

ನಾಯಕನು “ಏನದು? ಮುಲಣ್ಣ ” ಎಂದು ಕೇಳಿದ.

“ಬುದ್ದಿ, ಅರಮನೆಯಿಂದ. ನಿರೂಪ ಬಂದದೆ. ಮಲ್ಲೀಗೆ ತಿಂಗಳಿಗೆ ಹತ್ತು ರೂಪಾಯಿ ಇನ್ನು ಹತ್ತು ವರುಷ ಕೊಡುತೀವಿ ಅಂತೆ ಬರದದೆ ಪಾದ!”

“ಯಾಕಂತೆ?”

” ಓದಿಸೋಕಂತೆ ಪಾದ!”

ನಾಯಕನಿಗೆ ಆ ದಿನದಮಾತು ನೆನೆಪಾಯಿತು. * ಸಂತೋಷ ಕಣಪ್ಪ ! ನಿಮ್ಮ ಮಲ್ಲಿ ಏನಂತಾಳೆ?

“ಮಲ್ಲಿ ಅಂತಾಳೆ. ಬುದ್ದಿಯೋರು ನನ್ನ ತೊಡೇಮೇಲೆ ಕೂರಿಸಿ ಕೊಂಡರು. “ಆದಕ್ಕೆ ಇದೆಲ್ಲಾ: ಬುದ್ಧಿಯೋರ ಮನೆಗೇ ಹೋಯ್ತೀನಿ ಅಂತಾಳೆ. ”

“ಹಂಗಾದರೂ ಮಾಡು. ಹೋಗಲಿ, ”

“ಮಲ್ಲಿ ಎನಾದರೂ ಗಂಡುಮೊಗವಾ ? ಎಂದಾದರೂ ಯಾರ ಮನೆಗಾದರೂ ಕಳಸಲೇಬೇಕು. ಪಾದ!”

ಆ ಮಾತಿನಲ್ಲಿ ನಾಯಕನಿಗೆ ಏನೋ ಸಂತೋಷವಾಯಿತು. ಆದರೂ “ಇನ್ನೇನು ಮಲ್ಲಣ್ಣ ಹೋಗಿ ಮಲ್ಲೇಗೌಡನಾದೆಯಲ್ಲೋ ! ಅರಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ! ಯಾರಿಗುಂಟು ಯಾರಿಗಿಲ್ಲ! ಏನು ನಂಜಪ್ಟ್ಪ !”

“ಹೌದು ಬುದ್ದಿ; ರೂಪಾಯಿಗಿಂತ ಅರಮನೆ ಮರ್ಯಾದೆ ! ಅದು ನಿಜವಾಗಿಯೂ ಒಳ್ಳೇ ನಸೀಬು!”

“ನಾವು ಆ ಅರಮನೆ ಕಾಣೋ! ನಾವು ಕಂಡಿರೋದು ಈ ಅರಮನೆ! ಮಲ್ಲಿ ಹಣೆಬರೆಹ ಚೆನ್ನಾಗಿದ್ದು, ಬುದ್ದಿಯವರು ನಮ್ಮನ್ನ ಕಣ್ಣು ಬಿಟ್ಟು ನೋಡಿದರೆ, ಮಲ್ಲೀಗೆ ಈ ಹತ್ತು ರೂಪಾಯೇನಾ! ಒಂದು ಅರಮನೆ ಆಗೋಳಿಲ್ವಾ ?”

ಆ ಮಾತು ಕೇಳಿ ನಾಯಕನಿಗೆ ಏನೋ ಒಳಗೆ ಗುಟ್ಟಾಗಿ ಬೆಕ್ಕು ಕೆರೆದ ಹಾಗಾಯಿತು. “ಯಾವಾಗ ಇವನು ನನ್ನ ಮನಸ್ಸಿ ನಲ್ಲಿರುವುದನ್ನು ಕಂಡು ಕೊಂಡನೋ!” ಎಂದು ಕೊಂಚ ಗಾಬರಿಯಾಯಿತು. ಆದರೆ ಆ ಗಾಬರಿ ನಾಯಕನ ಮನಸ್ಸಿನ ಧೀರ ತನದಲ್ಲಿ ಗಂಗೆಯಲ್ಲಿ ತೇಲಿದ ಇಂಗಿನಂತಾಯಿತು. *****
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...