Home / ಕಥೆ / ಕಾದಂಬರಿ / ಮಲ್ಲಿ – ೧೩

ಮಲ್ಲಿ – ೧೩

ಬರೆದವರು: Thomas Hardy / Tess of the d’Urbervilles

ರಾಜಕುಮಾರನು ಹೊರಟು ಹೋಗಿ ಇನ್ನೂ ಹದಿನೈದು ದಿನ ವಾಗಿಲ್ಲ. ನಾಯಕನು ಊಟ ಮುಗಿಸಿಕೊಂಡು ದಿವಾನಖಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹೆಚ್ಚಿದ ಗೋಡಂಬಿ, ಎರಡೂ ತಟ್ಟಿಯಲ್ಲಿ ಎದುರಿಗಿವೆ. ಪೊಸ್ಟ್ ಬಂತು ಎಂದು ಮನೆವಾರ್ತೆ ನಂಜಪ್ಪನು ಬಂದು ಉದ್ದದ ಕವರುಗಳನ್ನು ತಂದಿಟ್ಟ. ಒಂದರ ಮೇಲೆ “ಹಿಸ್ ಮೆಜಸ್ಟ್ರೀಸ್ ಸರ್ವಿಸ್ ಎಂದಿದೆ.’ ಇನ್ನೊಂದರ ಮೇಲೆ “ಆನ್ ಮೈಸೂರ್ ಗವರ್ನ್ಮೆಂಟ್ ಸರ್ವಿಸ್’ ಎಂದಿದೆ ಎರಡೂ ಕಾನ್ಫಿಡೆನ್ಷಿಯಲ್ ಎಂದು ಗುರ್ತು ಆಗಿವೆ. ನಂಜಪ್ಪನು ನಾಯಕನ ಅಪ್ಪಣೆಯಿಂದ ಅವೆರಡನ್ನೂ ಒಡೆದನು. ಒಂದರಲ್ಲಿ “ವೈಸ್ರಾಯರು ತಮಗೆ ರಾವ್ಬಹದ್ದೂರು ಬಿರುದು ದಯಪಾಲಿಸಿದ್ದಾರೆ ಎಂದಿತ್ತು. ಮತ್ತೊಂದರಲ್ಲಿ “ಶ್ರೀಮನ್ಮಹಾರಾಜರು ತಮ್ಮನ್ನು ಈ ಸಲದ ವರ್ಧಂತಿಯ ದರ್ಬಾರಿಗೆ ಆಹ್ವಾನಿಸಬೇಕೆಂದು ವಿಶೇಷವಾದ ಅಪ್ಪಣೆ ಯನ್ನು ದಯಪಾಲಿಸಿದ್ದಾರೆ. ದರ್ಬಾರ್ ಭಕ್ಷಿ” ಎಂದಿತ್ತು.

ನಾಯಕನು ಆ ಕಾಗದಗಳನ್ನು ನೋಡುತ್ತಿರುವಾಗಲೇ ಮಲ್ಲ ಣ್ಣನೂ ಓಡಿ ಬಂದ: “ಬುದ್ಧಿ ತಮ್ಮ ಕರುಣ” ಎಂದು ಒಂದು ಕಾಗದವನ್ನು ತಂದು ಮುಂದಿಟ್ಟು ಅಡ್ಡ ಬಿದ್ದ.

ನಾಯಕನು “ಏನದು? ಮುಲಣ್ಣ ” ಎಂದು ಕೇಳಿದ.

“ಬುದ್ದಿ, ಅರಮನೆಯಿಂದ. ನಿರೂಪ ಬಂದದೆ. ಮಲ್ಲೀಗೆ ತಿಂಗಳಿಗೆ ಹತ್ತು ರೂಪಾಯಿ ಇನ್ನು ಹತ್ತು ವರುಷ ಕೊಡುತೀವಿ ಅಂತೆ ಬರದದೆ ಪಾದ!”

“ಯಾಕಂತೆ?”

” ಓದಿಸೋಕಂತೆ ಪಾದ!”

ನಾಯಕನಿಗೆ ಆ ದಿನದಮಾತು ನೆನೆಪಾಯಿತು. * ಸಂತೋಷ ಕಣಪ್ಪ ! ನಿಮ್ಮ ಮಲ್ಲಿ ಏನಂತಾಳೆ?

“ಮಲ್ಲಿ ಅಂತಾಳೆ. ಬುದ್ದಿಯೋರು ನನ್ನ ತೊಡೇಮೇಲೆ ಕೂರಿಸಿ ಕೊಂಡರು. “ಆದಕ್ಕೆ ಇದೆಲ್ಲಾ: ಬುದ್ಧಿಯೋರ ಮನೆಗೇ ಹೋಯ್ತೀನಿ ಅಂತಾಳೆ. ”

“ಹಂಗಾದರೂ ಮಾಡು. ಹೋಗಲಿ, ”

“ಮಲ್ಲಿ ಎನಾದರೂ ಗಂಡುಮೊಗವಾ ? ಎಂದಾದರೂ ಯಾರ ಮನೆಗಾದರೂ ಕಳಸಲೇಬೇಕು. ಪಾದ!”

ಆ ಮಾತಿನಲ್ಲಿ ನಾಯಕನಿಗೆ ಏನೋ ಸಂತೋಷವಾಯಿತು. ಆದರೂ “ಇನ್ನೇನು ಮಲ್ಲಣ್ಣ ಹೋಗಿ ಮಲ್ಲೇಗೌಡನಾದೆಯಲ್ಲೋ ! ಅರಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ! ಯಾರಿಗುಂಟು ಯಾರಿಗಿಲ್ಲ! ಏನು ನಂಜಪ್ಟ್ಪ !”

“ಹೌದು ಬುದ್ದಿ; ರೂಪಾಯಿಗಿಂತ ಅರಮನೆ ಮರ್ಯಾದೆ ! ಅದು ನಿಜವಾಗಿಯೂ ಒಳ್ಳೇ ನಸೀಬು!”

“ನಾವು ಆ ಅರಮನೆ ಕಾಣೋ! ನಾವು ಕಂಡಿರೋದು ಈ ಅರಮನೆ! ಮಲ್ಲಿ ಹಣೆಬರೆಹ ಚೆನ್ನಾಗಿದ್ದು, ಬುದ್ದಿಯವರು ನಮ್ಮನ್ನ ಕಣ್ಣು ಬಿಟ್ಟು ನೋಡಿದರೆ, ಮಲ್ಲೀಗೆ ಈ ಹತ್ತು ರೂಪಾಯೇನಾ! ಒಂದು ಅರಮನೆ ಆಗೋಳಿಲ್ವಾ ?”

ಆ ಮಾತು ಕೇಳಿ ನಾಯಕನಿಗೆ ಏನೋ ಒಳಗೆ ಗುಟ್ಟಾಗಿ ಬೆಕ್ಕು ಕೆರೆದ ಹಾಗಾಯಿತು. “ಯಾವಾಗ ಇವನು ನನ್ನ ಮನಸ್ಸಿ ನಲ್ಲಿರುವುದನ್ನು ಕಂಡು ಕೊಂಡನೋ!” ಎಂದು ಕೊಂಚ ಗಾಬರಿಯಾಯಿತು. ಆದರೆ ಆ ಗಾಬರಿ ನಾಯಕನ ಮನಸ್ಸಿನ ಧೀರ ತನದಲ್ಲಿ ಗಂಗೆಯಲ್ಲಿ ತೇಲಿದ ಇಂಗಿನಂತಾಯಿತು. *****
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...