ಆತ್ಮ ವಿಶ್ವಾಸ

ಬಂದಿದೆ ನಾ ನೀಗ ಪಾರ್‍ಥ ಸಾರಥಿ
ಎನ್ನಲಿ ತುಂಬಿದೆ ದೋಷರಾಶಿ
ಕ್ಷಣ ಕ್ಷಣ ಎನ್ನನ್ನು ಪರಕಿಸದಿರು
ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ

ಪ್ರಪಂಚದ ಈ ಬೆಂಗಾಡಿನಲಿ
ಚೊಕ್ಕ ಚಿನ್ನವಾಗಿ ಬದುಕುಲುಂಟೆ
ಅಂಗದ ಇಂಚಿ ಇಂಚಿನಲಿ ಕಪ್ಪು ಚಿಪ್ಪು
ನಾನು ಪಾವಿತ್ರ್ಯನೆಂದು ಹೇಳಲುಂಟೆ

ಹೆಣ್ಣು ಹೊನ್ನು ಮಣ್ಣು ಮಾಯೆ
ಆಸೆ ಗೂಡು ಕಟ್ಟಿವೆ ಅದರ ಮೇಲೆ
ನೀ ತೋರಿದ ದಾರಿಯಲಿ ನಡೆದಾದರೆ
ಅದು ನಿನ್ನ ಕೃಪೆ ತೋರಿದ ಮೇಲೆ

ನನ್ನ ಬದುಕು ಮುನ್ನವು ಕತ್ತಲು
ನನ್ನ ಬದುಕಿನಾಚೆಗೆ ಬರೀ ತಮಸು
ವರ್‍ತಮಾನ ನನಗಾಗಲಿ ನಿರ್‍ಭಾವ
ಸಾಧನೆ ಸಮಾಧಿಯಲಿ ಇರಲಿ ಹುಮ್ಮಸು

ಕೈ ಮೇಲೆತ್ತಿ ನಾನು ಶರಣು ಬಂದೆಹೆನು
ದೋಷಗಳಣಿಸುತ್ತ ಆಚೆ ದೂಡದಿರು
ನೀನು ಕೃಪಾ ಸಾಗರ ಹರಿಸು ಗೋವಿಂದ
ಮಾಣಿಕ್ಯ ವಿಠಲನಾಗಿ ದೂರ ಮಾಡದಿರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೫
Next post ಮಲ್ಲಿ – ೧೩

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…