ಸಂಜೆಯ ಸ್ವಗತ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

ಯಾರದೋ ಹೋಮ
ವೈವಾಹಿಕದ ಧೂಮದಲಿ
ಸೂರೆ ಹೋದುದು ರಾಗವು
ವರ್ಣರಂಜಿತ ಕದಪು
ಯಾರಿಗೋ ನೈವೇದ್ಯ
ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

ಮೋಡ ನಿಲ್ಲುವುದಿಲ್ಲ
ಹನಿಯ ಚೆಲ್ಲುವುದಿಲ್ಲ
ಟಿಸಿಲೊಡೆಯದೆಂದೆಂದು ಕವನ
ಹೂವೆ ಅರಳದು ಇಲ್ಲಿ
ಮಕರಂದವೆಲ್ಲಿಂದ
ಹಾರೀತು ಎಲ್ಲಿ ಭ್ರಮರ?

೨೦೦೩
*****

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವ ಕೊಂದ ಮಗು
Next post ಕೋಟೆ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys