ಸಂಜೆಯ ಸ್ವಗತ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

ಯಾರದೋ ಹೋಮ
ವೈವಾಹಿಕದ ಧೂಮದಲಿ
ಸೂರೆ ಹೋದುದು ರಾಗವು
ವರ್ಣರಂಜಿತ ಕದಪು
ಯಾರಿಗೋ ನೈವೇದ್ಯ
ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

ಮೋಡ ನಿಲ್ಲುವುದಿಲ್ಲ
ಹನಿಯ ಚೆಲ್ಲುವುದಿಲ್ಲ
ಟಿಸಿಲೊಡೆಯದೆಂದೆಂದು ಕವನ
ಹೂವೆ ಅರಳದು ಇಲ್ಲಿ
ಮಕರಂದವೆಲ್ಲಿಂದ
ಹಾರೀತು ಎಲ್ಲಿ ಭ್ರಮರ?

೨೦೦೩
*****

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವ ಕೊಂದ ಮಗು
Next post ಕೋಟೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…