ನೋವಿನ ಹಾಡು

ಕಛೇರಿ ಎದುರು ಹೆದ್ದಾರಿ ಪಕ್ಕದಲಿ
ಇತಿಹಾಸವಿದ್ದ ಮಾಮರವೊಂದು
ಬೆಳೆದಿತ್ತು ಆಗಸದೆತ್ತರ;
ಚಳಿ ಮಳೆ ಗಾಳಿಗಲುಗದೇ
ಸಹಸ್ರಾರು ಜೀವಿಗಳಿಗದು
ನೀಡಿತ್ತು ಆಶ್ರಯ,
ಹೊರಹಾಕಿದ ಪ್ರಾಣವಾಯುವಿನ
ತೂಕ ಅದೆಷ್ಟೋ?

ಇದ್ದಕ್ಕಿದ್ದ ಹಾಗೆ
ಕನಸಿನಲಿ ಎಲ್ಲೋ ಏಟು ಬಿದ್ದ ಹಾಗೆ
ನಾಲ್ಕಾರು ಕಾವುಗಳ ಏಟು
ಏಟುಗಳಿಂದ ಕಟ ಕಟ
ನೋವಿನ ದನಿ ಹೊಮ್ಮುತ್ತಿತ್ತು
ಪ್ರತಿ ಏಟಿಗೂ
ಕಾವು ಪುಟಿಯುತ್ತಿತ್ತು

ಮಾಮರವು
ನರಳುತಿತ್ತು ನಲಗುತಿತ್ತು
ಕಣ್ಣೀರು ಸುರಿಸುತ್ತಿತ್ತು

ಆ ನೋವಿನಲಿ
ಎನ್ನನ್ನುಳಿಸಿ ಕಾಪಾಡಿರೋ
ಎಂದು ದನಿ ಉಕ್ಕುತಿತ್ತು
ಆ ದನಿಯ ಪ್ರತಿಧ್ವನಿ
ಕಛೇರಿ ಸೌಧಕ್ಕೆ ಅಪ್ಪಳಿಸುತಿತ್ತು

ಆದರೇನು?
ಕಿವಿಯಿಲ್ಲದಾ ಕಣ್ಣಿಲ್ಲದಾ
ಕುರುಡು ಕಾಂಚಾಣದಾ
ಕುರ್ಚಿಗಳಿಗೆ ಈ ಆಕ್ರಂದನ ಕೇಳಿಸದಾಯಿತು

ಆ ದನಿಯ ನೋವಿನ ಹಾಡು
ಗಾಳಿಯಲಿ ಲೀನವಾಗುವುದಷ್ಟೇ.
*****
೧೧-೦೫-೨೦೦೩
ಮಣ್ಣಿನವಾಸನೆ ವಾರಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೧
Next post ಕಾದು ಕುಳಿತ ಪೆಣತಿನಿಗಳು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…