ನೋವಿನ ಹಾಡು

ಕಛೇರಿ ಎದುರು ಹೆದ್ದಾರಿ ಪಕ್ಕದಲಿ
ಇತಿಹಾಸವಿದ್ದ ಮಾಮರವೊಂದು
ಬೆಳೆದಿತ್ತು ಆಗಸದೆತ್ತರ;
ಚಳಿ ಮಳೆ ಗಾಳಿಗಲುಗದೇ
ಸಹಸ್ರಾರು ಜೀವಿಗಳಿಗದು
ನೀಡಿತ್ತು ಆಶ್ರಯ,
ಹೊರಹಾಕಿದ ಪ್ರಾಣವಾಯುವಿನ
ತೂಕ ಅದೆಷ್ಟೋ?

ಇದ್ದಕ್ಕಿದ್ದ ಹಾಗೆ
ಕನಸಿನಲಿ ಎಲ್ಲೋ ಏಟು ಬಿದ್ದ ಹಾಗೆ
ನಾಲ್ಕಾರು ಕಾವುಗಳ ಏಟು
ಏಟುಗಳಿಂದ ಕಟ ಕಟ
ನೋವಿನ ದನಿ ಹೊಮ್ಮುತ್ತಿತ್ತು
ಪ್ರತಿ ಏಟಿಗೂ
ಕಾವು ಪುಟಿಯುತ್ತಿತ್ತು

ಮಾಮರವು
ನರಳುತಿತ್ತು ನಲಗುತಿತ್ತು
ಕಣ್ಣೀರು ಸುರಿಸುತ್ತಿತ್ತು

ಆ ನೋವಿನಲಿ
ಎನ್ನನ್ನುಳಿಸಿ ಕಾಪಾಡಿರೋ
ಎಂದು ದನಿ ಉಕ್ಕುತಿತ್ತು
ಆ ದನಿಯ ಪ್ರತಿಧ್ವನಿ
ಕಛೇರಿ ಸೌಧಕ್ಕೆ ಅಪ್ಪಳಿಸುತಿತ್ತು

ಆದರೇನು?
ಕಿವಿಯಿಲ್ಲದಾ ಕಣ್ಣಿಲ್ಲದಾ
ಕುರುಡು ಕಾಂಚಾಣದಾ
ಕುರ್ಚಿಗಳಿಗೆ ಈ ಆಕ್ರಂದನ ಕೇಳಿಸದಾಯಿತು

ಆ ದನಿಯ ನೋವಿನ ಹಾಡು
ಗಾಳಿಯಲಿ ಲೀನವಾಗುವುದಷ್ಟೇ.
*****
೧೧-೦೫-೨೦೦೩
ಮಣ್ಣಿನವಾಸನೆ ವಾರಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೧
Next post ಕಾದು ಕುಳಿತ ಪೆಣತಿನಿಗಳು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…