ರಂಗಪ್ರವೇಶ

ಹೊತ್ತು ಮೀರುತ್ತಿದೆ
ಇನ್ನೇನು ಈಗಲೋ ಆಗಲೋ
ತೆರೆ ಮೇಲೇಳುವ ಸಮಯ!
ಗಿಜಿಗುಡುತಿದೆ ಸಭಾಂಗಣ
ಸುತ್ತ ಹಬ್ಬಿದೆ ಮಬ್ಬು!

ಸಾಕಿನ್ನು ಮೇಲೇಳು
ಮುಗಿದಿಲ್ಲವೇ ಇನ್ನೂ ಪ್ರಸಾಧನ?
ತುಟಿಬಣ್ಣ ಒಂದಿನಿತು ಢಾಳಾಯ್ತು
ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು!
ಸರಿಪಡಿಸು ಸುಕ್ಕಾದ ಸೀರೆ ನೆರಿಗೆ

ಕಾದಿದೆ ರಂಗಸ್ಥಳ
ನಿನ್ನ ಪ್ರಥಮ ಪ್ರವೇಶಕ್ಕೆ
ಎದೆ ಢವಢವಿಸುತಿದೆಯೆ?
ಹೊದೆದುಕೋ ನಗೆಯ ಸೆರಗ
ಬಚ್ಚಿಡು ಕಣ್ಣಂಚಿನ ಕಂಬನಿಯ!

ಕಿವಿತೂತಾಗಿಸುವ ಕರತಾಡನಕೆ
ಮೈ ಜುಮ್ಮೆನಿಸುವ ಶಿಳ್ಳಿಗೆ
ಸಮೂಹದ ಕಟುಟೀಕೆಗೆ
ಬೆಚ್ಚೀಯ ಮತ್ತೆ!
ಅದೆಲ್ಲಾ ಇಲ್ಲಿ ಮಾಮೂಲೇ!

ಅದೋ ತೆರೆ ಏಳುತಿದೆ
ನಿನ್ನೆಡೆಗೆ ಬೆಳಕು ಹೊರಳುತಿದೆ
ವಾದ್ಯ ಮೊಳಗುತಿದೆ
ಎಲ್ಲಾ ಸಿದ್ಧವಾಯ್ತಲ್ಲಾ?
ನಡೆ ಇನ್ನು ರಂಗಸ್ಥಳಕೆ!

ಅಭಿನಯದ ಅಮಲಿನಲಿ
ಮತ್ತೇರಿ ಬೀಳುವೆಯೋ?
ಅಟ್ಟಹಾಸದ ನಗೆಗೆ ತಾಳತಪ್ಪುವೆಯೋ?
ಗೆಲ್ಲುವೆಯೋ? ಸೋಲುವೆಯೋ?
ಕಾಲ ಕಾಯುತ್ತಿದ್ದಾನೆ ದಾಖಲಿಸಲು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ
Next post ಮಾಧವಿಯ ವ್ಯಥ ಕಥೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys