ಮಾಧವಿಯ ವ್ಯಥ ಕಥೆ

ಕುದುರೆ ಏರಿಬರುವ
ಶೂರಧೀರ ನನ್ನವ
ಲೋಕಸುಂದರ ಚೆನ್ನ ಚೆನ್ನಿಗ
ತನ್ನ ತುಂಬಿಕೊಂಡ ಕಣ್ಣ
ಒಳಗೆ ಮತ್ಯಾರನೂ
ನೋಡ ಬಯಸದವನ
ಕೊರಳಿಗೆ ತನ್ನ ಮಾಲೆ
ಕನಸು ಕಂಡ ಮಾಧವಿ
ಏನಾಯ್ತೆ ಸಖಿ ನಿನ್ನ ವಿಧಿ
ಮಾರಾಟವಾಯ್ತೆ ಒಡಲು
ಅಷ್ಟಶತ ಶ್ವೇತ ಅಶ್ವಕೆ
ಹುಂಬ ಶಿಷ್ಯನ ಒಣ
ಪ್ರತಿಷ್ಠೆಯ ತೆವಲಿಗೆ
ಕುಚೋದ್ಯದ ಗುರುದಕ್ಷಿಣೆ
ಬಾಡಿಸಿತೇ ಇರುವಂತಿಕೆಯ,
ಮದುವೆ ಇಲ್ಲಾ, ಇಲ್ಲಾ
ತಾಳಿ ಕೊರಳಲಿ
ಹಯಕೆ ಬದಲು ಮಾಧವಿ
ಕೀರ್ತಿಗಾಗಿ ಹೆತ್ತಕುಡಿಯದಾನ
ರಾಜಕುವರಿಯ ಲಾವಣ್ಯಕೆ
ಮುದಿರಾಜನ ತಲ್ಲಣ
ಮೀಸಲು ಮುರಿವ ಔತಣ
ವರುಷಕ್ಕೊಬ್ಬ ಗಂಡ
ಅಲ್ಲ ಗಂಡು
ನಾಲ್ಕು ಹೆತ್ತರೂ ಮಡಿಲು ಬರಿದು
ಬಾಡಿಗಿಗಿದೆ ಒಡಲು
ತುಂಬಿಸಿ ಬೇಕಾದರೆ ಮಡಿಲು
ಬೇಕಾಗಿದೆ ಅಷ್ಟೆ ಶ್ವೇತಾಶ್ವ
ಯುಗ ಯುಗ ಕಳೆದರೂ
ಈ ಹೆಣ್ಣುಗಳು ಮಾಧವಿ, ದ್ರೌಪದಿ
ಸೀತೆ ಅಹಲ್ಯೆಯರೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಪ್ರವೇಶ
Next post ತೀರ್ಪು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys