Home / ಕವನ / ಕವಿತೆ / ಮಾಧವಿಯ ವ್ಯಥ ಕಥೆ

ಮಾಧವಿಯ ವ್ಯಥ ಕಥೆ

ಕುದುರೆ ಏರಿಬರುವ
ಶೂರಧೀರ ನನ್ನವ
ಲೋಕಸುಂದರ ಚೆನ್ನ ಚೆನ್ನಿಗ
ತನ್ನ ತುಂಬಿಕೊಂಡ ಕಣ್ಣ
ಒಳಗೆ ಮತ್ಯಾರನೂ
ನೋಡ ಬಯಸದವನ
ಕೊರಳಿಗೆ ತನ್ನ ಮಾಲೆ
ಕನಸು ಕಂಡ ಮಾಧವಿ
ಏನಾಯ್ತೆ ಸಖಿ ನಿನ್ನ ವಿಧಿ
ಮಾರಾಟವಾಯ್ತೆ ಒಡಲು
ಅಷ್ಟಶತ ಶ್ವೇತ ಅಶ್ವಕೆ
ಹುಂಬ ಶಿಷ್ಯನ ಒಣ
ಪ್ರತಿಷ್ಠೆಯ ತೆವಲಿಗೆ
ಕುಚೋದ್ಯದ ಗುರುದಕ್ಷಿಣೆ
ಬಾಡಿಸಿತೇ ಇರುವಂತಿಕೆಯ,
ಮದುವೆ ಇಲ್ಲಾ, ಇಲ್ಲಾ
ತಾಳಿ ಕೊರಳಲಿ
ಹಯಕೆ ಬದಲು ಮಾಧವಿ
ಕೀರ್ತಿಗಾಗಿ ಹೆತ್ತಕುಡಿಯದಾನ
ರಾಜಕುವರಿಯ ಲಾವಣ್ಯಕೆ
ಮುದಿರಾಜನ ತಲ್ಲಣ
ಮೀಸಲು ಮುರಿವ ಔತಣ
ವರುಷಕ್ಕೊಬ್ಬ ಗಂಡ
ಅಲ್ಲ ಗಂಡು
ನಾಲ್ಕು ಹೆತ್ತರೂ ಮಡಿಲು ಬರಿದು
ಬಾಡಿಗಿಗಿದೆ ಒಡಲು
ತುಂಬಿಸಿ ಬೇಕಾದರೆ ಮಡಿಲು
ಬೇಕಾಗಿದೆ ಅಷ್ಟೆ ಶ್ವೇತಾಶ್ವ
ಯುಗ ಯುಗ ಕಳೆದರೂ
ಈ ಹೆಣ್ಣುಗಳು ಮಾಧವಿ, ದ್ರೌಪದಿ
ಸೀತೆ ಅಹಲ್ಯೆಯರೇ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...