ತೀರ್ಪು

ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ
ಅವರೇ ಇದ್ದರು
ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ
ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು
ನಕ್ಕರು ವಿಚಾರಿಸಿದರು ಉಪದೇಶಿಸಿದರು
ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ
ನರನರ ಎಳೆದಾಗಲೂ ಕಣ್ಣು ಸುತ್ತಿದಾಗಲೂ ಪಂಚಾಗ್ನಿ ಮಧ್ಯೆ
ಕರಗಿದಾಗಲೂ ನಾನು
ಉದ್ದವಾಗಿ ಭಾರವಾಗಿ ಎಳೆದೆಳೆದು ಗರಗರಾ
ಉಪದೇಶಿಸಿದರು
ಅರ್ಥವಾದಂತೆ ಅನ್ನಿಸಲಿಲ್ಲ ಅನಿಸದೆ ಈಚೆಗೆ ಬಂದೆ
ಬಂದಾಗ ಅವರು ಕೆಕ್ಕರ ನೋಡಿದರು ನೋಡನೋಡುತ್ತ ಭಂಗಿ
ಬದಲಿಸಿದರು ಒಂದು ಠೀವಿಯಿಂದ ಇನ್ನೊಂದಕ್ಕೆ ಹೊಕ್ಕರು ಹೊಕ್ಕು
ಬೇತಾಳ ನೆರಳು ಬೆಳೆದು ಆಕ್ರಮಿಸಿ ಬಂದು ಹಿಡಿದು
ಕಟ್ಟಿ ಕೆಡವಿದರು ಕೋರ್ಟಿಗೆ ಎಳೆದೊಯ್ದರು
ಅಲ್ಲಿ ನಿಲ್ಲಿಸಿದರು ಬೆರಳು ತೋರಿಸಿ ಆರೋಪಿಸಿದರು
ಪ್ರಶ್ನೆಗಳನ್ನು ಹಾಕಿದರು ಉತ್ತರಿಸಿದರು ವಾದಿಸಿದರು
ತೀರ್ಪಿತ್ತರು ಕೊನೆಗೆ ಇಂಚಿಂಚಾಗಿ ಕೊಂದರು

[ಕಾಫ್ಕಾ’ನ ದಿ ಟ್ರಯಲ್ ಓದಿದ ಮೇಲೆ ಬರೆದುದು]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಧವಿಯ ವ್ಯಥ ಕಥೆ
Next post ಜೀವನ ಒಂದು ಪಯಣ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys