ತೀರ್ಪು

ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ
ಅವರೇ ಇದ್ದರು
ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ
ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು
ನಕ್ಕರು ವಿಚಾರಿಸಿದರು ಉಪದೇಶಿಸಿದರು
ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ
ನರನರ ಎಳೆದಾಗಲೂ ಕಣ್ಣು ಸುತ್ತಿದಾಗಲೂ ಪಂಚಾಗ್ನಿ ಮಧ್ಯೆ
ಕರಗಿದಾಗಲೂ ನಾನು
ಉದ್ದವಾಗಿ ಭಾರವಾಗಿ ಎಳೆದೆಳೆದು ಗರಗರಾ
ಉಪದೇಶಿಸಿದರು
ಅರ್ಥವಾದಂತೆ ಅನ್ನಿಸಲಿಲ್ಲ ಅನಿಸದೆ ಈಚೆಗೆ ಬಂದೆ
ಬಂದಾಗ ಅವರು ಕೆಕ್ಕರ ನೋಡಿದರು ನೋಡನೋಡುತ್ತ ಭಂಗಿ
ಬದಲಿಸಿದರು ಒಂದು ಠೀವಿಯಿಂದ ಇನ್ನೊಂದಕ್ಕೆ ಹೊಕ್ಕರು ಹೊಕ್ಕು
ಬೇತಾಳ ನೆರಳು ಬೆಳೆದು ಆಕ್ರಮಿಸಿ ಬಂದು ಹಿಡಿದು
ಕಟ್ಟಿ ಕೆಡವಿದರು ಕೋರ್ಟಿಗೆ ಎಳೆದೊಯ್ದರು
ಅಲ್ಲಿ ನಿಲ್ಲಿಸಿದರು ಬೆರಳು ತೋರಿಸಿ ಆರೋಪಿಸಿದರು
ಪ್ರಶ್ನೆಗಳನ್ನು ಹಾಕಿದರು ಉತ್ತರಿಸಿದರು ವಾದಿಸಿದರು
ತೀರ್ಪಿತ್ತರು ಕೊನೆಗೆ ಇಂಚಿಂಚಾಗಿ ಕೊಂದರು

[ಕಾಫ್ಕಾ’ನ ದಿ ಟ್ರಯಲ್ ಓದಿದ ಮೇಲೆ ಬರೆದುದು]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಧವಿಯ ವ್ಯಥ ಕಥೆ
Next post ಜೀವನ ಒಂದು ಪಯಣ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…