ತೀರ್ಪು

ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ
ಅವರೇ ಇದ್ದರು
ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ
ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು
ನಕ್ಕರು ವಿಚಾರಿಸಿದರು ಉಪದೇಶಿಸಿದರು
ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ
ನರನರ ಎಳೆದಾಗಲೂ ಕಣ್ಣು ಸುತ್ತಿದಾಗಲೂ ಪಂಚಾಗ್ನಿ ಮಧ್ಯೆ
ಕರಗಿದಾಗಲೂ ನಾನು
ಉದ್ದವಾಗಿ ಭಾರವಾಗಿ ಎಳೆದೆಳೆದು ಗರಗರಾ
ಉಪದೇಶಿಸಿದರು
ಅರ್ಥವಾದಂತೆ ಅನ್ನಿಸಲಿಲ್ಲ ಅನಿಸದೆ ಈಚೆಗೆ ಬಂದೆ
ಬಂದಾಗ ಅವರು ಕೆಕ್ಕರ ನೋಡಿದರು ನೋಡನೋಡುತ್ತ ಭಂಗಿ
ಬದಲಿಸಿದರು ಒಂದು ಠೀವಿಯಿಂದ ಇನ್ನೊಂದಕ್ಕೆ ಹೊಕ್ಕರು ಹೊಕ್ಕು
ಬೇತಾಳ ನೆರಳು ಬೆಳೆದು ಆಕ್ರಮಿಸಿ ಬಂದು ಹಿಡಿದು
ಕಟ್ಟಿ ಕೆಡವಿದರು ಕೋರ್ಟಿಗೆ ಎಳೆದೊಯ್ದರು
ಅಲ್ಲಿ ನಿಲ್ಲಿಸಿದರು ಬೆರಳು ತೋರಿಸಿ ಆರೋಪಿಸಿದರು
ಪ್ರಶ್ನೆಗಳನ್ನು ಹಾಕಿದರು ಉತ್ತರಿಸಿದರು ವಾದಿಸಿದರು
ತೀರ್ಪಿತ್ತರು ಕೊನೆಗೆ ಇಂಚಿಂಚಾಗಿ ಕೊಂದರು

[ಕಾಫ್ಕಾ’ನ ದಿ ಟ್ರಯಲ್ ಓದಿದ ಮೇಲೆ ಬರೆದುದು]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಧವಿಯ ವ್ಯಥ ಕಥೆ
Next post ಜೀವನ ಒಂದು ಪಯಣ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…