Home / ಕಥೆ / ಸಣ್ಣ ಕಥೆ / ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಬಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಶ್ರೀರಂಗಪಟ್ಟಣದ ಅಧಿಕಾರಿಗಳು ಹೇಗಾದರೂ ರಾಜ ಒಡೆಯರನ್ನು ಕೊನೆಗಾಣಿಸಬೇಕೆಂದು ಯೋಚಿಸಿದರು. ಗೋಪ್ಯವಾಗಿ ಪ್ರಯತ್ನ ಮಾಡುವುದೇ ಲೇಸೆಂದು ಅವರು ಆಲೋಚಿಸಿ ಮೈಸೂರಿನ ಅರಮನೆಯಲ್ಲಿ ಒಡೆಯರಿರುವಾಗಲೇ ಅವರನ್ನು ವಧೆ ಮಾಡಿಸುವ ತಂತ್ರವನ್ನು ಹೆಣೆದರು.

ಶ್ರೀರಂಗಪಟ್ಟಣದಿಂದ ರಾಜ ಒಡೆಯರ ಆಸ್ಥಾನಕ್ಕೆ ರಾಜಕಾರ್ಯನಿಮಿತ್ತವಾಗಿ ಒಬ್ಬ ಅಧಿಕಾರಿಯು ಕೆಲವು ಸೈನಿಕರೊಡನೆ ಹೊರಡಬೇಕಾಗಿತ್ತು. ಇದೇ ಸಮಯವೆಂದು ಆ ಅಧಿಕಾರಿಯು ಏಕಾಂತವಾಗಿ ರಾಜ ಒಡೆಯರೊಡನೆ ಮಾತನಾಡುವ ಹಾಗೂ, ಆ ಆಧಿಕಾರಿಯು ಅದೇ ವೇಳೆಯಲ್ಲಿ ಒಡೆಯರನ್ನು ಸಂಹರಿಸುವ ಹಾಗೂ ಕೂಡಲೆ ಅಧಿಕಾರಿಯ ಜೊತೆಯಲ್ಲಿದ್ದ ಸೈನಿಕರು ಆತನನ್ನು ರಕ್ಷಿಸುವ ಹಾಗೂ ಏರ್ಪಡಿಸಿದರು. ಅಧಿಕಾರಿಯು ಮೈಸೂರಿಗೆ ಬಂದು ಒಡೆಯರೊಡನೆ ಏಕಾಂತವಾಗಿ ಆಲೋಚನೆ ಮಾಡುವ ಸಂದರ್ಭವಿದೆ. ಆದ್ದರಿಂದ ನಾನು ಬಂದಿದ್ದೇನೆ” ಎಂದು ಹೇಳಲು ರಾಜ ಒಡೆಯರು ಏನೂ ಅನುಮಾನಪಡದೆ ತಮ್ಮ ಪರಿವಾರದವರನ್ನು ದೂರ ಹೋಗಿರೆಂದು ಅಪ್ಪಣೆ ಮಾಡಿದರು. ಆದರೆ ಎಲ್ಲರೂ ದೂರ ಹೋಗಲಿಲ್ಲ. ಒಬ್ಬ ಸೇವಕನು ಅನುಮಾನಪಟ್ಟು ಒಂದು ಕಂಬದ ಹಿಂದೆ ಅವಿತುಕೊಂಡು ನೋಡುತಿದ್ದನು. ಹಾಗೆಯೇ ನೋಡುತ್ತಿರಲಾಗಿ ಅಧಿಕಾರಿಯು ಮಾತನಾಡುತ್ತ ಹತ್ತಿರ ಬರುತ್ತ, ತನ್ನ ಕೈಯ್ಯನ್ನು ಸೊಂಟದಲ್ಲಿದ್ದ ಕಠಾರಿಯ ಮೇಲಿಟ್ಟುದನ್ನು ಕಂಡನು. ಕೂಡಲೇ ಸೇವಕನು ಚಂಗನೆ ಹಾರಿ ಅಧಿಕಾರಿಯನ್ನು ಹಿಡಿದು ನೆಲಕ್ಕೆ ಕೆಡಹಿ ತನ್ನ ಕಠಾರಿಯಿಂದ ಇರಿದನು. ಅಧಿಕಾರಿಯು ಮಾತಿಲ್ಲದೆ ಪ್ರಾಣಬಿಟ್ಟನು. ಬೆಂಗಾವಲಿಗೆ ಬಂದಿದ್ದ ಸೈನಿಕರು ಚದರಿ ಓಡಿಹೋದರು. ರಾಜ ಒಡೆಯರ ಪ್ರಾಣವು ಈ ಸೇವಕನ ಜಾಗರೂಕತೆಯಿಂದ ಉಳಿಯಿತು.
*****
[ಮಿಲ್ಕ್ಸ್ ಸಂ, ೧, ಪುಟ ೨೫]

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...