Home / ಕಥೆ / ಸಣ್ಣ ಕಥೆ / ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಬಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಶ್ರೀರಂಗಪಟ್ಟಣದ ಅಧಿಕಾರಿಗಳು ಹೇಗಾದರೂ ರಾಜ ಒಡೆಯರನ್ನು ಕೊನೆಗಾಣಿಸಬೇಕೆಂದು ಯೋಚಿಸಿದರು. ಗೋಪ್ಯವಾಗಿ ಪ್ರಯತ್ನ ಮಾಡುವುದೇ ಲೇಸೆಂದು ಅವರು ಆಲೋಚಿಸಿ ಮೈಸೂರಿನ ಅರಮನೆಯಲ್ಲಿ ಒಡೆಯರಿರುವಾಗಲೇ ಅವರನ್ನು ವಧೆ ಮಾಡಿಸುವ ತಂತ್ರವನ್ನು ಹೆಣೆದರು.

ಶ್ರೀರಂಗಪಟ್ಟಣದಿಂದ ರಾಜ ಒಡೆಯರ ಆಸ್ಥಾನಕ್ಕೆ ರಾಜಕಾರ್ಯನಿಮಿತ್ತವಾಗಿ ಒಬ್ಬ ಅಧಿಕಾರಿಯು ಕೆಲವು ಸೈನಿಕರೊಡನೆ ಹೊರಡಬೇಕಾಗಿತ್ತು. ಇದೇ ಸಮಯವೆಂದು ಆ ಅಧಿಕಾರಿಯು ಏಕಾಂತವಾಗಿ ರಾಜ ಒಡೆಯರೊಡನೆ ಮಾತನಾಡುವ ಹಾಗೂ, ಆ ಆಧಿಕಾರಿಯು ಅದೇ ವೇಳೆಯಲ್ಲಿ ಒಡೆಯರನ್ನು ಸಂಹರಿಸುವ ಹಾಗೂ ಕೂಡಲೆ ಅಧಿಕಾರಿಯ ಜೊತೆಯಲ್ಲಿದ್ದ ಸೈನಿಕರು ಆತನನ್ನು ರಕ್ಷಿಸುವ ಹಾಗೂ ಏರ್ಪಡಿಸಿದರು. ಅಧಿಕಾರಿಯು ಮೈಸೂರಿಗೆ ಬಂದು ಒಡೆಯರೊಡನೆ ಏಕಾಂತವಾಗಿ ಆಲೋಚನೆ ಮಾಡುವ ಸಂದರ್ಭವಿದೆ. ಆದ್ದರಿಂದ ನಾನು ಬಂದಿದ್ದೇನೆ” ಎಂದು ಹೇಳಲು ರಾಜ ಒಡೆಯರು ಏನೂ ಅನುಮಾನಪಡದೆ ತಮ್ಮ ಪರಿವಾರದವರನ್ನು ದೂರ ಹೋಗಿರೆಂದು ಅಪ್ಪಣೆ ಮಾಡಿದರು. ಆದರೆ ಎಲ್ಲರೂ ದೂರ ಹೋಗಲಿಲ್ಲ. ಒಬ್ಬ ಸೇವಕನು ಅನುಮಾನಪಟ್ಟು ಒಂದು ಕಂಬದ ಹಿಂದೆ ಅವಿತುಕೊಂಡು ನೋಡುತಿದ್ದನು. ಹಾಗೆಯೇ ನೋಡುತ್ತಿರಲಾಗಿ ಅಧಿಕಾರಿಯು ಮಾತನಾಡುತ್ತ ಹತ್ತಿರ ಬರುತ್ತ, ತನ್ನ ಕೈಯ್ಯನ್ನು ಸೊಂಟದಲ್ಲಿದ್ದ ಕಠಾರಿಯ ಮೇಲಿಟ್ಟುದನ್ನು ಕಂಡನು. ಕೂಡಲೇ ಸೇವಕನು ಚಂಗನೆ ಹಾರಿ ಅಧಿಕಾರಿಯನ್ನು ಹಿಡಿದು ನೆಲಕ್ಕೆ ಕೆಡಹಿ ತನ್ನ ಕಠಾರಿಯಿಂದ ಇರಿದನು. ಅಧಿಕಾರಿಯು ಮಾತಿಲ್ಲದೆ ಪ್ರಾಣಬಿಟ್ಟನು. ಬೆಂಗಾವಲಿಗೆ ಬಂದಿದ್ದ ಸೈನಿಕರು ಚದರಿ ಓಡಿಹೋದರು. ರಾಜ ಒಡೆಯರ ಪ್ರಾಣವು ಈ ಸೇವಕನ ಜಾಗರೂಕತೆಯಿಂದ ಉಳಿಯಿತು.
*****
[ಮಿಲ್ಕ್ಸ್ ಸಂ, ೧, ಪುಟ ೨೫]

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...