Home / ಕಥೆ / ಸಣ್ಣ ಕಥೆ / ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಕೊಲೆಯ ಪಿತೂರಿ

ರಾಜ ಒಡೆಯರ ಬಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಶ್ರೀರಂಗಪಟ್ಟಣದ ಅಧಿಕಾರಿಗಳು ಹೇಗಾದರೂ ರಾಜ ಒಡೆಯರನ್ನು ಕೊನೆಗಾಣಿಸಬೇಕೆಂದು ಯೋಚಿಸಿದರು. ಗೋಪ್ಯವಾಗಿ ಪ್ರಯತ್ನ ಮಾಡುವುದೇ ಲೇಸೆಂದು ಅವರು ಆಲೋಚಿಸಿ ಮೈಸೂರಿನ ಅರಮನೆಯಲ್ಲಿ ಒಡೆಯರಿರುವಾಗಲೇ ಅವರನ್ನು ವಧೆ ಮಾಡಿಸುವ ತಂತ್ರವನ್ನು ಹೆಣೆದರು.

ಶ್ರೀರಂಗಪಟ್ಟಣದಿಂದ ರಾಜ ಒಡೆಯರ ಆಸ್ಥಾನಕ್ಕೆ ರಾಜಕಾರ್ಯನಿಮಿತ್ತವಾಗಿ ಒಬ್ಬ ಅಧಿಕಾರಿಯು ಕೆಲವು ಸೈನಿಕರೊಡನೆ ಹೊರಡಬೇಕಾಗಿತ್ತು. ಇದೇ ಸಮಯವೆಂದು ಆ ಅಧಿಕಾರಿಯು ಏಕಾಂತವಾಗಿ ರಾಜ ಒಡೆಯರೊಡನೆ ಮಾತನಾಡುವ ಹಾಗೂ, ಆ ಆಧಿಕಾರಿಯು ಅದೇ ವೇಳೆಯಲ್ಲಿ ಒಡೆಯರನ್ನು ಸಂಹರಿಸುವ ಹಾಗೂ ಕೂಡಲೆ ಅಧಿಕಾರಿಯ ಜೊತೆಯಲ್ಲಿದ್ದ ಸೈನಿಕರು ಆತನನ್ನು ರಕ್ಷಿಸುವ ಹಾಗೂ ಏರ್ಪಡಿಸಿದರು. ಅಧಿಕಾರಿಯು ಮೈಸೂರಿಗೆ ಬಂದು ಒಡೆಯರೊಡನೆ ಏಕಾಂತವಾಗಿ ಆಲೋಚನೆ ಮಾಡುವ ಸಂದರ್ಭವಿದೆ. ಆದ್ದರಿಂದ ನಾನು ಬಂದಿದ್ದೇನೆ” ಎಂದು ಹೇಳಲು ರಾಜ ಒಡೆಯರು ಏನೂ ಅನುಮಾನಪಡದೆ ತಮ್ಮ ಪರಿವಾರದವರನ್ನು ದೂರ ಹೋಗಿರೆಂದು ಅಪ್ಪಣೆ ಮಾಡಿದರು. ಆದರೆ ಎಲ್ಲರೂ ದೂರ ಹೋಗಲಿಲ್ಲ. ಒಬ್ಬ ಸೇವಕನು ಅನುಮಾನಪಟ್ಟು ಒಂದು ಕಂಬದ ಹಿಂದೆ ಅವಿತುಕೊಂಡು ನೋಡುತಿದ್ದನು. ಹಾಗೆಯೇ ನೋಡುತ್ತಿರಲಾಗಿ ಅಧಿಕಾರಿಯು ಮಾತನಾಡುತ್ತ ಹತ್ತಿರ ಬರುತ್ತ, ತನ್ನ ಕೈಯ್ಯನ್ನು ಸೊಂಟದಲ್ಲಿದ್ದ ಕಠಾರಿಯ ಮೇಲಿಟ್ಟುದನ್ನು ಕಂಡನು. ಕೂಡಲೇ ಸೇವಕನು ಚಂಗನೆ ಹಾರಿ ಅಧಿಕಾರಿಯನ್ನು ಹಿಡಿದು ನೆಲಕ್ಕೆ ಕೆಡಹಿ ತನ್ನ ಕಠಾರಿಯಿಂದ ಇರಿದನು. ಅಧಿಕಾರಿಯು ಮಾತಿಲ್ಲದೆ ಪ್ರಾಣಬಿಟ್ಟನು. ಬೆಂಗಾವಲಿಗೆ ಬಂದಿದ್ದ ಸೈನಿಕರು ಚದರಿ ಓಡಿಹೋದರು. ರಾಜ ಒಡೆಯರ ಪ್ರಾಣವು ಈ ಸೇವಕನ ಜಾಗರೂಕತೆಯಿಂದ ಉಳಿಯಿತು.
*****
[ಮಿಲ್ಕ್ಸ್ ಸಂ, ೧, ಪುಟ ೨೫]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...