Home / ಕಥೆ / ಸಣ್ಣ ಕಥೆ / ಪಿರಿಯ ಪಟ್ಟಣದ ವೀರರಾಜ

ಪಿರಿಯ ಪಟ್ಟಣದ ವೀರರಾಜ

ಮೈಸೂರಿಗೆ ಪಶ್ಚಿಮಕ್ಕೆ ಕೊಡಗಿನ ಕಡೆಗೆ ಪಿರಿಯ ಪಟ್ಟಣ ವೆಂಬಲ್ಲಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಕೆಲವರು ದೊರೆಗಳು ಆಳುತ್ತಿದ್ದರು. ಪಿರಿಯರಾಜನೆಂಬಾತನೇ ಪೂರ್ವದಲ್ಲಿ ಮಣ್ಣಿನಿಂದಲೇ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಿ ಪೇಟೆಯನ್ನು ಸ್ಥಾಪಿಸಿದನು. ಆ ಕಾರಣದಿಂದ ಅದಕ್ಕೆ ಪಿರಿಯಪಟ್ಟಣವೆಂದು ಹೆಸರು.

ಕಂಠೀರವ ಒಡೆಯರ ಕಾಲದಲ್ಲಿ ಅಲ್ಲಿ ವೀರರಾಜನೆಂಬಾತನು ಆಳುತ್ತಿದ್ದನು. ಆತನನ್ನು ಗೆಲ್ಲಲು ಮೊದಲು ದಳವಾಯಿಗಳು ಹೋಗಿದ್ದು, ಆತನು ಬಹಳವಾದ ತೊಂದರೆ ಕೊಡಲು ಹಿಂತಿರುಗಿ ಬಂದು ರಾಜರಿಗೆ ಅರಿಕೆ ಮಾಡಿದರು. ಕಂಠೀರವ ಒಡೆಯರೇ ಸ್ವಂತವಾಗಿ ಮುತ್ತಿಗೆಯನ್ನು ನಡೆಸಲು ಹೊರಟರು. ಛಲದಿಂದ ಮುತ್ತಿಗೆಯನ್ನು ಮುಂದುವರಿಸಿದರು. ವೀರರಾಜನು ಬಹಳ ಶೌರ್ಯದಿಂದ ಕಾದಿದರೂ ಶತ್ರುಗಳು ಲಗ್ಗೆ ಹತ್ತುವುದನ್ನು ನಿಲ್ಲಿಸಿಲಾಗದೆ ಹೋಯಿತು. ಆಗ ವೀರರಾಜನು ವೀರಸಂಕಲ್ಪವನ್ನು ಮಾಡಿ ಅರಮನೆಗೆ ಹೋಗಿ ತನ್ನ ಹೆಂಡಿರು ಮಕ್ಕಳನ್ನು ತನ್ನ ಕೈಯಿಂದಲೇ ಸಂಹರಿಸಿ ತರುವಾಯ ತಾನು ಹುಚ್ಚನಂತೆ ಕೋಟೆಯ ಹೊರವಳಯದಲ್ಲಿ ಸುಗ್ಗಿ ಕಾದಾಡುತ್ತ ಮಡಿದನು.

ಅನಂತರ ಕೋಟೆಯು ಕಂಠೀರವ ಒಡೆಯರಿಗೆ ಸುಲಭವಾಗಿ ಹಸ್ತಗತವಾಯಿತು.
*****
[ವಂಶರತ್ನಾಕರ ಪುಟ ೭೦; ವಂಶಾವಳಿ ಪುಟ ೭೧ ಹೊಸ ಗೆಜಟಿಯರ್‌ ಸಂ. ೫, ಪುಟ ೮೦೦]

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...