Home / ಕಥೆ / ಸಣ್ಣ ಕಥೆ / ಪಿರಿಯ ಪಟ್ಟಣದ ವೀರರಾಜ

ಪಿರಿಯ ಪಟ್ಟಣದ ವೀರರಾಜ

ಮೈಸೂರಿಗೆ ಪಶ್ಚಿಮಕ್ಕೆ ಕೊಡಗಿನ ಕಡೆಗೆ ಪಿರಿಯ ಪಟ್ಟಣ ವೆಂಬಲ್ಲಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಕೆಲವರು ದೊರೆಗಳು ಆಳುತ್ತಿದ್ದರು. ಪಿರಿಯರಾಜನೆಂಬಾತನೇ ಪೂರ್ವದಲ್ಲಿ ಮಣ್ಣಿನಿಂದಲೇ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಿ ಪೇಟೆಯನ್ನು ಸ್ಥಾಪಿಸಿದನು. ಆ ಕಾರಣದಿಂದ ಅದಕ್ಕೆ ಪಿರಿಯಪಟ್ಟಣವೆಂದು ಹೆಸರು.

ಕಂಠೀರವ ಒಡೆಯರ ಕಾಲದಲ್ಲಿ ಅಲ್ಲಿ ವೀರರಾಜನೆಂಬಾತನು ಆಳುತ್ತಿದ್ದನು. ಆತನನ್ನು ಗೆಲ್ಲಲು ಮೊದಲು ದಳವಾಯಿಗಳು ಹೋಗಿದ್ದು, ಆತನು ಬಹಳವಾದ ತೊಂದರೆ ಕೊಡಲು ಹಿಂತಿರುಗಿ ಬಂದು ರಾಜರಿಗೆ ಅರಿಕೆ ಮಾಡಿದರು. ಕಂಠೀರವ ಒಡೆಯರೇ ಸ್ವಂತವಾಗಿ ಮುತ್ತಿಗೆಯನ್ನು ನಡೆಸಲು ಹೊರಟರು. ಛಲದಿಂದ ಮುತ್ತಿಗೆಯನ್ನು ಮುಂದುವರಿಸಿದರು. ವೀರರಾಜನು ಬಹಳ ಶೌರ್ಯದಿಂದ ಕಾದಿದರೂ ಶತ್ರುಗಳು ಲಗ್ಗೆ ಹತ್ತುವುದನ್ನು ನಿಲ್ಲಿಸಿಲಾಗದೆ ಹೋಯಿತು. ಆಗ ವೀರರಾಜನು ವೀರಸಂಕಲ್ಪವನ್ನು ಮಾಡಿ ಅರಮನೆಗೆ ಹೋಗಿ ತನ್ನ ಹೆಂಡಿರು ಮಕ್ಕಳನ್ನು ತನ್ನ ಕೈಯಿಂದಲೇ ಸಂಹರಿಸಿ ತರುವಾಯ ತಾನು ಹುಚ್ಚನಂತೆ ಕೋಟೆಯ ಹೊರವಳಯದಲ್ಲಿ ಸುಗ್ಗಿ ಕಾದಾಡುತ್ತ ಮಡಿದನು.

ಅನಂತರ ಕೋಟೆಯು ಕಂಠೀರವ ಒಡೆಯರಿಗೆ ಸುಲಭವಾಗಿ ಹಸ್ತಗತವಾಯಿತು.
*****
[ವಂಶರತ್ನಾಕರ ಪುಟ ೭೦; ವಂಶಾವಳಿ ಪುಟ ೭೧ ಹೊಸ ಗೆಜಟಿಯರ್‌ ಸಂ. ೫, ಪುಟ ೮೦೦]

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್