Home / ಕಥೆ / ಸಣ್ಣ ಕಥೆ / ಪಿರಿಯ ಪಟ್ಟಣದ ವೀರರಾಜ

ಪಿರಿಯ ಪಟ್ಟಣದ ವೀರರಾಜ

ಮೈಸೂರಿಗೆ ಪಶ್ಚಿಮಕ್ಕೆ ಕೊಡಗಿನ ಕಡೆಗೆ ಪಿರಿಯ ಪಟ್ಟಣ ವೆಂಬಲ್ಲಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಕೆಲವರು ದೊರೆಗಳು ಆಳುತ್ತಿದ್ದರು. ಪಿರಿಯರಾಜನೆಂಬಾತನೇ ಪೂರ್ವದಲ್ಲಿ ಮಣ್ಣಿನಿಂದಲೇ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಿ ಪೇಟೆಯನ್ನು ಸ್ಥಾಪಿಸಿದನು. ಆ ಕಾರಣದಿಂದ ಅದಕ್ಕೆ ಪಿರಿಯಪಟ್ಟಣವೆಂದು ಹೆಸರು.

ಕಂಠೀರವ ಒಡೆಯರ ಕಾಲದಲ್ಲಿ ಅಲ್ಲಿ ವೀರರಾಜನೆಂಬಾತನು ಆಳುತ್ತಿದ್ದನು. ಆತನನ್ನು ಗೆಲ್ಲಲು ಮೊದಲು ದಳವಾಯಿಗಳು ಹೋಗಿದ್ದು, ಆತನು ಬಹಳವಾದ ತೊಂದರೆ ಕೊಡಲು ಹಿಂತಿರುಗಿ ಬಂದು ರಾಜರಿಗೆ ಅರಿಕೆ ಮಾಡಿದರು. ಕಂಠೀರವ ಒಡೆಯರೇ ಸ್ವಂತವಾಗಿ ಮುತ್ತಿಗೆಯನ್ನು ನಡೆಸಲು ಹೊರಟರು. ಛಲದಿಂದ ಮುತ್ತಿಗೆಯನ್ನು ಮುಂದುವರಿಸಿದರು. ವೀರರಾಜನು ಬಹಳ ಶೌರ್ಯದಿಂದ ಕಾದಿದರೂ ಶತ್ರುಗಳು ಲಗ್ಗೆ ಹತ್ತುವುದನ್ನು ನಿಲ್ಲಿಸಿಲಾಗದೆ ಹೋಯಿತು. ಆಗ ವೀರರಾಜನು ವೀರಸಂಕಲ್ಪವನ್ನು ಮಾಡಿ ಅರಮನೆಗೆ ಹೋಗಿ ತನ್ನ ಹೆಂಡಿರು ಮಕ್ಕಳನ್ನು ತನ್ನ ಕೈಯಿಂದಲೇ ಸಂಹರಿಸಿ ತರುವಾಯ ತಾನು ಹುಚ್ಚನಂತೆ ಕೋಟೆಯ ಹೊರವಳಯದಲ್ಲಿ ಸುಗ್ಗಿ ಕಾದಾಡುತ್ತ ಮಡಿದನು.

ಅನಂತರ ಕೋಟೆಯು ಕಂಠೀರವ ಒಡೆಯರಿಗೆ ಸುಲಭವಾಗಿ ಹಸ್ತಗತವಾಯಿತು.
*****
[ವಂಶರತ್ನಾಕರ ಪುಟ ೭೦; ವಂಶಾವಳಿ ಪುಟ ೭೧ ಹೊಸ ಗೆಜಟಿಯರ್‌ ಸಂ. ೫, ಪುಟ ೮೦೦]

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...