Home / ಕವನ / ಅನುವಾದ / ಅಜ್ಞಾತವಾಸದ ಹಿನ್ನೆಲೆ

ಅಜ್ಞಾತವಾಸದ ಹಿನ್ನೆಲೆ

ಮೂಲ: ನರೇಶ್ ಗುಹಾ

ಅಯ್ಯೊ ಎಲ್ಲೆಲ್ಲೂ ಮರದ ಎಲೆಗಳ ಕೆಳಗೆ
ರಾತ್ರಿ ಹಗಲೂ ಜಾರಿ ಉದುರುತ್ತಿವೆ.
ಒಂದೆ ಬಿರುಗಾಳಿಯೂ ಇಲ್ಲಿ ಕಾಡುಗಳಲ್ಲಿ
ಒಣಮರದ ಕಂಬಗಳು ಸುಯ್ಯುತ್ತಿವೆ.

ಎಷ್ಟೊಂದು ಭೂತ ಕಾಡಲ್ಲಿ ಕುಣಿಯುತ್ತಿವೆ
ಅಸ್ಥಿಪಂಜರ ಹಲ್ಲು ಕಿಸಿಯುತ್ತಿವೆ;
ಕಣ್ಣೂಳಗೆ ಹಾವು ಹರಿದಿವೆ, ಚಂದ್ರಕಾಂತಿಯೂ
ಏನೋ ಗೋಳಿನ ಕಥೆಯ ಮುಲಕುತ್ತಿದೆ.

ಕಾಡೊಳಗೆ ಕಾಲಿಟ್ಟ ಕಣವೆ ದೇವತೆಗಳೂ
ಪಿಶಾಚಿಯಾಗುತ್ತಿರುವರೇಕೆ ಹೀಗೆ?
ಹುಲಿ ಜಿಂಕೆಗಳು ಸತ್ತು, ವನದೇವತೆಗಳೂ
ಹಿಂದಿರುಗಿ ಮರದ ಫಲ ಕೊಳೆಯುತ್ತಿವೆ.

ಬಿರುಗಾಳಿ ಸೂಚನೆಯೇ ಇಲ್ಲ, ಒಂದಾದರೂ
ಕಪ್ಪು ಮುಗಿಲಿಲ್ಲ ಬಾನಿನಲ್ಲಿ;
ವನದ ದನಿ ಇಂಗುತಿದೆ, ವನದೇವತೆಯ ಕಾಯ
ಹೂತಿದೆ ತರಗೆಲೆಯ ರಾಶಿಯಲ್ಲಿ

ವನವಾಸ ಮುಗಿದರೂ ಅಜ್ಞಾತ ಉಳಿದಿದೆ,
ದೊರೆ ವಿರಾಟನ ಮನೆಯ ದೀನಸೇವೆ.
ಎಲ್ಲಿ ಇಡುವುದು ನಮ್ಮ ಶಸ್ತ್ರಾಸ್ತ್ರ? ಮರೆಯಿಲ್ಲ
ಬೋಳುಮರ ದಿಕ್ಕೆಟ್ಟು ಚೀರುತ್ತಿವೆ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...