Home / ಕವನ / ಕವಿತೆ / ಸ್ವಾತಂತ್ರ ಗೀತೆ

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ
ವಿವಿಧ ಹೂಗಳ ಒಂದುಗೂಡಿಸಿ,
ಒಂದು ಹೂದಾನಿ ಅಲಂಕರಿಸಿ,
ಮೇಜಿನ ಮೇಲಿಟ್ಟು
ಜಗತ್ತಿಗೇ ತೋರಿಸಿ ಹೇಳಿದೆ-
ನೋಡಿ ಇಲ್ಲಿ ಕಾಶಿ, ಮಥುರಾ,
ಅಜಮೀರ, ಅಮೃತಸರ್
ಕಾಶ್ಮೀರ್, ಕನ್ಯಾಕುಮಾರಿಯ
ಸುಂದರ ಹೂಗಳಿವೆ-
ಮಂದಿರವೂ ಇಲ್ಲಿದೆ-
ಮಜ್ಜಿದವೂ ಇಲ್ಲಿದೆ ಮತ್ತೇ
ತಾಜಮಹಲಿನ ನೆರಳುಗಳೂ ಇಲ್ಲಿವೆ-
ಪೈಗಂಬರರ ಪರಿಛಾಯೆ-
ರಾಮನ ನಾಮವೂ ಇಲ್ಲಿದೆ
ಹಿಂದು-ಮುಸಲ್ಮಾನರಿಬ್ಬರೂ
ಭಾರತಾಂಬೆಯ ಎರಡು ಕಣ್ಣುಗಳು,
ಅವರ ರಕ್ತದ ಓಕುಳಿ
ಅಶುಭದ ಸಂಕೇತ;

ಉನ್ನತ ಹಿಮಾಲಯದ ಎತ್ತರ
ಜಗತ್ತಿನ ದೃಷ್ಟಿಯಲ್ಲಿ
ಕುಬ್ಜವಾಗಲೆಂದೂ ಬಿಡೆವು ನಾವು.
ಮಾನವೀಯ ಮೌಲ್ಯಗಳು
ನಾಶವಾಗುವದನೆಂದೂ ಸಹಿಸೆವು ನಾವು
ದೇಶದ ಸರಹದ್ದುಗಳಿಗೆ
ಮಮತೆಯಿಂದ ಚುಂಬಿಸಿ,
ಹರಡಿದ ನಮ್ಮ ಕನಸುಗಳನು
ಒಟ್ಟುಗೂಡಿಸುವೆವು ನಾವು.
ಪರದೇಶಿ ಹದ್ದುಗಳ ನೆರಳು
ಪವಿತ್ರ ಭಾರತದ ಮೇಲೆ
ಎಂದಿಗೂ ಸಹಿಸೆವು ನಾವು.

ಸ್ನೇಹದ ಹಸ್ತ ನೀಡದೇ
ಗುಲಾಮಿಯ ಕೋಳ ತೊಡಿಸುವ
ಸಾಮ್ರಾಜ್ಯ ಶಾಹಿಗಳ ನೀತಿಗೆ
ಪಾಠ ಕಲಿಸುವೆವು ನಾವು
ಗುಲಾಮಗಿರಿಯ ಕೊಳವನು,
ಕತ್ತರಿಸುವ ಖಡ್ಗವ ವಾಗುವೆವು ನಾವು.
ಭಾರತದ ಸ್ವತಂತ್ರ ಸೂರ್ಯನ
ಪ್ರಖರ ತೇಜಸ್ಸನ್ನು ಜಗತ್ತಿಗೇ
ತೆಗೆದು ತೋರುವೆವು ನಾವು.
ಸ್ವಾತಂತ್ರ ಗೀತೆಯನು
ಸಂಭ್ರಮದಿಂದ ಹಾಡುವೆವು ನಾವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...