Home / ಕವನ / ಕವಿತೆ / ಸ್ವಾತಂತ್ರ ಗೀತೆ

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ
ವಿವಿಧ ಹೂಗಳ ಒಂದುಗೂಡಿಸಿ,
ಒಂದು ಹೂದಾನಿ ಅಲಂಕರಿಸಿ,
ಮೇಜಿನ ಮೇಲಿಟ್ಟು
ಜಗತ್ತಿಗೇ ತೋರಿಸಿ ಹೇಳಿದೆ-
ನೋಡಿ ಇಲ್ಲಿ ಕಾಶಿ, ಮಥುರಾ,
ಅಜಮೀರ, ಅಮೃತಸರ್
ಕಾಶ್ಮೀರ್, ಕನ್ಯಾಕುಮಾರಿಯ
ಸುಂದರ ಹೂಗಳಿವೆ-
ಮಂದಿರವೂ ಇಲ್ಲಿದೆ-
ಮಜ್ಜಿದವೂ ಇಲ್ಲಿದೆ ಮತ್ತೇ
ತಾಜಮಹಲಿನ ನೆರಳುಗಳೂ ಇಲ್ಲಿವೆ-
ಪೈಗಂಬರರ ಪರಿಛಾಯೆ-
ರಾಮನ ನಾಮವೂ ಇಲ್ಲಿದೆ
ಹಿಂದು-ಮುಸಲ್ಮಾನರಿಬ್ಬರೂ
ಭಾರತಾಂಬೆಯ ಎರಡು ಕಣ್ಣುಗಳು,
ಅವರ ರಕ್ತದ ಓಕುಳಿ
ಅಶುಭದ ಸಂಕೇತ;

ಉನ್ನತ ಹಿಮಾಲಯದ ಎತ್ತರ
ಜಗತ್ತಿನ ದೃಷ್ಟಿಯಲ್ಲಿ
ಕುಬ್ಜವಾಗಲೆಂದೂ ಬಿಡೆವು ನಾವು.
ಮಾನವೀಯ ಮೌಲ್ಯಗಳು
ನಾಶವಾಗುವದನೆಂದೂ ಸಹಿಸೆವು ನಾವು
ದೇಶದ ಸರಹದ್ದುಗಳಿಗೆ
ಮಮತೆಯಿಂದ ಚುಂಬಿಸಿ,
ಹರಡಿದ ನಮ್ಮ ಕನಸುಗಳನು
ಒಟ್ಟುಗೂಡಿಸುವೆವು ನಾವು.
ಪರದೇಶಿ ಹದ್ದುಗಳ ನೆರಳು
ಪವಿತ್ರ ಭಾರತದ ಮೇಲೆ
ಎಂದಿಗೂ ಸಹಿಸೆವು ನಾವು.

ಸ್ನೇಹದ ಹಸ್ತ ನೀಡದೇ
ಗುಲಾಮಿಯ ಕೋಳ ತೊಡಿಸುವ
ಸಾಮ್ರಾಜ್ಯ ಶಾಹಿಗಳ ನೀತಿಗೆ
ಪಾಠ ಕಲಿಸುವೆವು ನಾವು
ಗುಲಾಮಗಿರಿಯ ಕೊಳವನು,
ಕತ್ತರಿಸುವ ಖಡ್ಗವ ವಾಗುವೆವು ನಾವು.
ಭಾರತದ ಸ್ವತಂತ್ರ ಸೂರ್ಯನ
ಪ್ರಖರ ತೇಜಸ್ಸನ್ನು ಜಗತ್ತಿಗೇ
ತೆಗೆದು ತೋರುವೆವು ನಾವು.
ಸ್ವಾತಂತ್ರ ಗೀತೆಯನು
ಸಂಭ್ರಮದಿಂದ ಹಾಡುವೆವು ನಾವು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...