Home / ಕಥೆ / ಸಣ್ಣ ಕಥೆ / ತಿಮ್ಮರಾಜ ಒಡೆಯರು

ತಿಮ್ಮರಾಜ ಒಡೆಯರು

ಬೆಟ್ಟದ ಚಾಮರಾಜ ಒಡೆಯರಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಹಿರಿಯರಾದ ತಿಮ್ಮರಾಜ ಒಡೆಯರಿಗೆ ಹೆಮ್ಮನಹಳ್ಳಿಯು ಲಭಿಸಿತು. ಈ ತಿಮ್ಮರಾಜ ಒಡೆಯರು ಒಂಭತ್ತು ಮೈಲು ದೂರದಲ್ಲಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವರಲ್ಲಿ ಬಹಳ ಭಕ್ತಿಯನ್ನಿಟ್ಟಿದ್ದರು. ಆದರೆ ನಂಜನಗೂಡಿಗೆ ಹೋಗುವ ಮಾರ್ಗದಲ್ಲಿಯೇ ಸ್ವತಂತ್ರರಾದ ಇಬ್ಬರು ಪಾಳೆಯಗಾರರು ಆಳುತ್ತಿದ್ದರು. ಹೋದಾಗಲೆಲ್ಲ ಆ ಪಾಳಯಗಾರರ ಅನುಮತಿಯನ್ನು ಕೇಳಬೇಕಾಗಿತ್ತು.

ತಿಮ್ಮರಾಜರ ವೈಭವವನ್ನ ಆ ಪಾಳೆಯಗಾರರು ಸಹಿಸದೆ ಅಸೂಯೆ ಪಡುತ್ತಿದ್ದರು. ಒಂದು ಸಲ ತಿಮ್ಮರಾಜ ಒಡೆಯರು ಮುನ್ನೂರು ಭಟರನ್ನು ಮೈಗಾವಲಿಗೆ ಕರೆದುಕೊಂಡು ಅಟ್ಟಹಾಸದಿಂದ ನಂಜನಗೂಡಿಗೆ ಹೋಗಿ ಪೂಜೆ ಮಾಡಿಸಿ ಸಮಾರಾಧನೆ ಮಾಡಿಸಿದರು. ಆಗ ಅಸೂಯೆಯನ್ನು ತಾಳಲಾರದೆ ಆ ಪಾಳಯಗಾರು ಕಾಲುಕೆರೆದು ಜಗಳವಾಡಿದರು. ಯುದ್ಧವೇ ಆಯಿತು. ಹೊಡೆದಾಟದಲ್ಲಿ ಅನೇಕರು ಸತ್ತರು. ಆದರೆ ತಿಮ್ಮರಾಜ ಒಡೆಯರು ಜಯಶೀಲರಾದರು. ಕೂಡಲೆ ತನಗೆ ಶತ್ರುವಾಗಿದ್ದ ಉಮ್ಮತ್ತೂರಿನ ಒಡೆಯರಿಂದ ಕಪ್ಪಕಾಣಿಕೆಯನ್ನು ಸುಲಿದುಕೊಂಡು. ತಮ್ಮ ಪ್ರಾಬಲ್ಯವನ್ನು ರಕ್ಷಿಸಿಕೊಂಡರು.
*****
[ವಿಸ್ಕ್ಸ್; ಸಂಪುಟ ೧- ಪುಟ ೨೨]

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...