Home / ಕಥೆ / ಸಣ್ಣ ಕಥೆ / ತಿಮ್ಮರಾಜ ಒಡೆಯರು

ತಿಮ್ಮರಾಜ ಒಡೆಯರು

ಬೆಟ್ಟದ ಚಾಮರಾಜ ಒಡೆಯರಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಹಿರಿಯರಾದ ತಿಮ್ಮರಾಜ ಒಡೆಯರಿಗೆ ಹೆಮ್ಮನಹಳ್ಳಿಯು ಲಭಿಸಿತು. ಈ ತಿಮ್ಮರಾಜ ಒಡೆಯರು ಒಂಭತ್ತು ಮೈಲು ದೂರದಲ್ಲಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವರಲ್ಲಿ ಬಹಳ ಭಕ್ತಿಯನ್ನಿಟ್ಟಿದ್ದರು. ಆದರೆ ನಂಜನಗೂಡಿಗೆ ಹೋಗುವ ಮಾರ್ಗದಲ್ಲಿಯೇ ಸ್ವತಂತ್ರರಾದ ಇಬ್ಬರು ಪಾಳೆಯಗಾರರು ಆಳುತ್ತಿದ್ದರು. ಹೋದಾಗಲೆಲ್ಲ ಆ ಪಾಳಯಗಾರರ ಅನುಮತಿಯನ್ನು ಕೇಳಬೇಕಾಗಿತ್ತು.

ತಿಮ್ಮರಾಜರ ವೈಭವವನ್ನ ಆ ಪಾಳೆಯಗಾರರು ಸಹಿಸದೆ ಅಸೂಯೆ ಪಡುತ್ತಿದ್ದರು. ಒಂದು ಸಲ ತಿಮ್ಮರಾಜ ಒಡೆಯರು ಮುನ್ನೂರು ಭಟರನ್ನು ಮೈಗಾವಲಿಗೆ ಕರೆದುಕೊಂಡು ಅಟ್ಟಹಾಸದಿಂದ ನಂಜನಗೂಡಿಗೆ ಹೋಗಿ ಪೂಜೆ ಮಾಡಿಸಿ ಸಮಾರಾಧನೆ ಮಾಡಿಸಿದರು. ಆಗ ಅಸೂಯೆಯನ್ನು ತಾಳಲಾರದೆ ಆ ಪಾಳಯಗಾರು ಕಾಲುಕೆರೆದು ಜಗಳವಾಡಿದರು. ಯುದ್ಧವೇ ಆಯಿತು. ಹೊಡೆದಾಟದಲ್ಲಿ ಅನೇಕರು ಸತ್ತರು. ಆದರೆ ತಿಮ್ಮರಾಜ ಒಡೆಯರು ಜಯಶೀಲರಾದರು. ಕೂಡಲೆ ತನಗೆ ಶತ್ರುವಾಗಿದ್ದ ಉಮ್ಮತ್ತೂರಿನ ಒಡೆಯರಿಂದ ಕಪ್ಪಕಾಣಿಕೆಯನ್ನು ಸುಲಿದುಕೊಂಡು. ತಮ್ಮ ಪ್ರಾಬಲ್ಯವನ್ನು ರಕ್ಷಿಸಿಕೊಂಡರು.
*****
[ವಿಸ್ಕ್ಸ್; ಸಂಪುಟ ೧- ಪುಟ ೨೨]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...