ಶಾಂತಿಗಾಗಿ

ಆಕಾಶಮಾರ್ಗದಲ್ಲಿ
ಗಾಂಧಿಹೊರಟಿದ್ದು ಕಂಡೆ
ಇದು ಡಿಸೆಂಬರ ಚಳಿಗಾಲ
ಬೆಚ್ಚಗೆ ಹೊದ್ದುಕೊಂಡು
ನಡಿಬಾರ್‍ದಾ ಹುಚ್ಚಪ್ಪಾ ಎಂದೆ
ಎಲ್ಲಿಯ ಚಳಿ ಎಲ್ಲಿಯ ಮಳೆ
ಎಲ್ಲರೆದೆ ಹೊತ್ತಿ ಉರಿಯುವಾಗ
ನನ್ನದೇನು ಬಿಡು…..
ಎನೇನೋ ಗೊಣಗುತ್ತಾ
ವಿಮಾನ ಹಿಂದಿಕ್ಕುವಂತೆ
ಬರಿಗಾಲಲ್ಲಿ ಓಡುತ್ತಲೇ ಇದ್ದ.

ಅದೇನವಸರ ಎಲ್ಲಿಗೆ ಹೊರಟಿದ್ದು? ಎಂದೆ.
ಶಾಂತಿಗಾಗಿ, ತಾಲಿಬಾನಿಗರ ಶಾಂತಿಗಾಗಿ
ಗುಡುಗಿದ, ಮೋಡಗುಡುಗಿತು
ಒದ್ದೆ ಕಣ್ಣೊಳಗೂ ಆಶಾವಾದಿ ಮುದುಕ
ಓಡುತ್ತಲೇ ಇದ್ದ.

ಆಶ್ರಮದಿಂದ ತರಲೇ ನಿನ್ನ ಕೋಲು
ಚೆಸ್ಮಾ, ಚಪ್ಪಲಿ – ಎಷ್ಟೊಂದು ಸಣ್ಣಗಾಗಿರುವಿ
ಎದೆಮೂಳೆ, ಬೆನ್ನಿಗೆಹತ್ತಿದ ಹೊಟ್ಟೆ
ಯಾಕಿದೆಲ್ಲ ನಿನಗೆ ಬೇಕು ಅಜ್ಜಾ
ನಿನ್ನ ಶಾಂತಿಮಂತ್ರ
ತಲೆಕೆಳಗಾಗಿ ದೇಶದಲ್ಲೇ ಬಿದ್ದಿದೆ
ಸಾಕು ಸಾಕಿನ್ನು-
ವಿಮಾನ ಬಾಗಿಲು ತೆರೆದು ಎಳೆದುಕೊಂಡೆ
ಬೆಚ್ಚಗೆ ಹೊದಿಸಿ ಸುಮ್ಮನೆ ಕೂಡಿಸಬೇಕೆಂದೆ
ಅಷ್ಟರಲ್ಲೇ….. ಮತ್ತೊಂದು ಬಾಗಿಲು
ತೆರೆದು ನಡೆದೇಬಿಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕನ ಭಾವಗೀತೆ
Next post ನೃತ್ಯ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys