ಶಾಂತಿಗಾಗಿ

ಆಕಾಶಮಾರ್ಗದಲ್ಲಿ
ಗಾಂಧಿಹೊರಟಿದ್ದು ಕಂಡೆ
ಇದು ಡಿಸೆಂಬರ ಚಳಿಗಾಲ
ಬೆಚ್ಚಗೆ ಹೊದ್ದುಕೊಂಡು
ನಡಿಬಾರ್‍ದಾ ಹುಚ್ಚಪ್ಪಾ ಎಂದೆ
ಎಲ್ಲಿಯ ಚಳಿ ಎಲ್ಲಿಯ ಮಳೆ
ಎಲ್ಲರೆದೆ ಹೊತ್ತಿ ಉರಿಯುವಾಗ
ನನ್ನದೇನು ಬಿಡು…..
ಎನೇನೋ ಗೊಣಗುತ್ತಾ
ವಿಮಾನ ಹಿಂದಿಕ್ಕುವಂತೆ
ಬರಿಗಾಲಲ್ಲಿ ಓಡುತ್ತಲೇ ಇದ್ದ.

ಅದೇನವಸರ ಎಲ್ಲಿಗೆ ಹೊರಟಿದ್ದು? ಎಂದೆ.
ಶಾಂತಿಗಾಗಿ, ತಾಲಿಬಾನಿಗರ ಶಾಂತಿಗಾಗಿ
ಗುಡುಗಿದ, ಮೋಡಗುಡುಗಿತು
ಒದ್ದೆ ಕಣ್ಣೊಳಗೂ ಆಶಾವಾದಿ ಮುದುಕ
ಓಡುತ್ತಲೇ ಇದ್ದ.

ಆಶ್ರಮದಿಂದ ತರಲೇ ನಿನ್ನ ಕೋಲು
ಚೆಸ್ಮಾ, ಚಪ್ಪಲಿ – ಎಷ್ಟೊಂದು ಸಣ್ಣಗಾಗಿರುವಿ
ಎದೆಮೂಳೆ, ಬೆನ್ನಿಗೆಹತ್ತಿದ ಹೊಟ್ಟೆ
ಯಾಕಿದೆಲ್ಲ ನಿನಗೆ ಬೇಕು ಅಜ್ಜಾ
ನಿನ್ನ ಶಾಂತಿಮಂತ್ರ
ತಲೆಕೆಳಗಾಗಿ ದೇಶದಲ್ಲೇ ಬಿದ್ದಿದೆ
ಸಾಕು ಸಾಕಿನ್ನು-
ವಿಮಾನ ಬಾಗಿಲು ತೆರೆದು ಎಳೆದುಕೊಂಡೆ
ಬೆಚ್ಚಗೆ ಹೊದಿಸಿ ಸುಮ್ಮನೆ ಕೂಡಿಸಬೇಕೆಂದೆ
ಅಷ್ಟರಲ್ಲೇ….. ಮತ್ತೊಂದು ಬಾಗಿಲು
ತೆರೆದು ನಡೆದೇಬಿಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕನ ಭಾವಗೀತೆ
Next post ನೃತ್ಯ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…