ಶಾಂತಿಗಾಗಿ

ಆಕಾಶಮಾರ್ಗದಲ್ಲಿ
ಗಾಂಧಿಹೊರಟಿದ್ದು ಕಂಡೆ
ಇದು ಡಿಸೆಂಬರ ಚಳಿಗಾಲ
ಬೆಚ್ಚಗೆ ಹೊದ್ದುಕೊಂಡು
ನಡಿಬಾರ್‍ದಾ ಹುಚ್ಚಪ್ಪಾ ಎಂದೆ
ಎಲ್ಲಿಯ ಚಳಿ ಎಲ್ಲಿಯ ಮಳೆ
ಎಲ್ಲರೆದೆ ಹೊತ್ತಿ ಉರಿಯುವಾಗ
ನನ್ನದೇನು ಬಿಡು…..
ಎನೇನೋ ಗೊಣಗುತ್ತಾ
ವಿಮಾನ ಹಿಂದಿಕ್ಕುವಂತೆ
ಬರಿಗಾಲಲ್ಲಿ ಓಡುತ್ತಲೇ ಇದ್ದ.

ಅದೇನವಸರ ಎಲ್ಲಿಗೆ ಹೊರಟಿದ್ದು? ಎಂದೆ.
ಶಾಂತಿಗಾಗಿ, ತಾಲಿಬಾನಿಗರ ಶಾಂತಿಗಾಗಿ
ಗುಡುಗಿದ, ಮೋಡಗುಡುಗಿತು
ಒದ್ದೆ ಕಣ್ಣೊಳಗೂ ಆಶಾವಾದಿ ಮುದುಕ
ಓಡುತ್ತಲೇ ಇದ್ದ.

ಆಶ್ರಮದಿಂದ ತರಲೇ ನಿನ್ನ ಕೋಲು
ಚೆಸ್ಮಾ, ಚಪ್ಪಲಿ – ಎಷ್ಟೊಂದು ಸಣ್ಣಗಾಗಿರುವಿ
ಎದೆಮೂಳೆ, ಬೆನ್ನಿಗೆಹತ್ತಿದ ಹೊಟ್ಟೆ
ಯಾಕಿದೆಲ್ಲ ನಿನಗೆ ಬೇಕು ಅಜ್ಜಾ
ನಿನ್ನ ಶಾಂತಿಮಂತ್ರ
ತಲೆಕೆಳಗಾಗಿ ದೇಶದಲ್ಲೇ ಬಿದ್ದಿದೆ
ಸಾಕು ಸಾಕಿನ್ನು-
ವಿಮಾನ ಬಾಗಿಲು ತೆರೆದು ಎಳೆದುಕೊಂಡೆ
ಬೆಚ್ಚಗೆ ಹೊದಿಸಿ ಸುಮ್ಮನೆ ಕೂಡಿಸಬೇಕೆಂದೆ
ಅಷ್ಟರಲ್ಲೇ….. ಮತ್ತೊಂದು ಬಾಗಿಲು
ತೆರೆದು ನಡೆದೇಬಿಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕನ ಭಾವಗೀತೆ
Next post ನೃತ್ಯ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…