ಧನ್ಯತೆಯ ಕನಸಿಗೆ

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ
ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ
ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”?
ಹೊರಟಿಹೆ ಗಬ್ಬೆದ್ದ ದೇಹ ಮನಸು
ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ-
ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು.
ಪಾಪ ಪ್ರಜ್ಞೆ ಕಾಡಿ ಪ್ರಾಯಶ್ಚಿತ ಬಯಸಿ
ಹೊರಟಿರುವ ಜೋಲು ಮುಖದ
ಕ್ಯಾಮಲೀನಾ ಮೌನಿ
ಮನದೊಳಗೆ ನೂರಾರು ಪ್ರಶ್ನೆಗಳ ಮೂಕಿ.

ಗಂಗೆಯ ಪಾದಕೆ ತಲೆಬಾಗಿಸಿ
ಪುಣ್ಯಭೂಮಿಯ ಮಣ್ಣು ಸ್ಪರ್ಶಿಸಿ
ಧನ್ಯತೆಯ ಭಾವ ಬಯಕೆಯ ಕನಸಿಗೆ
ಸಮಾಧಾನದ ನಾಲ್ಕು ಮಾತು ಮುತ್ತಾಯಿತವಳಿಗೆ
ಕಣ್ತುಂಬಿದ ನೀರು
ಆತ್ಮಶುದ್ದೀಕರಣದ ಮೊದಲು ಮೆಟ್ಟಿಲು

ಒಳಗೊಳಗೇ ವ್ಯಥೆ
ಆ ರಾಡಿಮಣ್ಣು ಈ ನೀರಿನಲಿ ತೊಳೆಸುವದಾ?
ಅಪವಿತ್ರ ಪವಿತ್ರ
ಪವಿತ್ರ ಅಪವಿತ್ರ-ಪವಿತ್ರ.

ಸುಳಿಸುಳಿಯೊಳಗೆ ಹರಿದಾಡಿ ಹೊರಳಾಡಿ
ಅಪ್ಪಿ ಸ್ಪರ್ಶಿಸಿ ಬಂದವರಿಗೆ
ರಮಿಸಿ ಕೈಹಿಡಿವ ಪಾವಣಿ ದಯಾಮಯಿ

ದಿಲ್ಲಿ ನೆಲಕ್ಕಿಳಿದು ಬಿಳ್ಕೊಂಡ
ಕ್ಯಾಮಿಲಾಳ ಬಿಗಿಯಪ್ಪುಗೆ
ಮನದೊಳಗೆ ಆರ್ಧ್ರತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಧವತಿ
Next post ಮಾತು – ಮೌನ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys