ಧನ್ಯತೆಯ ಕನಸಿಗೆ

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ
ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ
ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”?
ಹೊರಟಿಹೆ ಗಬ್ಬೆದ್ದ ದೇಹ ಮನಸು
ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ-
ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು.
ಪಾಪ ಪ್ರಜ್ಞೆ ಕಾಡಿ ಪ್ರಾಯಶ್ಚಿತ ಬಯಸಿ
ಹೊರಟಿರುವ ಜೋಲು ಮುಖದ
ಕ್ಯಾಮಲೀನಾ ಮೌನಿ
ಮನದೊಳಗೆ ನೂರಾರು ಪ್ರಶ್ನೆಗಳ ಮೂಕಿ.

ಗಂಗೆಯ ಪಾದಕೆ ತಲೆಬಾಗಿಸಿ
ಪುಣ್ಯಭೂಮಿಯ ಮಣ್ಣು ಸ್ಪರ್ಶಿಸಿ
ಧನ್ಯತೆಯ ಭಾವ ಬಯಕೆಯ ಕನಸಿಗೆ
ಸಮಾಧಾನದ ನಾಲ್ಕು ಮಾತು ಮುತ್ತಾಯಿತವಳಿಗೆ
ಕಣ್ತುಂಬಿದ ನೀರು
ಆತ್ಮಶುದ್ದೀಕರಣದ ಮೊದಲು ಮೆಟ್ಟಿಲು

ಒಳಗೊಳಗೇ ವ್ಯಥೆ
ಆ ರಾಡಿಮಣ್ಣು ಈ ನೀರಿನಲಿ ತೊಳೆಸುವದಾ?
ಅಪವಿತ್ರ ಪವಿತ್ರ
ಪವಿತ್ರ ಅಪವಿತ್ರ-ಪವಿತ್ರ.

ಸುಳಿಸುಳಿಯೊಳಗೆ ಹರಿದಾಡಿ ಹೊರಳಾಡಿ
ಅಪ್ಪಿ ಸ್ಪರ್ಶಿಸಿ ಬಂದವರಿಗೆ
ರಮಿಸಿ ಕೈಹಿಡಿವ ಪಾವಣಿ ದಯಾಮಯಿ

ದಿಲ್ಲಿ ನೆಲಕ್ಕಿಳಿದು ಬಿಳ್ಕೊಂಡ
ಕ್ಯಾಮಿಲಾಳ ಬಿಗಿಯಪ್ಪುಗೆ
ಮನದೊಳಗೆ ಆರ್ಧ್ರತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಧವತಿ
Next post ಮಾತು – ಮೌನ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…