ಗಂಧವತಿ

ರಶ್ಮಿ ರಥವನೇರಿ ಬರುವ
ಸೂರ್ಯ ನನ್ನಯ ಕಾಂತಿಯು,
ಬ್ರಹ್ಮ ಬೆಸೆದ ಗಂಟ ನಂಟಿನಿನಿಯ
ಜೀವನ ಸಂಗಾತಿಯು |

ಇರುಳ ಬೇಗುದಿಯ ಕಳೆವ
ಮೂಡಲೆಡೆಗೆ ಚಿತ್ತವು.
ಅಡಿಯಿಟ್ಟನೆಲೆಯ ಹದುಳತನವೆ
ಬಾಳ ಮಧುಬನ ಚೈತ್ರವು.

ಅತ್ತ ಇತ್ತ ಸುತ್ತ ಜೋಕೆಯಿಂದ
ಕಿರಣದೆಡೆಗೆ ಯಾನವು,
ಸಂಕರಗಳ ಶೂಲ ಜಾಲ ಜಾಲದಲ್ಲೂ
ನಗುವಿನೆಡೆಗೆ ಧ್ಯಾನವು,

ಅರವಿಂದನುರಿಯ ಬಿಂಕು ಮಾತಿಗೂ
ಒಲವ ಬೆಸೆಸೊ ಭೂಮಿಕೆ,
ಶಶಿಯ ತಿಂಗಳ ತಂಬೆಳಕಿನಂಗಳ
ಸುರತಿ ಸುಖಕೆ ಪೀಠಿಕೆ,

ಮಳೆ ತವರ ಮೌನಕೆ ಪ್ರಕೃತಿ ತಾಪಕೆ
ಜೀವವಾಗುತೆ ತಲ್ಲಣ,
ಮಾನಧನನ ಹಗೆಯ ಬಗೆ ಬಗೆ ಬೆಂಕಿಗೆ
ಚಿತೆಗೇರುತೆ ಹೆಣ್ಣ ಹೆಣ,

ಮಣ್ಣನೆತ್ತರು ಬಸಿದಿತ್ತು ಹೆತ್ತರು
ಹೊನ್ನ ಜಠರವೆ ನಾಶವು,
ಕವಿದ ಆಸೆಯ ಮಾಯಾ ಛಾಯೆಯು
ಎನ್ನ ಕುಲಕೆ ಮೃತ್ಯುವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಧನ್ಯತೆಯ ಕನಸಿಗೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys