ಗಂಧವತಿ

ರಶ್ಮಿ ರಥವನೇರಿ ಬರುವ
ಸೂರ್ಯ ನನ್ನಯ ಕಾಂತಿಯು,
ಬ್ರಹ್ಮ ಬೆಸೆದ ಗಂಟ ನಂಟಿನಿನಿಯ
ಜೀವನ ಸಂಗಾತಿಯು |

ಇರುಳ ಬೇಗುದಿಯ ಕಳೆವ
ಮೂಡಲೆಡೆಗೆ ಚಿತ್ತವು.
ಅಡಿಯಿಟ್ಟನೆಲೆಯ ಹದುಳತನವೆ
ಬಾಳ ಮಧುಬನ ಚೈತ್ರವು.

ಅತ್ತ ಇತ್ತ ಸುತ್ತ ಜೋಕೆಯಿಂದ
ಕಿರಣದೆಡೆಗೆ ಯಾನವು,
ಸಂಕರಗಳ ಶೂಲ ಜಾಲ ಜಾಲದಲ್ಲೂ
ನಗುವಿನೆಡೆಗೆ ಧ್ಯಾನವು,

ಅರವಿಂದನುರಿಯ ಬಿಂಕು ಮಾತಿಗೂ
ಒಲವ ಬೆಸೆಸೊ ಭೂಮಿಕೆ,
ಶಶಿಯ ತಿಂಗಳ ತಂಬೆಳಕಿನಂಗಳ
ಸುರತಿ ಸುಖಕೆ ಪೀಠಿಕೆ,

ಮಳೆ ತವರ ಮೌನಕೆ ಪ್ರಕೃತಿ ತಾಪಕೆ
ಜೀವವಾಗುತೆ ತಲ್ಲಣ,
ಮಾನಧನನ ಹಗೆಯ ಬಗೆ ಬಗೆ ಬೆಂಕಿಗೆ
ಚಿತೆಗೇರುತೆ ಹೆಣ್ಣ ಹೆಣ,

ಮಣ್ಣನೆತ್ತರು ಬಸಿದಿತ್ತು ಹೆತ್ತರು
ಹೊನ್ನ ಜಠರವೆ ನಾಶವು,
ಕವಿದ ಆಸೆಯ ಮಾಯಾ ಛಾಯೆಯು
ಎನ್ನ ಕುಲಕೆ ಮೃತ್ಯುವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಧನ್ಯತೆಯ ಕನಸಿಗೆ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…