Home / ಕಥೆ / ಸಣ್ಣ ಕಥೆ / ಬೋಳತಲೆ ಒಡೆಯರು

ಬೋಳತಲೆ ಒಡೆಯರು

ದೊರೆಗಳಾಗಿದ್ದ ಚಾಮರಾಜ ಒಡೆಯರವರು ಬಹಳ ಭಕ್ತರಾಗಿದ್ದರು. ಮನೆ ದೇವತೆಯಾದ ಚಾಮುಂಡೇಶ್ವರಿಯಲ್ಲಂತೂ ಅವರಿಗೆ ಅತಿಶಯವಾದ ಭಕ್ತಿಯಿತ್ತು. ಪಟ್ಟವನ್ನೇರಿದ ಮೇಲೆ ಒಡೆಯರು ಒಂದು ಅಮಾವಾಸ್ಯೆಯ ರಾತ್ರಿ ಅಮ್ಮನವರ ಪೂಜೆಗೆಂದು ಪರಿವಾರದೊಡನೆ ಮಡಿಯುಟ್ಟು ಬೆಟ್ಟಕ್ಕೆ ಹೊರಟರು. ಗಾಢಾಂಧಕಾರ; ಪಂಜುಗಳನ್ನು ಹಿಡಿಸಿಕೊಂಡು ದಾರಿಯನ್ನು ಕಳೆದು ಬೆಟ್ಟವನ್ನು ಹತ್ತಲು ದೊರೆಗಳು ಮೊದಲಿಟ್ಟರು. ಅದೇ ವೇಳೆಗೆ ಸರಿಯಾಗಿ ಆಕಾಶದಲ್ಲಿ ಕಾರ್ಮೋಡಗಳು ಕವಿದುಕೊಂಡು ಗುಡುಗು ಮಿಂಚೂ ಮೊದಲಾಯಿತು. ಬೆಟ್ಟವನ್ನು ಹತ್ತುತ್ತ ಗುಡುಗು ಇನ್ನೂ ಹೆಚ್ಚಾಯಿತು. ಕಿಬ್ಬಿಯು ಭಯಂಕರವಾಗಿತ್ತು. ಇದ್ದಕ್ಕಿದ್ದ ಹಾಗೆಯೇ ಗಗನವನ್ನು ಭೇದಿಸಿಕೊಂಡು ಪ್ರಳಯ ಕಾಲದಲ್ಲಿ ನಡೆಯುವಂತೆ ಬರಸಿಡಿಲು, ರಾಜರ ಸಮೀಪದಲ್ಲಿಯೇ ಬಿತ್ತು. ಎಲ್ಲಿದ್ದವರು ಅಲ್ಲಿಯೇ ನೆಲಕ್ಕೆ ಬಿದ್ದುಬಿಟ್ಟರು; ಅನೇಕರು ಮೂರ್ಛಿತರಾದರು; ಸಿಡಿಲು ಬಿದ್ದುದು, ಹೋದುದು ಯಾರಿಗೂ ತಿಳಿಯಲಿಲ್ಲ. ಎಲ್ಲರೂ ನಿಶ್ಚೇಷ್ಟಿತರಾಗಿದ್ದರು ಎರಡು ತಾಸುಗಳ ಕಾಲ. ತರುವಾಯ ದೊರೆಗಳೆದ್ದು ಕುಳಿತು ಸುತ್ತಲೂ ನೋಡಿದರು. ಆಕಾಶವೇನೊ ಸ್ತಬ್ಧವಾಗಿತ್ತು; ಕಗ್ಗತ್ತಲು; ಮಳೆ ಯಿಲ್ಲ; ಆದ ಗಿಡಬಳ್ಳಿಗಳು ಗಾಳಿಗೆ ಸಿಕ್ಕಿ ಸುಯ್ಸುಯ್ ಎಂದು ನಿಟ್ಟುಸಿರುಬಿಡುತ್ತಿದ್ದಂತಿದ್ದವು. ರಾಜರೆದ್ದು ಪಕ್ಕದಲ್ಲಿ ಬಿದ್ದಿದ್ದವನನ್ನು ಎಚ್ಚರಿಸಲು ಪ್ರಯತ್ನಿಸಿದರು. ಪ್ರಾಣವೇ ಇಲ್ಲ; ಒಬ್ಬೊರನ್ನಾಗಿ ನೋಡುತ್ತಿರಲು ಕಡೆಗೆ ಒಬ್ಬನು ಮೂರ್ಛೆ ತಿಳಿದೆದ್ದು ಕುಳಿತು ಸ್ವಲ್ಪ ಕಾಲ ಬೆಪ್ಪಾಗಿ ನೋಡುತ್ತಲಿದ್ದು ಆಮೇಲೆ ಪಂಜನ್ನು ಹೊತ್ತಿಸಿ ರಾಜರನ್ನು ಗುರುತಿಸಿ ಅಳುತ್ತ “ಏನಾಯಿತು! ಮಹಾಸ್ವಾಮೀ! ಏನಾಯಿತು!!” ಎಂದು ಗದ್ಗದ ಸ್ವರದಿಂದ ಕೇಳಿದನು. ದೂರೆಗಳಿಗೆ ತಿಳಿಯಲಿಲ್ಲ; ಇವನು ಹೆದರಿದ್ದಾನೆಂದು “ಭಯಪಡಬೇಡವಯ್ಯ; ಇದು ದುರ್ಗಿಯ ಆಟ ಮಾತ್ರ! ಎಲ್ಲವೂ ಶಾಂತವಾಯಿತು. ಇನ್ನೇಕೆ ಅಳುಕು? ” ಎಂದು ಸಮಾಧಾನ ಪಡಿಸಿದರು. ಅದಕ್ಕೆ ಅವನು ಹೆದರಿಕೆಯಿಲ್ಲ, ಪ್ರಭು, ಅದರೆ ತಮ್ಮ…. ಜುಟ್ಟು, ಜುಟ್ಟು!” ಎಂದನು. ದೊರೆಗಳು ಆಗ ತಲೆಯನ್ನು ಸವರಿಕೊಂಡು ನೋಡಿಕೊಂಡರು-ತಲೆಯ ಕೂದಲೆಲ್ಲಾ ಉದುರಿಹೋಗಿ ಬೋಳಾಗಿಬಿಟ್ಟಿತ್ತು.

ಆಗ ರಾಜರು “ಇದಕ್ಕೇ ನಿನಗೆ ದುಃಖ! ಹೋಗಲಿ ಬಿಡು ಅಮ್ಮನವರಿಗೆ ಇಷ್ಟಕ್ಕೆ ತೃಪ್ತಿಯಾಯಿತು! ಪ್ರಾಣಕ್ಕೆ ಹಾನಿಯಲ್ಲವಲ್ಲ” ಎಂದರು. ತರುವಾಯ ಇಬ್ಬರೂ ಪೂಜೆ ಮುಗಿಸಿಕೊಂಡು ಅನುಚರರೊಡನೆ ಹಿಂತಿರುಗಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...