Home / ಕಥೆ / ಸಣ್ಣ ಕಥೆ / ಬೋಳತಲೆ ಒಡೆಯರು

ಬೋಳತಲೆ ಒಡೆಯರು

ದೊರೆಗಳಾಗಿದ್ದ ಚಾಮರಾಜ ಒಡೆಯರವರು ಬಹಳ ಭಕ್ತರಾಗಿದ್ದರು. ಮನೆ ದೇವತೆಯಾದ ಚಾಮುಂಡೇಶ್ವರಿಯಲ್ಲಂತೂ ಅವರಿಗೆ ಅತಿಶಯವಾದ ಭಕ್ತಿಯಿತ್ತು. ಪಟ್ಟವನ್ನೇರಿದ ಮೇಲೆ ಒಡೆಯರು ಒಂದು ಅಮಾವಾಸ್ಯೆಯ ರಾತ್ರಿ ಅಮ್ಮನವರ ಪೂಜೆಗೆಂದು ಪರಿವಾರದೊಡನೆ ಮಡಿಯುಟ್ಟು ಬೆಟ್ಟಕ್ಕೆ ಹೊರಟರು. ಗಾಢಾಂಧಕಾರ; ಪಂಜುಗಳನ್ನು ಹಿಡಿಸಿಕೊಂಡು ದಾರಿಯನ್ನು ಕಳೆದು ಬೆಟ್ಟವನ್ನು ಹತ್ತಲು ದೊರೆಗಳು ಮೊದಲಿಟ್ಟರು. ಅದೇ ವೇಳೆಗೆ ಸರಿಯಾಗಿ ಆಕಾಶದಲ್ಲಿ ಕಾರ್ಮೋಡಗಳು ಕವಿದುಕೊಂಡು ಗುಡುಗು ಮಿಂಚೂ ಮೊದಲಾಯಿತು. ಬೆಟ್ಟವನ್ನು ಹತ್ತುತ್ತ ಗುಡುಗು ಇನ್ನೂ ಹೆಚ್ಚಾಯಿತು. ಕಿಬ್ಬಿಯು ಭಯಂಕರವಾಗಿತ್ತು. ಇದ್ದಕ್ಕಿದ್ದ ಹಾಗೆಯೇ ಗಗನವನ್ನು ಭೇದಿಸಿಕೊಂಡು ಪ್ರಳಯ ಕಾಲದಲ್ಲಿ ನಡೆಯುವಂತೆ ಬರಸಿಡಿಲು, ರಾಜರ ಸಮೀಪದಲ್ಲಿಯೇ ಬಿತ್ತು. ಎಲ್ಲಿದ್ದವರು ಅಲ್ಲಿಯೇ ನೆಲಕ್ಕೆ ಬಿದ್ದುಬಿಟ್ಟರು; ಅನೇಕರು ಮೂರ್ಛಿತರಾದರು; ಸಿಡಿಲು ಬಿದ್ದುದು, ಹೋದುದು ಯಾರಿಗೂ ತಿಳಿಯಲಿಲ್ಲ. ಎಲ್ಲರೂ ನಿಶ್ಚೇಷ್ಟಿತರಾಗಿದ್ದರು ಎರಡು ತಾಸುಗಳ ಕಾಲ. ತರುವಾಯ ದೊರೆಗಳೆದ್ದು ಕುಳಿತು ಸುತ್ತಲೂ ನೋಡಿದರು. ಆಕಾಶವೇನೊ ಸ್ತಬ್ಧವಾಗಿತ್ತು; ಕಗ್ಗತ್ತಲು; ಮಳೆ ಯಿಲ್ಲ; ಆದ ಗಿಡಬಳ್ಳಿಗಳು ಗಾಳಿಗೆ ಸಿಕ್ಕಿ ಸುಯ್ಸುಯ್ ಎಂದು ನಿಟ್ಟುಸಿರುಬಿಡುತ್ತಿದ್ದಂತಿದ್ದವು. ರಾಜರೆದ್ದು ಪಕ್ಕದಲ್ಲಿ ಬಿದ್ದಿದ್ದವನನ್ನು ಎಚ್ಚರಿಸಲು ಪ್ರಯತ್ನಿಸಿದರು. ಪ್ರಾಣವೇ ಇಲ್ಲ; ಒಬ್ಬೊರನ್ನಾಗಿ ನೋಡುತ್ತಿರಲು ಕಡೆಗೆ ಒಬ್ಬನು ಮೂರ್ಛೆ ತಿಳಿದೆದ್ದು ಕುಳಿತು ಸ್ವಲ್ಪ ಕಾಲ ಬೆಪ್ಪಾಗಿ ನೋಡುತ್ತಲಿದ್ದು ಆಮೇಲೆ ಪಂಜನ್ನು ಹೊತ್ತಿಸಿ ರಾಜರನ್ನು ಗುರುತಿಸಿ ಅಳುತ್ತ “ಏನಾಯಿತು! ಮಹಾಸ್ವಾಮೀ! ಏನಾಯಿತು!!” ಎಂದು ಗದ್ಗದ ಸ್ವರದಿಂದ ಕೇಳಿದನು. ದೂರೆಗಳಿಗೆ ತಿಳಿಯಲಿಲ್ಲ; ಇವನು ಹೆದರಿದ್ದಾನೆಂದು “ಭಯಪಡಬೇಡವಯ್ಯ; ಇದು ದುರ್ಗಿಯ ಆಟ ಮಾತ್ರ! ಎಲ್ಲವೂ ಶಾಂತವಾಯಿತು. ಇನ್ನೇಕೆ ಅಳುಕು? ” ಎಂದು ಸಮಾಧಾನ ಪಡಿಸಿದರು. ಅದಕ್ಕೆ ಅವನು ಹೆದರಿಕೆಯಿಲ್ಲ, ಪ್ರಭು, ಅದರೆ ತಮ್ಮ…. ಜುಟ್ಟು, ಜುಟ್ಟು!” ಎಂದನು. ದೊರೆಗಳು ಆಗ ತಲೆಯನ್ನು ಸವರಿಕೊಂಡು ನೋಡಿಕೊಂಡರು-ತಲೆಯ ಕೂದಲೆಲ್ಲಾ ಉದುರಿಹೋಗಿ ಬೋಳಾಗಿಬಿಟ್ಟಿತ್ತು.

ಆಗ ರಾಜರು “ಇದಕ್ಕೇ ನಿನಗೆ ದುಃಖ! ಹೋಗಲಿ ಬಿಡು ಅಮ್ಮನವರಿಗೆ ಇಷ್ಟಕ್ಕೆ ತೃಪ್ತಿಯಾಯಿತು! ಪ್ರಾಣಕ್ಕೆ ಹಾನಿಯಲ್ಲವಲ್ಲ” ಎಂದರು. ತರುವಾಯ ಇಬ್ಬರೂ ಪೂಜೆ ಮುಗಿಸಿಕೊಂಡು ಅನುಚರರೊಡನೆ ಹಿಂತಿರುಗಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...