Home / ಕವನ / ಕವಿತೆ / ಕಗ್ಗತ್ತಲಿನೊಳು

ಕಗ್ಗತ್ತಲಿನೊಳು

ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ
ಇಣುಕಿದರೆ ಕಿಡಿಕಿಯಿಂದ
ಕಗ್ಗತ್ತಲು ಭಯಾನಕ
ಭೂಮಿ ಆಕಾಶಗಳೆಲ್ಲೋ-
ಕಂಪನಿ ನಾಟಕದ ಕಪ್ಪು ತೆರೆಯಿಳಿದು
ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ
ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ
ಜಾಗ ಖಾಲಿ ಮಾಡಿ ಎಲ್ಲೋ ಕುಡಿದ ಮಂಪರು

ಸಮುದ್ರವೊ ಮರುಭೂಮಿಯೋ
ಮಿಣಿಮಿಣಿ ದೀಪಗಳು ಅಲ್ಲಲ್ಲಿ
ಹಡಗಿನವರಿದ್ದರೆ ತೆರಳುತಿರಬಹುದು
ಮನೆಗೊ ವ್ಯಾಪಾರಕೊ
ಮರುಭೂಮಿ ಇದ್ದರೆ
ಬಾವಿ ತೋಡುತ್ತಿರಬಹುದು ಪೆಟ್ರೋಲಿಗೆ…

ಕ್ಷಣಾರ್ಧದಲಿ ಮರೆಯಾಗಿ ಕಸಿವಿಸಿ
ಕಪ್ಪುಮೋಡಗಳ ಗ್ರಹಣ ಮತ್ತೆ ಮಿಣಿಮಿಣಿ
ರಾತ್ರಿ ಪಯಣಿಗ ಗುಮ್ಮನೆಯ ಕತ್ತಲು ಸೀಳಿ
ಹಾರ್ನ ಸದ್ದಿಲ್ಲ ಕಾಲುಗಾಲಿಗಳಿಲ್ಲ
ಹಾರುತಿದೆ ಓಡುತಿದೆ
ರಸ್ತೆಯೇ ಇಲ್ಲದ ವಿಶಾಲ ರಸ್ತೆಯಲಿ
ಪಂಚತಂತ್ರದ ಈ ಪಕ್ಷಿ

ಇಳಿಯಿತು ಇಳಿಯಿತು ಸೂರ್ಯನ ಅಮಲು
ಕಪ್ಪು ತೆರೆಸರಿದು
ಎಳೆ ಬೂದು ಹಳದಿ ನೀಲಿತೆರೆ
ದಾಟುತ ಶುಭ್ರಾವತಾರಕೆ ಅಣಿಯಾಗುತಿದೆ ಬೆಳಗು
ಬ್ರಾಹ್ಮಿ ಮುಹೂರ್ತ
ಚುಮುಚುಮು ನಸುಕು
ಯಂತ್ರಪಕ್ಷಿ ನೆಲತಬ್ಬುತಿರಲು
ಕುದುರೆಯ ಕೆನೆತದ ರಥವೇರಿ
ಸೂರ್ಯ ನಾಟಕವಾಡಿಸಲು ಹೊರಟ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...