Home / ಕವನ / ಕವಿತೆ / ಕಗ್ಗತ್ತಲಿನೊಳು

ಕಗ್ಗತ್ತಲಿನೊಳು

ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ
ಇಣುಕಿದರೆ ಕಿಡಿಕಿಯಿಂದ
ಕಗ್ಗತ್ತಲು ಭಯಾನಕ
ಭೂಮಿ ಆಕಾಶಗಳೆಲ್ಲೋ-
ಕಂಪನಿ ನಾಟಕದ ಕಪ್ಪು ತೆರೆಯಿಳಿದು
ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ
ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ
ಜಾಗ ಖಾಲಿ ಮಾಡಿ ಎಲ್ಲೋ ಕುಡಿದ ಮಂಪರು

ಸಮುದ್ರವೊ ಮರುಭೂಮಿಯೋ
ಮಿಣಿಮಿಣಿ ದೀಪಗಳು ಅಲ್ಲಲ್ಲಿ
ಹಡಗಿನವರಿದ್ದರೆ ತೆರಳುತಿರಬಹುದು
ಮನೆಗೊ ವ್ಯಾಪಾರಕೊ
ಮರುಭೂಮಿ ಇದ್ದರೆ
ಬಾವಿ ತೋಡುತ್ತಿರಬಹುದು ಪೆಟ್ರೋಲಿಗೆ…

ಕ್ಷಣಾರ್ಧದಲಿ ಮರೆಯಾಗಿ ಕಸಿವಿಸಿ
ಕಪ್ಪುಮೋಡಗಳ ಗ್ರಹಣ ಮತ್ತೆ ಮಿಣಿಮಿಣಿ
ರಾತ್ರಿ ಪಯಣಿಗ ಗುಮ್ಮನೆಯ ಕತ್ತಲು ಸೀಳಿ
ಹಾರ್ನ ಸದ್ದಿಲ್ಲ ಕಾಲುಗಾಲಿಗಳಿಲ್ಲ
ಹಾರುತಿದೆ ಓಡುತಿದೆ
ರಸ್ತೆಯೇ ಇಲ್ಲದ ವಿಶಾಲ ರಸ್ತೆಯಲಿ
ಪಂಚತಂತ್ರದ ಈ ಪಕ್ಷಿ

ಇಳಿಯಿತು ಇಳಿಯಿತು ಸೂರ್ಯನ ಅಮಲು
ಕಪ್ಪು ತೆರೆಸರಿದು
ಎಳೆ ಬೂದು ಹಳದಿ ನೀಲಿತೆರೆ
ದಾಟುತ ಶುಭ್ರಾವತಾರಕೆ ಅಣಿಯಾಗುತಿದೆ ಬೆಳಗು
ಬ್ರಾಹ್ಮಿ ಮುಹೂರ್ತ
ಚುಮುಚುಮು ನಸುಕು
ಯಂತ್ರಪಕ್ಷಿ ನೆಲತಬ್ಬುತಿರಲು
ಕುದುರೆಯ ಕೆನೆತದ ರಥವೇರಿ
ಸೂರ್ಯ ನಾಟಕವಾಡಿಸಲು ಹೊರಟ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...