Home / ಕವನ / ಕವಿತೆ / ಕಗ್ಗತ್ತಲಿನೊಳು

ಕಗ್ಗತ್ತಲಿನೊಳು

ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ
ಇಣುಕಿದರೆ ಕಿಡಿಕಿಯಿಂದ
ಕಗ್ಗತ್ತಲು ಭಯಾನಕ
ಭೂಮಿ ಆಕಾಶಗಳೆಲ್ಲೋ-
ಕಂಪನಿ ನಾಟಕದ ಕಪ್ಪು ತೆರೆಯಿಳಿದು
ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ
ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ
ಜಾಗ ಖಾಲಿ ಮಾಡಿ ಎಲ್ಲೋ ಕುಡಿದ ಮಂಪರು

ಸಮುದ್ರವೊ ಮರುಭೂಮಿಯೋ
ಮಿಣಿಮಿಣಿ ದೀಪಗಳು ಅಲ್ಲಲ್ಲಿ
ಹಡಗಿನವರಿದ್ದರೆ ತೆರಳುತಿರಬಹುದು
ಮನೆಗೊ ವ್ಯಾಪಾರಕೊ
ಮರುಭೂಮಿ ಇದ್ದರೆ
ಬಾವಿ ತೋಡುತ್ತಿರಬಹುದು ಪೆಟ್ರೋಲಿಗೆ…

ಕ್ಷಣಾರ್ಧದಲಿ ಮರೆಯಾಗಿ ಕಸಿವಿಸಿ
ಕಪ್ಪುಮೋಡಗಳ ಗ್ರಹಣ ಮತ್ತೆ ಮಿಣಿಮಿಣಿ
ರಾತ್ರಿ ಪಯಣಿಗ ಗುಮ್ಮನೆಯ ಕತ್ತಲು ಸೀಳಿ
ಹಾರ್ನ ಸದ್ದಿಲ್ಲ ಕಾಲುಗಾಲಿಗಳಿಲ್ಲ
ಹಾರುತಿದೆ ಓಡುತಿದೆ
ರಸ್ತೆಯೇ ಇಲ್ಲದ ವಿಶಾಲ ರಸ್ತೆಯಲಿ
ಪಂಚತಂತ್ರದ ಈ ಪಕ್ಷಿ

ಇಳಿಯಿತು ಇಳಿಯಿತು ಸೂರ್ಯನ ಅಮಲು
ಕಪ್ಪು ತೆರೆಸರಿದು
ಎಳೆ ಬೂದು ಹಳದಿ ನೀಲಿತೆರೆ
ದಾಟುತ ಶುಭ್ರಾವತಾರಕೆ ಅಣಿಯಾಗುತಿದೆ ಬೆಳಗು
ಬ್ರಾಹ್ಮಿ ಮುಹೂರ್ತ
ಚುಮುಚುಮು ನಸುಕು
ಯಂತ್ರಪಕ್ಷಿ ನೆಲತಬ್ಬುತಿರಲು
ಕುದುರೆಯ ಕೆನೆತದ ರಥವೇರಿ
ಸೂರ್ಯ ನಾಟಕವಾಡಿಸಲು ಹೊರಟ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...