ಬೆಳಕ ಹೆಜ್ಜೆಯನರಸಿ

ಖಾಲಿ ಹಾಳೆಯ ಮೇಲೆ
ಬರೆಯುವ ಮುನ್ನ
ಚಿತ್ರ
ಯೋಚಿಸಬೇಕಿತ್ತು
ಯೋಚಿಸಲಿಲ್ಲ
ಬರೆದೆ
ವಿಧಿ ಬರೆದಂತೆ

ಎಲ್ಲಾ ಪಾತ್ರಗಳು ಸುಮ್ಮನಿದ್ದವು
ಮೂಕರಂತೆ
ಕಾಲ ಕಳೆದಂತೆ
ಕೆಲವು ಕೆಮ್ಮಿದವು
ಹಲವು ಸೀನಿದವು
ರೋಗ ಬಂದಂತೆ
ಆಕಳಿಸಿದವು ನಿದ್ದೆ ಹಿಡಿದಂತೆ
ಪಿಸುಗುಟ್ಟಿದವು
ಗೊಣಗಿಕೊಂಡವು
ಬರೆಯುವ ಕೈ
ಹಿಡಿದು ನಿಲ್ಲಿಸಲಿಲ್ಲ ಒಂದೂ

ಒಂದು ದಿನ ಒಬ್ಬ
ಮಸಿ ಹೊದ್ದು ಮಲಗಿದ್ದವನು
ಬುದ್ದನಂತೆ ಎದ್ದ

ಮತ್ತು ಮೆಲ್ಲಗೆ ಹೇಳಿದ
ತಗೋ ಬರೆ
ಈ ಬಣ್ಣಗಳಲ್ಲಿ ಹೊಟ್ಟೆ
ಯ ಜೊತೆಗೆ ಹಲ್ಲುಗಳ ಕೊಡ
ಮಾತಾಡಲು ನಾಲಗೆಯ ಬಿಡು
ಹಾಗೆ ಚೂರು ಬುದ್ಧಿಯ ಇಡು
ದುಡಿಯಲು ಕೈಗಳ ಕೊಡು
ಅಲ್ಲೊಂದು ಹೃದಯ ಇಡು
ನಿನ್ನ ಎಲ್ಲಾ ಬರೆಹಗಳಲ್ಲಿ
ಒಂದಾದರೂ ಕಣ್ಣಿರಲಿ
ನೀನು ಬರೆದದ್ದು ನೋಡುವುದಕ್ಕೆ
ಸಾಧ್ಯವಾದರೆ ತಿದ್ದಿ ಕೊಳ್ಳಲಿಕ್ಕೆ’

ಖಾಲಿ ಕುಂಚ ಹಿಡಿದು
ಬೆರಗಾಗಿ ನಿಂತೆ
ಬೆಳಿಕಿನೆಡೆ ಮುಖ ಮಾಡಿ
ಕಿಂದರ ಜೋಗಿ
ಅವನ ಹಿಂದೆ ಜೀವ
ಪಡೆದ ಚಿತ್ರಗಳ ಸಾಲು

ಮೈ ತುಂಬಾ
ಮಿರ ಮಿರ ಮಿರುಗುವ ಬಣ್ಣ
ನೂರು ಸೂರ್ಯರ ಕಣ್ಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವವಿಂದು ಏನೋ ಒಂದು
Next post ಕಗ್ಗತ್ತಲಿನೊಳು

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys