ಬೆಳಕ ಹೆಜ್ಜೆಯನರಸಿ

ಖಾಲಿ ಹಾಳೆಯ ಮೇಲೆ
ಬರೆಯುವ ಮುನ್ನ
ಚಿತ್ರ
ಯೋಚಿಸಬೇಕಿತ್ತು
ಯೋಚಿಸಲಿಲ್ಲ
ಬರೆದೆ
ವಿಧಿ ಬರೆದಂತೆ

ಎಲ್ಲಾ ಪಾತ್ರಗಳು ಸುಮ್ಮನಿದ್ದವು
ಮೂಕರಂತೆ
ಕಾಲ ಕಳೆದಂತೆ
ಕೆಲವು ಕೆಮ್ಮಿದವು
ಹಲವು ಸೀನಿದವು
ರೋಗ ಬಂದಂತೆ
ಆಕಳಿಸಿದವು ನಿದ್ದೆ ಹಿಡಿದಂತೆ
ಪಿಸುಗುಟ್ಟಿದವು
ಗೊಣಗಿಕೊಂಡವು
ಬರೆಯುವ ಕೈ
ಹಿಡಿದು ನಿಲ್ಲಿಸಲಿಲ್ಲ ಒಂದೂ

ಒಂದು ದಿನ ಒಬ್ಬ
ಮಸಿ ಹೊದ್ದು ಮಲಗಿದ್ದವನು
ಬುದ್ದನಂತೆ ಎದ್ದ

ಮತ್ತು ಮೆಲ್ಲಗೆ ಹೇಳಿದ
ತಗೋ ಬರೆ
ಈ ಬಣ್ಣಗಳಲ್ಲಿ ಹೊಟ್ಟೆ
ಯ ಜೊತೆಗೆ ಹಲ್ಲುಗಳ ಕೊಡ
ಮಾತಾಡಲು ನಾಲಗೆಯ ಬಿಡು
ಹಾಗೆ ಚೂರು ಬುದ್ಧಿಯ ಇಡು
ದುಡಿಯಲು ಕೈಗಳ ಕೊಡು
ಅಲ್ಲೊಂದು ಹೃದಯ ಇಡು
ನಿನ್ನ ಎಲ್ಲಾ ಬರೆಹಗಳಲ್ಲಿ
ಒಂದಾದರೂ ಕಣ್ಣಿರಲಿ
ನೀನು ಬರೆದದ್ದು ನೋಡುವುದಕ್ಕೆ
ಸಾಧ್ಯವಾದರೆ ತಿದ್ದಿ ಕೊಳ್ಳಲಿಕ್ಕೆ’

ಖಾಲಿ ಕುಂಚ ಹಿಡಿದು
ಬೆರಗಾಗಿ ನಿಂತೆ
ಬೆಳಿಕಿನೆಡೆ ಮುಖ ಮಾಡಿ
ಕಿಂದರ ಜೋಗಿ
ಅವನ ಹಿಂದೆ ಜೀವ
ಪಡೆದ ಚಿತ್ರಗಳ ಸಾಲು

ಮೈ ತುಂಬಾ
ಮಿರ ಮಿರ ಮಿರುಗುವ ಬಣ್ಣ
ನೂರು ಸೂರ್ಯರ ಕಣ್ಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವವಿಂದು ಏನೋ ಒಂದು
Next post ಕಗ್ಗತ್ತಲಿನೊಳು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…