Home / ಕವನ / ಕವಿತೆ / ಬೆಳಕ ಹೆಜ್ಜೆಯನರಸಿ

ಬೆಳಕ ಹೆಜ್ಜೆಯನರಸಿ

ಖಾಲಿ ಹಾಳೆಯ ಮೇಲೆ
ಬರೆಯುವ ಮುನ್ನ
ಚಿತ್ರ
ಯೋಚಿಸಬೇಕಿತ್ತು
ಯೋಚಿಸಲಿಲ್ಲ
ಬರೆದೆ
ವಿಧಿ ಬರೆದಂತೆ

ಎಲ್ಲಾ ಪಾತ್ರಗಳು ಸುಮ್ಮನಿದ್ದವು
ಮೂಕರಂತೆ
ಕಾಲ ಕಳೆದಂತೆ
ಕೆಲವು ಕೆಮ್ಮಿದವು
ಹಲವು ಸೀನಿದವು
ರೋಗ ಬಂದಂತೆ
ಆಕಳಿಸಿದವು ನಿದ್ದೆ ಹಿಡಿದಂತೆ
ಪಿಸುಗುಟ್ಟಿದವು
ಗೊಣಗಿಕೊಂಡವು
ಬರೆಯುವ ಕೈ
ಹಿಡಿದು ನಿಲ್ಲಿಸಲಿಲ್ಲ ಒಂದೂ

ಒಂದು ದಿನ ಒಬ್ಬ
ಮಸಿ ಹೊದ್ದು ಮಲಗಿದ್ದವನು
ಬುದ್ದನಂತೆ ಎದ್ದ

ಮತ್ತು ಮೆಲ್ಲಗೆ ಹೇಳಿದ
ತಗೋ ಬರೆ
ಈ ಬಣ್ಣಗಳಲ್ಲಿ ಹೊಟ್ಟೆ
ಯ ಜೊತೆಗೆ ಹಲ್ಲುಗಳ ಕೊಡ
ಮಾತಾಡಲು ನಾಲಗೆಯ ಬಿಡು
ಹಾಗೆ ಚೂರು ಬುದ್ಧಿಯ ಇಡು
ದುಡಿಯಲು ಕೈಗಳ ಕೊಡು
ಅಲ್ಲೊಂದು ಹೃದಯ ಇಡು
ನಿನ್ನ ಎಲ್ಲಾ ಬರೆಹಗಳಲ್ಲಿ
ಒಂದಾದರೂ ಕಣ್ಣಿರಲಿ
ನೀನು ಬರೆದದ್ದು ನೋಡುವುದಕ್ಕೆ
ಸಾಧ್ಯವಾದರೆ ತಿದ್ದಿ ಕೊಳ್ಳಲಿಕ್ಕೆ’

ಖಾಲಿ ಕುಂಚ ಹಿಡಿದು
ಬೆರಗಾಗಿ ನಿಂತೆ
ಬೆಳಿಕಿನೆಡೆ ಮುಖ ಮಾಡಿ
ಕಿಂದರ ಜೋಗಿ
ಅವನ ಹಿಂದೆ ಜೀವ
ಪಡೆದ ಚಿತ್ರಗಳ ಸಾಲು

ಮೈ ತುಂಬಾ
ಮಿರ ಮಿರ ಮಿರುಗುವ ಬಣ್ಣ
ನೂರು ಸೂರ್ಯರ ಕಣ್ಣ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...