Home / ಕವನ / ಕವಿತೆ / ನಾಳೆಗಳಿಗಾಗಿ

ನಾಳೆಗಳಿಗಾಗಿ

ಆಟವಾಡಿ ಸಾಕಾಯ್ತೆ?
ಸರಿ
ಸರಿಸಿ ಬಿಡು ಪಕ್ಕಕ್ಕೆ
ಹರಿದವು ಮುರಿದವು
ಬಣ್ಣ ಮಾಸಿದವು
ನುಡಿದ ನನ್ನಿಯ ಮಾತು
ಕುಣಿದು ಹಾಡಿದ ಹಾಡು
ಹಂಚಿಕೊಂಡ ಹಾಲುಗೆನ್ನೆಯನುಭವ
ಕಟ್ಟಿಕೊಂಡ ಹಸಿ ಕನಸು
ಇರಲಿ ಮಾಸದಂತೆ

ಎಂದಾದರೊಮ್ಮೆ ಎತ್ತಿಕೊಂಡಾಗ
ಮಗುವಿನಂತೆ
ಮೆತ್ತಿಕೊಳ್ಳಲಿ ನೆನಪಿನ ಹುಡಿ
ಗಂಧದಂತೆ

ಹಠಮಾಡಿ
ಬೇಡಿ ತಂದಿದ್ದ
ದೂರದೂರಿನ ಜಾತ್ರೆಯ
ಬಣ್ಣದ ಬೊಂಬೆಗಳು
ಕೃಷ್ಣನ ಪಿಳ್ಳಂಗೋವಿ
ಶಿವನ ಬುಡುಬುಡುಕೆ
ನನ್ನಪ್ಪ ಓಡಿಸಿದ ಬಂಡಿ
ನಿನ್ನವ್ವನ ಅಡುಗೆ ಸಾಮಾನು

ಒಂದು ಮುರಿದರೆ ಮತ್ತೊಂದು
ಒಂದು ಕಳೆದರೆ ಇನ್ನೊಂದು
ಕಣ್ಣಿಗೆ ಕಂಡದ್ದು
ಮನಸಿಗೆ ಬಂದದ್ದು
ಎಲ್ಲಿದ್ದರೂ ಹೇಗಿದ್ದರೂ
ಬಿಡದೇ ತಂದದ್ದು
ಬಿದ್ದಿರಲಿ ಬಿಡು
ಮೂಲೆ ಹಿಡಿದ ಮುದುಕನಂತೆ

ನಿನ್ನ ಮಗನೋ ಮಗಳೋ
ನಾಳೆ
ಕಳೆದು ಹೋದಾಗ
ಶಾಲೆಯಲಿ
ಮುಳುಗಿ ಹೋದಾಗ
ಕಂಪ್ಯೂಟರಿನಲಿ
ಯಾರೂ ಸಿಗದಿರುವಾಗ
ಆಡಲು ಓಣಿಯಲಿ
ಕೊಡಲು ಬಂದೀತು ಧೂಳು ಕೊಡವಿ
ನೆನಪುಗಳ ಮೈದಡವಿ

ಮಗು
ಬಿಟ್ಟ ಕಣ್ಣು ಬಿಟ್ಟಂತೆ
ನೋಡಿ ನಕ್ಕೀತು ನಿನ್ನಂತೆ
ಇಡು
ಪಕ್ಕಕ್ಕೆ ಸರಿಸಿ
ಮುಗಿಯಲಾರದ ಆಟಕ್ಕೆ
ನಾಳೆಗೂ ಇರಿಸಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...