ಹಿರಿದು ಯಾವುದೇ ಇರಲಿ

ಹಿರಿದು ಯಾವುದೇ ಇರಲಿ-ಅದನು
ನರೆಯುವ ದೇಶ ನನ್ನದು,
ಎಲ್ಲ ದಿಕ್ಕಿನ ಬೆಳಕಿಗು ಬಾಗಿಲ
ತರೆಯುವ ದೇಶ ನನ್ನದು.

ತನ್ನದಲ್ಲದ ಅನ್ಯಧರ್ಮಗಳ
ಮನ್ನಿಸಿದಾ ನೆಲ ನನ್ನದು,
ಸಕಲ ಧರ್ಮಗಳ ಸಾಕಿದ ತಾಯಿ
ಸನಾತನ ದೇಶ ನನ್ನದು.

ದೇವಾಲಯದ ಗರ್ಭಗೃಹದ
ಹಣತೆಯ ಬೆಳಕಿನ ಹಾಗೆ,
ಇಲ್ಲಿಯ ಸಂಸ್ಕೃತಿ ಬಗೆಬಗೆ ಕಾಂತಿಯ
ಬಣ್ಣದ ಗರಿಗಳ ಸೋಗೆ.

ಹಿಮಗಿರಿ ವಿಂಧ್ಯಾಚಲ ಸಹ್ಯಾದ್ರಿ
ನಿಂತು ಕಾಯುವಾ ನಾಡು,
ಯಮುನೆ ಗಂಗೆ ಕೃಷ್ಣಾ ತುಂಗೆ
ಬಳಸಿ ಹಾಯುವಾ ಬೀಡು.

ಎಲ್ಲ ಜನ್ಮಗಳು ಇಲ್ಲಿಯೆ ಆಗಲಿ
ಇದೇ ತಾಯ ಮಡಿಲಲ್ಲಿ,
ನನ್ನ ಮಸ್ತಕವು ಸದಾ ನೆಲಸಿರಲಿ
ಭರತಮಾತೆಯಡಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಳೆಗಳಿಗಾಗಿ
Next post ಎಲ್ಲಿ ಅರಿವಿಗೆ ಇರದೊ ಬೇಲಿ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…