ನಾನೇ ಅಪ್ಪ ಆಗ್ತೀನಿ

ಅಪ್ಪ ಹೊರಗಡೆ ಹೋದಾಗ
ಕೋಟು ಬೂಟು ಹಾಕ್ಕೊಂಡು
ಅಪ್ಪನ ಕಪ್ಪನೆ ಕನ್ನಡಕ
ಕಣ್ಣಿಗೆ ಸರಿಯಾಗ್ ಇಟ್ಕೊಂಡು
ನಾನೇ ಅಪ್ಪ ಆಗ್ತೀನಿ
ದಪ್ಪನೆ ದನೀಲಿ ಕೂಗ್ತೀನಿ
ಅಣ್ಣ ಅಕ್ಕ ಎಲ್ಲರಿಗೂ
ಸಖತ್ತು ರೋಪು ಹಾಕ್ತೀನಿ!

ಅಣ್ಣನ್ ಕರೆದು ಕೇಳ್ತೀನಿ:
“ಯಾಕೋ ಸ್ಕೂಲಿಗೆ ಹೋಗ್ಲಿಲ್ಲ?
ತಮ್ಮನ್ ಬಯ್ತೀಯಂತಲ್ಲೋ
ಪೆದ್ದ, ನಾಚಿಕೆ ಆಗೊಲ್ವ?
ನಿನ್ನಲ್ಲಿರೋ ಚೆಂಡನ್ನ
ಬ್ಯಾಟು ಬಳಪ ಗೋಲೀನ
ತೆಪ್ಪಗೆ ಅವ್ನಿಗೆ ಕೊಟ್ಟು ಬಿಡು
ಇಲ್ಲವೆ, ತಿನ್ತೀ ಒದೆಯನ್ನ.”

ಅಕ್ಕನ್ ಕರೆದು ಕೇಳ್ತೀನಿ:
“ಎಲ್ಲಿದ್ದಾನೇ ನಿನ್ ತಮ್ಮ?
ಅಂಥಾ ಮುದ್ದಿನ ಹುಡುಗನ್ನ
ಓದಿಸಿ ದಣಿಸೋದೇನಮ್ಮ,
ಚಿಕ್ಕವನಾದ್ರೂ ಏನ್ ಬುದ್ದಿ
ಅವನ್ಯಾಕ್ ಪಾಠ ಓದ್ಬೇಕು?
ಪಾಠ ಬೇಡ ಅವನನ್ನು
ಆಟಕ್ ಕರ್‍ಕೊಂಡು ಹೋಗ್ಬೇಕು.”

ಅಮ್ಮನ್ ಕರೆದು ಕೇಳ್ತೀನಿ:
“ತಿಂಡಿ ತುಂಬಿದ ಡಬ್ಬಾನ
ಗೂಡಿನ ಒಳಗಡೆ ಮುಚ್ಚಿಟ್ಟು
ಯಾಕೇ ಬೀಗ ಹಾಕ್ತೀಯ?
ತಿಂಡಿ ಇರೋದು ಚಿಕ್ ಮಕ್ಳು
ತಿನ್ನೋದಕ್ಕೇ ಅಲ್ವೇನೇ?
ಮಗೂಗೆ ಎಲ್ಲಾ ಕೊಟ್ಟುಬಿಡೆ
ನಾವ್ ತಿಂದಿದ್ದು ಸಾಲ್ದೇನೇ?”

ಅಜ್ಜೀನ್ ಕರೆದು ಕೇಳ್ತೀನಿ:
“ಯಾಕೇ ಮಗೂನ ಬಯ್ತೀಯ?
ಉಸ್ಮಾನ್ ಜೊತೆಗೆ ಆಡಿದರೆ
ಯಾತಕ್ ಸಿಡಿ ಸಿಡಿ ಮಾಡ್ತೀಯ?
ಬೇರೆ ಜಾತಿ ಆದ್ರೇನು
ಅವನೂ ಮನುಷ್ಯ ಅಲ್ವೇನೆ?
ಜಾತಿ ಮತದ ಭೇದ ಮಾಡೋದ್
ಯಾರೇ ಆದ್ರೂ ಸರಿಯೇನೇ?”

ಅಕ್ಕನ ಪಾಠ ತಪ್ಪತ್ತೆ
ಅಣ್ಣಂಗ್ ಲಾತ ಬೀಳತ್ತೆ!
ಅವನ ಆಟದ ಸಾಮಾನು
ಎಲ್ಲಾ ನಂಗೇ ಸಿಕ್ಕತ್ತೆ!
ಎಲ್ಲಾ ತಿಂಡಿ ಬಾಚ್ಕೊಂಡು
ಅಟ್ಟದ ಮೇಲೆ ಇಟ್ಕೊಂಡು
ಖರಮ್ ಖುರಮ್ ತಿಂತೀನಿ
ಟೀಪೂ ಬಿರ್ಜು ಕರ್‍ಕೊಂಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭೩
Next post ಕಾಳಿನ ಮೇಲೆ ಹೆಸರು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys