ಬಾ ಮತ್ತೊಮ್ಮೆ

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ
ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ
ಅಸತ್ಯದ ಕುಲುಮೆಯೊಳಗೆ
ಸುತ್ತಿಗೆ ಹಿಡಿದು ಮತ್ತೊಮ್ಮೆ
ಬರಬಾರದೇ ನೀನು ‘ಕಮ್ಮಾರನಾಗಿ’
ಜಾತಿ ಮತ ಕುಲ ಧರ್ಮಗಳ
ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ
ಪಕ್ಷಗಳು ಗಂಟಲು ಹರಿದು ಕಿರುಚಿತಿಹರು
ಪಕ್ಷಗಳ ನೇತಾರರು
ಮೋಸ ಮಾಡುತಿವೆ ಬಡವರಿಗೆ
ಮೋಡಿ ಹಾಕುವ ಆಶ್ವಾಸನೆಯ ಭರವಸೆಗಳು
ಭಾವನೆಗಳಿಗೆ ಬೆಲೆ ಕೊಡದೆ
ಮತ ಗಳಿಸುವ ಕದೀಮರನೊಯ್ದು
ಚಿಲುಮೆಗೊಮ್ಮೆ ನೂಕಲು ಕರಕಾಗಿಸಲು
ಮತ್ತೊಮ್ಮೆ ಬರಬಾರದೇ ನೀನು….
ಬಾಂಬುಗಳಿಗೆ ಹತರಾಗುತ ನೋವಿನಲಿ ನಲಗುತ
ಮಾತನಾಡಲಾಗದವರ ಬಂಡೇಳದವರ
ಹಸಿದವರ ಬೆವರು ಹರಿಸುವವರ
ಕಾಲು ಕಸವಾಗುವವರ ಬೆಲೆಯೇ ಇಲ್ಲದವರ
ಕನಸುಗಳು ಕುಸಿಯುತಿವೆ.
‘ಬರುತ್ತಿಲ್ಲ ಈಗ ಸಾಂತ್ವನಕ್ಕೆ
ನಿನ್ನ ಸತ್ಯದ ಅಹಿಂಸೆಯ ಮಾತುಗಳು
ಹೋದವೆಲ್ಲಿ ನಿನ್ನ ಸತ್ಯ ಅಹಿಂಸೆಯ ಕ್ರಾಂತಿಗಳು’
ಅನರ್ಥಗಳಿಗೆ ಹಪಹಪಿಸುವ
ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೊಡೆದಾಡುವ
ಈ ರಾಜಕೀಯ ಕ್ರಾಂತಿಗಳು ತೋಳ
ಕುರಿಯಾಟಗಳ ರಕ್ತಕ್ರಾಂತಿಗಳಾಗುತಲಿವೆ
ಬಿಡು ಇನ್ನು ಮೌನ ಹಿಡಿ ಇನ್ನು ಸುತ್ತಿಗೆ
ಕೊಡು ಇನ್ನು ಪೆಟ್ಟು ಬಾ ಮತ್ತೊಮ್ಮೆ…
ಮಾಂಸ ಮೃಷ್ಟಾನ್ನ ಭೋಜನದ ಬೊಜ್ಜುಗಾರರಿಗೆ
ಏರ್ ಕಂಡೀಷನ್‌ದ ಮೋಜುಗಾರರಿಗೆ
ಅಧಿಕಾರ ಮದದ ಗೂಳಿ ಗೂಂಡಾಗಳಿಗೆ
ಗುಂಡಿನ ಲಾಬಿಗಳಲಿ ಹೊರಳಾಡುವ ಹೆಗ್ಗಣ ಹದ್ದುಗಳಿಗೆ
ಧರ್ಮದ ನೆಪ ಧರ್ಮಾಂಧರಿಗೆ
ಸಮಯ ಸಾಧಕರಿಗೆ ಪಕ್ಷಾಂತರಿಗಳನೆಲ್ಲ
ಚಿಲುಮೆಯಗ್ನಿಯಲಿ ಹಾಕು ಸುಡು
ಕುಲುಮೆಯಲಿ ಕಾಯಿಸಿ ಕರಗಿಸಿ
ಸುತ್ತುಗೆಯಿಂದ ಹೊಡೆ ಹೊಡೆದು
ರೂಪ ಕೊಡಲು ಬಾ ಮತ್ತೊಮ್ಮೆ
ದೇಶಕ್ಕೆ ಕಮ್ಮಾರನಾಗಿ
ಕೇಳಿಸಲಿ ಮತ್ತೊಮ್ಮೆ ಆ
ಚಮ್ಮಟೆ ಧ್ವನಿ ದೇಶದೊಳ ಹೊರಗೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಬೀಡ್ಸಿನಲ್ಲಿ ರಸ್ತೆ ದಾಟುವುದು
Next post ಲವ್ವು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys