ಮನುಷ್ಯನ ಹುಡುಕು

ಮಾತುಗಳ ಮೋಡಿಗಳ ಒಳಗಿಣುಕು
ಮನೆಗಳ ಕಚೇರಿಗಳ ಖಾನೆ ಖಾನೆ ಏಕತಾನದೊಳಹೊಕ್ಕು
ಫೈಲುಗಳ ಸ್ಮೈಲುಗಳ ನಡುವೆ ತಲೆಹುದುಗಿಸಿಕೊಂಡ
ನಾಕು ಮಂದಿಯಂತೆ ವೇಷ ಭೂಷಗಳ ಸಿಕ್ಕಿಸಿಕೊಂಡ
ದೇಶಾವರಿ ಯೋಗಕ್ಷೇಮದ ಗಿಳಿಯೋದುಗಳ
ಸ್ವಲ್ಪ ಅತ್ತತ್ತ ಸರಿಸಿ,
ಉರುಳಿಸುವ ಬುರುಡೆಗಳ
ಈಜಾಡಿ ನೂಕಿ ಅವನ ನೀರಿನೊಳಹೊಗು

ಸಮಾಜದ ಪಡಿಯಚ್ಚು ಮುದ್ರೆಗಳ ಒರೆಸಿ ಸೋಡು
ಹೊಟ್ಟೆಯ ಹಾಡಿನ ಜಾಡು ಹಿಡಿದು
ಮಿಡುಕುವ ಹಣ್ಣ ಮುಟ್ಟಿನೋಡು
ಮೌನದಿಂದ ಮಾತನ್ನು, ಮಾತುಗಳಿಂದ ಮನವನ್ನು
ಹಿಚುಕಿ ನೋಡು,
ವ್ಯಕ್ತಿಯೊಳಗಿನ ಶಕ್ತಿಯನೆಳೆದು ನೋಡು
ಆ ಹಣ್ಣು ಎಷ್ಟು ಮಾಗಿದೆಯೋ ಅಥವಾ
ಆ ತೋಟ ಯಾವ ಯಾವ ಮೃಗಗಳಿಗೆ
ಆಡುಂಬೊಲವಾಗಿದೆಯೋ ಹೊಕ್ಕು ನೋಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮ ಪರಿಪಾಲಕನಾರು ?
Next post ಲಿಂಗಮ್ಮನ ವಚನಗಳು – ೭೯

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys