ಧರ್ಮ ಪರಿಪಾಲಕನಾರು ?

ಪ್ರಿಯ ಸಖಿ,
ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿಯೇ ಗುರಿ ಎಂದುಕೊಂಡು ದೇವರ ನಾಮ ಸ್ಮರಿಸುತ್ತಾ ಮುನ್ನಡೆಯುತ್ತಾನೆ. ಮುಂದೆ ಇದೇ ಹಾದಿಯಲ್ಲಿ ಬಂದ ಧಾರ್ಮಿಕನೊಬ್ಬ ಗಾಯಾಳುವನ್ನು ನೋಡಿ ಕನಿಕರಗೊಂಡರೂ ಅವನು ಮಾಡಿದ ಕರ್ಮದಿಂದ ಹೋದ ಜನ್ಮದ ಪಾಪದಿಂದ ಅವನು ಸಂಕಟ ಅನುಭವಿಸುತ್ತಿದ್ದಾನೆ. ಇದಕ್ಕೂ ನನಗೂ ಏನೇನೂ ಸಂಬಂಧವಿಲ್ಲ ಎಂದುಕೊಂಡು ದೇವರ ಪೂಜೆಗೆ ಹೊತ್ತಾಗುತ್ತದೆ ಎಂದು ಗಡಿಬಿಡಿಯಿಂದ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ಸಾಮಾನ್ಯ ಮನುಷ್ಯನೊಬ್ಬ ಗಾಯಾಳುವನ್ನು ಕಂಡು ಹಿಂದೆ ಮುಂದೆ ನೋಡದೇ ತಕ್ಷಣವೇ ಅವನಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ನಡೆಸುತ್ತಾನೆ.

ಸಖಿ, ಈಗ ಹೇಳು ಇವರು ಮೂವರಲ್ಲಿ ನಿಜವಾದ ಧರ್ಮ ಪರಿಪಾಲಕನಾರು? ಖಂಡಿತವಾಗಿ ಗಾಯಾಳುವಿಗೆ ನೆರವಾದ ಕೊನೆಯ ಸಾಮಾನ್ಯ ವ್ಯಕ್ತಿಯೇ ನಿಜವಾದ ಧರ್ಮಪರಿಪಾಲಕ.

ಧರ್ಮವೆಂಬುದು ಒಳ್ಳೆತನವನ್ನೆಲ್ಲಾ ಎರಕಹೊಯ್ದು ನಾವೇ ಹಾಕಿಕೊಂಡಿರುವ ಒಂದು ಕಟ್ಟುಪಾಡು, ಅಥವಾ ನಿಗ್ರಹ. ಜಗತ್ತಿನ ಎಲ್ಲ ಧರ್ಮಗಳು ಸದಾ ಒಳಿತನ್ನೇ ಪ್ರತಿಪಾದಿಸಿದೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ. ಮೋಸ ಮಾಡಬೇಡ, ಕೊಲ್ಲಬೇಡ… ಇತ್ಯಾದಿ ಅನಾಚಾರಗಳು ಬೇಡವೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೇ ಸಜ್ಜನನಾಗಿರು, ಪರೋಪಕಾರಿಯಾಗಿರು, ಶುದ್ಧ ಮನಸ್ಕನಾಗಿರು, ಇತರರ ಹಿತಚಿಂತಕನಾಗಿರು, ಇತರರಿಗೆ ಒಳಿತನ್ನೇ ಮಾಡುವವನಾಗಿರು…. ಇತ್ಯಾದಿ ಒಳ್ಳೆಯತನದ ಉಪದೇಶಗಳು ಎಲ್ಲ ಧರ್ಮದಲ್ಲೂ ಇದೆ.  ಕೆಟ್ಟದ್ದನ್ನು ಮಾಡೆಂದು ಯಾವ ಧರ್ಮವೂ ಉಪದೇಶಿಸುವುದಿಲ್ಲ. ಹಾಗೇ ಎಲ್ಲ ಧರ್ಮಗಳ ಆಧಾರಸ್ತಂಭ ಮಾನವೀಯತೆಯೇ!

ಆದರೆ ನಾವು ಧರ್ಮವನ್ನು ಅರ್ಧೈಸಿಕೊಳ್ಳುವುವರಲ್ಲಿ ತಪ್ಪಿದ್ದೇವೆ. ಹಾಗೂ ಅದರ ಆಚರಣೆಯಲ್ಲಿ ತಪ್ಪಿದ್ದೇವೆ. ಎಲ್ಲ ತಪ್ಪುಗಳನ್ನು ಮಾಡಿಯೂ ದೇವರಿಗೆ ಕೈ ಮುಗಿದರೆ ಪಾಪ ಪರಿಹಾರವೆಂದು ಸಮಜಾಯಿಷಿ ಮಾಡಿಕೊಂಡಿದ್ದೇವೆ. ಹೀಗೆಂದೇ ಇಂದು ಎಲ್ಲೆಡೆ ಅನಾಚಾರ, ಅಶಾಂತಿ ಮನೆ ಮಾಡಿದೆ. ಧರ್ಮವನ್ನು ಆಡಂಬರಕ್ಕಾಗಿ, ತೋರ್ಪಡೆಗಾಗಿ, ಬಾಯಿ ಮಾತಿಗಾಗಿ, ಉಪಯೋಗಿಸುತ್ತಿರುವ ನಾವು ಅದರ ಒಳ ಅರ್ಥವನ್ನು ತಿಳಿದುಕೊಳ್ಳುವುದನ್ನು ಮರೆಯುತ್ತಿದ್ದೇವೆ. ಧರ್ಮವನ್ನು ದೇವರು, ಪೂಜೆ, ಮಂತ್ರ, ವ್ರತ, ಮೋಕ್ಷ ಮುಂತಾದವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಇವೆಲ್ಲವುಗಳ ಮೂಲ ಒಳಾರ್ಥ ಮಾನವೀಯತೆಯೇ. ಅದನ್ನು ಒಳಗೊಂಡ ಒಳ್ಳೆಯ ವ್ಯಕ್ತಿಯೇ ನಿಜವಾದ ಧರ್ಮದ ಪರಿಪಾಲಕ ಆದ್ದರಿಂದಲೇ ಹುಟ್ಟಿನಿಂದಾದವನಲ್ಲ ಧಾರ್ಮಿಕ. ಆಚರಣೆಯಿಂದಾದವನೇ ಧಾರ್ಮಿಕ !

ಸಖಿ, ಕಣ್ಣ ಮುಂದೆ ನರಳುತ್ತಾ ಬಿದ್ದಿರುವ ಗಾಯಾಳುವನ್ನು ಮೊದಲು ಉಪಚರಿಸುವುದು ಧರ್ಮವೋ, ಲೌಕಿಕದ ಎಲ್ಲವನ್ನೂ ಬಿಟ್ಟು ಕಣ್ಮುಚ್ಚಿ ದೇವರನ್ನು ಜಪಿಸುತ್ತಾ ಕೂರುವುದು ಧರ್ಮವೋ ಇನ್ನಾದರೂ ವಿವೇಚಿಸಬೇಕಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಬೋಧನೆ
Next post ಮನುಷ್ಯನ ಹುಡುಕು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys