Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ ಮುಂಜಾನೆ, ೫ ಜುಲೈ , ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ ಮುಂಜಾನೆ, ೫ ಜುಲೈ , ೧೯೪೨

ಪ್ರೀತಿಯ ಕಿಟಿ,

ಕಳೆದ ಶುಕ್ರವಾರವಷ್ಟೇ ನಮ್ಮ ಪರೀಕ್ಷೆಯ ಫಲಿತಾಂಶ ಯಹೂದಿ ಥೇಟರ್‌ನಲ್ಲಿ ಪ್ರಕಟವಾಗಿದ್ದವು. ನಾನು ಹೆಚ್ಚಿನ ಭರವಸೆಯನ್ನೇನೂ ಹೊಂದಿರಲಿಲ್ಲ. ನನ್ನ ಪ್ರಗತಿಯ ವರದಿ ಅಂತಹ ಕೆಟ್ಟದಾಗಿರಲಿಲ್ಲ. ನನಗೆ ಸಾಕು ಅನ್ನುವಷ್ಟು ಒಂದು ಅಂಕ, ಬೀಜಗಣಿತಕ್ಕೆ ಐದು ಅಂಕಗಳನ್ನು, ಎರಡರಲ್ಲಿ ಆರು ಮತ್ತು ಉಳಿದವುಗಳೆಲ್ಲಿ ಏಳು ಮತ್ತು ಎಂಟು ಅಂಕಗಳನ್ನು ಪಡೆದಿದ್ದೆ. ಇದು ಮನೆಯವರನ್ನು ಸಂತೋಷಗೊಳಿಸಿದ್ದವು. ಅದರೊಂದಿಗೆ ನನ್ನ ಹೆತ್ತವರು ಅಂಕಗಳ ವಿಚಾರದಲ್ಲಿ ಉಳಿದವರಿಗಿಂತ ಕೊಂಚ ಭಿನ್ನ. ನಾನು ಚೆನ್ನಾಗಿ, ಖುಷಿಯಿಂದ ಇದ್ದು ನನ್ನ ಪ್ರಯತ್ನ ತೀರಾ ಕಳಪೆಯಾಗದ ಹೊರತು ನನ್ನ ಪ್ರಗತಿ ಚೆನ್ನಾಗಿರಲಿ ಅಥವಾ ಕೆಟ್ಟದಾಗಿರಲಿ ನನ್ನ ಪೋಷಕರು ಅಷ್ಟೇನೂ ಚಿಂತಿಸುತ್ತಿರಲಿಲ್ಲ. ಉಳಿದದ್ದು ತಾನಾಗಿಯೇ ಬರುವುದು. ಆದರೆ ನಾನು ಇದಕ್ಕೆ ತದ್ವಿರುದ್ಧ. ನನಗೆ ನಾನು ಕೆಟ್ಟ ವಿದ್ಯಾರ್ಥಿಯಾಗಿರಲು ಇಷ್ಟವಿಲ್ಲ. ನಾನು ಮಾಂಟೆಸ್ಸರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿಯೇ ನಿಜಕ್ಕೂ ಇರಬೇಕಿತ್ತು. ಆದರೆ ನನ್ನನ್ನು ಯಹೂದಿ ಶಾಲೆಗೆ ಸೇರಿಸಲಾಯಿತು. ಎಲ್ಲ ಯಹೂದಿ ಮಕ್ಕಳು ಯಹೂದಿ ಶಾಲೆಗಳಿಗೆ ಮಾತ್ರ ಹೋಗಬೇಕಾಗಿತ್ತು. ಆಗ ಹೆಡ್‌ಮಾಸ್ಟರ್ ನನ್ನನ್ನು ಮತ್ತು ಲೀಸ್‌ಳನ್ನು ಸರಿಯಾಗಿ ಮನವೊಲಿಸಿ ಶಾಲೆಗೆ ತೆಗೆದುಕೊಂಡರು. ಅವರಿಗೆ ನಮ್ಮ ಮೇಲೆ ನಂಬಿಕೆ ಇತ್ತು. ಆ ನಂಬಿಕೆ ಹುಸಿಗೊಳಿಸಲು ಅವರು ತಲೆ ತಗ್ಗಿಸುವಂತೆ ಮಾಡಲು ನಾನು ಬಯಸುವುದಿಲ್ಲ. ನನ್ನಕ್ಕ ಮಾರ್‍ಗೊಟ್‌ಳ ರಿಪೋರ್ಟ ಬಂದಿತ್ತು. ಆಕೆ ಎಂದಿನಂತೆ ಬ್ರಿಲಿಯಂಟ್. ಶಾಲೆಯಲ್ಲಿ ಡಿಷ್ಟಿಂಕ್ಷನ್ ಪದ್ಧತಿ ಇದ್ದರೆ ಆಕೆ ಡಿಷ್ಟಿಂಕ್ಷನ್ ಪಡೆದುಕೊಂಡೇ ಮುಂದೆ ಹೋಗುವಳು. ಆಕೆ ಬಹು ಬುದ್ಧಿವಂತೆ. ಬ್ಯೂಸಿನೆಸ್ ಕೆಲಸಗಳು ಏನೂ ಇಲ್ಲ ಎಂದು ತಿಳಿದ ಮೇಲೇಯೇ ಡ್ಯಾಡಿ ಬಹಳ ತಡವಾಗಿಯಾದರೂ ಮನೆಗೆ ಬಂದಿದ್ದರು. ಕೆಲಸಗಳು ಮಿತಿ ಮೀರಿವೆ ಎಂದುಕೊಳ್ಳಲು ಅವರಿಗೆ ತುಂಬಾ ಕೆಲಸಗಳು ಕೊಳೆಯುತ್ತಾ ಬಿದ್ದಿರಬೇಕು. ಕೂಫಸ್ ಟ್ರೇವಿಸ್‌ನ ನೋಡಿಕೊಂಡರೆ, ಕ್ರೇಲರ ಕೋಲೆನ್ ಆಂಡ್ ಕೋ. ಸಂಸ್ಥೆ ನೋಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಚಿಕ್ಕ ಜಮೀನನ ಸುತ್ತ ನಾವೆಲ್ಲ ಜೊತೆಯಾಗಿ ತಿರುಗಾಡುತ್ತಿದ್ದಾಗ ಡ್ಯಾಡಿ ನಾವು ಗುಪ್ತವಾಸಕ್ಕೆ ಹೋಗುತ್ತಿರುವ ಬಗ್ಗೆ ಹೇಳಿದರು. ಈ ಜಗತ್ತು ಹೀಗೇಕೆ? ಎಂದು ನಾನು ಕೇಳಿದೆ. ಅದಾಗಲೇ ಡ್ಯಾಡಿ ಆ ಕುರಿತು ಮಾತನಾಡತೊಡಗಿದರು. ಹೌದು ಆನ್ ಈಗ ವರ್ಷದ ಮೇಲಾಯ್ತು ನಾವು ಬೇರೆಯವರ ಬಟ್ಟೆ, ಊಟ, ಮನೆ ಸರಂಜಾಮುಗಳ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ನಿನಗೆ ಗೊತ್ತಲ್ಲ. ನಮ್ಮ ಸ್ವತ್ತನ್ನು ಜರ್ಮನ್ನರು ವಶಪಡಿಸಿಕೊಳ್ಳುವುದು ನಮಗಿಷ್ಟವಿಲ್ಲ. ಆದರೆ ಅವರ ಕಪಿಮುಷ್ಟಿಗೆ ಬಲಿಯಾಗಲು ನಮಗೆ ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಸ್ವನಿರ್ಧಾರದಿಂದ ನಾವು ಗುಪ್ತವಾಗಿ ಬದುಕೋಣ. ಅವರು ಬಂದು ನಮ್ಮನ್ನು ಹುಡುಕುವವರೆಗೆ ಕಾಯುವುದು ಬೇಡ.

ನಾನು ವ್ಯಾಕುಲಳಾಗಿದ್ದೆ, “ಆದರೆ ಡ್ಯಾಡಿ ಅದೆಲ್ಲ ಎಂದು ಆಗುವುದು?” ಎಂದೆ. ಆತ ಬಹಳ ಸಿರಿಯಸ್ಸಾಗಿ ನುಡಿದರು. “ನೀನು ಆ ಬಗ್ಗೆ ಚಿಂತಿಸದಿರು. ನಾವೆಲ್ಲ ಸಿದ್ಧತೆ ಮಾಡುವೆವು. ನಿನ್ನ ಎಳೆಯ ಬದುಕನ್ನು ಸಾಧ್ಯವಾದಷ್ಟು ನಿರಾತಂಕವನ್ನಾಗಿ ಮಾಡಿಕೋ.”

“ಅಷ್ಟೇ ಆಗಿತ್ತು. ಓ. ದೇವರೇ, ಈ ಎಲ್ಲ ಸಂಕಟದ ಸಂಗತಿಗಳು ದೂರವೇ ಇರಲಿ.” ಪ್ರಾರ್ಥಿಸಿದೆ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...