Home / ಕವನ / ಕವಿತೆ / ಕ್ರೀಟದೇವಿ

ಕ್ರೀಟದೇವಿ

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ
ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,-
ಶರದೃತುವಿನಾರಂಭದಲ್ಲಿ!

ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ,
ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ
ಸಿಂಗರಿಸಿ ಮ೦ಜಿನಂತಹ ಸೀಕರವನೇಳು ಬಣ್ಣಗಳಿಂದ.
ದಿಕ್ಕಿಲ್ಲದೆ ಬಳ್ಳಿವಳ್ಳಿಯಾಗಿ ತೇಲುತಿದೆ ಬೆಳ್ಳಿಯ ಬುರುಗು!

ನೋಡುತೀ ಬೆಳ್ಳಿಯ ಕೆನೆಯನು-ಫೇನವನು-
ಹುಟ್ಟುಕಡೆಯಲೊಡೆದು ಬರುವ ವಿಮಲೋದಕವನು-
ನೋಡಿದಲ್ಲೆಲ್ಲ ಕೆನೆವಾಲಂತೆ ಥಳಥಳಿಸುವ ಸಮುದ್ರವನು,-
ನೆನೆಯುವೆನು ಹಿರಿಯರೊರೆದೊಂದು ಮಾತ:
ಕ್ಷೀರಸಾಗರವದು ಕನಸಲ್ಲ! ಕಣ್ಣಿನ ಬದುಕು!
ಸೂರ್ಯನಾರಾಯಣನ ಪದತಲದಿ ಪವಡಿಸಿಹ ಕ್ಷೀರಸಾಗರವ ಕಾಣು!

ಈ ಹಾಲ್ಗಡಲ ಹೃದಯ ಕಮಲವು ಬಿರಿಯೆ ಹಿಂದೊಮ್ಮೆ
ಮೆಲ್ಲನದರೊಳಗಿಂದ ಜನಿಸಿದೆ ಮಾಲಕುವಿುಯಂತೆ:
ವರಿಸಿದೆ ದೇವನ, ಹರಿಸಿದೆ ನಿನ್ನಣುಗರನು: ಓ ಕ್ರೀಟದೇವಿ!
ನಿನ್ನರಿಗಳಳಿದರೆಲೆ ಕ್ರಿಮಿಕೀಟಕಗಳಂತೆ!

ಹಬ್ಬಿತು ನಿನ್ನ ಕೀರ್ತಿ ಸಪ್ತಸಮುದ್ರಗಳ ದಾಟಿ;
ಉಳಿದ ನೆಲದಣುಗರು ನಿದ್ದೆ ತಿಳಿದೇಳುವ ಮುನ್ನ
ಕಟ್ಟಿದರು ನಿನ್ನ ಕುವರರು ಕೊತ್ತಳದ ಕೋಟೆಗಳನು,-
ಜನರ ಕಟ್ಟುಪಾಡನು, ಸುಖವನು, ಶಾಂತಿಯನು,-
ಆಳಿದರು ನೂರು ಪಟ್ಟಣಗಳನು, ಬಾಳಿದರು ವೈಭವದಿ,-
ಹೋಮರನು ಒಪ್ಪುವಂತೆ!

ಇ೦ದಿಗೋ! ಆವರಿಸಿಹುದು ಹಿಮವು ನಿನ್ನ ಪರ್ವತಾವಳಿಗಳನ್ನು:
ಮಣ್ಣುಗೂಡಿಹುದಿಂದು ಗಳಿಸಿದ ಘನೈಶ್ವರ್ಯವೆಲ್ಲ:
ನೆಟ್ಟಿಹರು ಬೆಳಕು-ನಿಲ್ಗಂಬವನೊಂದ ನಿನ್ನ ತಲೆಯ ಮೇಲೆ,
ಮರೆಯಾಗದಿರಲೆಂದು ಹಿಂದೆ ನೀನೂರಿದಾ ನೆನಹು.
ಸಾಮ್ರಾಜ್ಯ ಮದದಿ ನಿನ್ನ ಲೆಕ್ಕಿಸದೆ ಮುಂದೆ ಸಾಗಿರುವವರ
ಸೊಕ್ಕಿಳಿಯಬಹುದೆಂದು ಮಂಜುದುಟಿಯ ಮುಗುಳ್ನಗೆಯಿಂದ ಸೂಚಿಸಿ
ಕರಾಳ ಕಾಲದುಶ್ಶಾಸನನ ತೋಳ್‌ ತಕ್ಕೆಗೆ ಸಿಲುಕಿ ಬಣ್ಣಗುಂದಿ
ಬಿಳುಪೇರಿ ನಿಲ್ಲಲಾರದೆ ನಿಂತಿರುವೆ ಮರೆಮಾಚಿ ನಾಚಿ ಓ! ಕ್ರೀಟದೇವಿ!
*****

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...