Home / ಕವನ / ವಚನ / ಲಿಂಗಮ್ಮನ ವಚನಗಳು – ೭೯

ಲಿಂಗಮ್ಮನ ವಚನಗಳು – ೭೯

ಬಟ್ಟಬಯಲಲ್ಲಿ ಒಂದು ಶರಧಿ ಹುಟ್ಟಿತ್ತು.
ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು.
ಆ ಕಮಲದ ನೆಲೆಯ ಕಾಣಲರಿಯದೆ, ತೊಳಲಿ ಬಳಲಿ,
ಜಗದೊಳಗೆ ನಚ್ಚುಮೆಚ್ಚಿಗೊಳಗಾಗಿ,
ಮುಚ್ಚಳ ಪೂಜೆಗೆಸಿಲ್ಕಿ ಕುಲಕೆ ಛಲಕೆ ಕೊಂದಾಡಿ,
ಭವಕೆ ಗುರಿಯಾಗುವ ಮನುಜರ ಕಂಡು,
ನಾಚಿತ್ತನ್ನ ಮನವು. ಈ ಮನದ ಬೆಂಬಳಿಗೊಂಡು,
ಹೋದವರೆಲ್ಲ ಮರುಳಾಗಿ ಹೋದರು.
ಇದ ನೋಡಿ ನಾನು ಬಟ್ಟಬಯಲಲ್ಲಿ
ನಿಂದು ನೋಡಿದರೆ, ಶರಧಿ ಬತ್ತಿತ್ತು,
ಕಮಲ ಕಾಣಬಂದಿತ್ತು, ಆ ಕಮಲ ವಿಕಾಸವಾಯಿತ್ತು.
ಪರಿಮಳವೆಂಬ ವಾಸನೆ ತೀಡಿತ್ತು.
ಆ ವಾಸನೆವಿಡಿದು, ಜಗದಾಸೆಯ ಹಿಂಗಿ,
ಮಾತುಮಥನವ ಕೆಡಿಸಿ ಮಹಾಜ್ಯೋತಿಯ
ಬೆಳಗಿನಲಿ ಓಲಾಡುವ ಶರಣರ ಆಸೆ
ರೋಷ ಪಾಶಕ್ಕೊಳಗಾದ ಈ ಜಗದ
ಹೇಸಿಗಳೆತ್ತಬಲ್ಲರು ಈ ಮಹಾ ಶರಣರ
ನೆಲೆಯ ಅಪ್ಪಣಪ್ರಿಯ ಚನ್ನಬಸವಣ್ಣಾ?
*****

Tagged:

Leave a Reply

Your email address will not be published. Required fields are marked *

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ! ನಿನ್ನ ನೋಡೆ ಹೇಳ್ತಿದ ಅದ. ಬಾಯ್ಮು...

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವರಾಜೇ ಅರಸಿನವರ ಪುತ್ರ ೨೮ ವರ್ಷ ವಯಸ...

ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡಳಿತದಲ್ಲಿ ಬಿಗಿತಪ್ಪಿತು. ಮೂಕರಸರು ...

ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯ್ತು ಆಕೆಗೆ. ಇವತ್ತು ಎಲೆಕ್ಷನ್ ಟ್ರೇನಿಂಗು. ಹತ್ತು ಗಂಟೆಗೆಲ್ಲಾ ಅಲ್ಲಿರಬೇಕು. ನಿನ್ನೆಯ ಎಲ್ಲ ಪಾತ್ರೆಗಳ ಸಿಂಕನಲ್ಲಿ ಎತ್ತಿ ಹಾಕಿ ನೀರು ಬಿಟ್ಟಳು. ಪಾತ್ರಗಳ ಜೋರು ಸದ್ದು ಆಕೆಯ ಕೈ ಬಳೆಯ ಜೊತೆ ಸ್ಪರ್ಧೆಗಿಳಿದಂತೆ ಠಂಠಂ ಕಿಣಿಕಿಣಿ ಕೇಳಿಬರುತ್...