Home / ಕವನ / ಕವಿತೆ / ಗಡಿಗಳ ಗೆರೆ ಕೊರೆಯಲಾರೆನು

ಗಡಿಗಳ ಗೆರೆ ಕೊರೆಯಲಾರೆನು

ಎಷ್ಟೊಂದು ನಕ್ಷತ್ರಗಳು
ಅಡ್ಡ ಬಂದವು ಸೂರ್ಯನ ಬೆಳಕಿಗೆ
ಕತ್ತಲೆಯನ್ನು ಕತ್ತರಿಸುವ
ಕೋಲ್ ಮಿಂಚನು ತುಂಡರಿಸಬಹುದೆ?
ಎಷ್ಟೊಂದು ಶಬ್ದ ಕಂಪನಗಳಾಗಿವೆ
ಕತ್ತಲೊಡಗಿನ ಭೂಮಿಯ ಗರ್ಭದಲಿ
ಅಂತರಂಗದ ಕತ್ತಲೆಗೆ ಓಡಿಸಲು
ನಿಶ್ಯಬ್ದದೊಳಗಣ ಶಬ್ದ ಚಿತ್ತಾರ
ಶಬ್ದವಿಲ್ಲ ಬೇರು ಬಿಡಲು ಬ್ರಹ್ಮವೃಕ್ಷಕೆ

ಬದುಕು ಧಾನಸ್ಥ ತಪಸ್ಸಿನ ಮಾದರಿ
ಅಂತಃಕರಣ ತುಂಬಿ ಕಣಕಣದಲಿ
ತನ್ನಾಚೆ ದಿಟ್ಟಿಸುವ ಅಕ್ಷಿಪಟಲದ ನೋಟ
ಕಾಲಮಾನದಾಚೆಗೂ ನುಡಿವ ಸಾಕ್ಷಿಭೂತ
ಅಂತರಂಗ ಅರಳಿಸುವ ಮಹಾಗುರು
ಅರಿವಿನ ಜೋಳಿಗೆಯಲಿ ಹಸಿವಿನ ಹಪಹಪಿ
ಅಕ್ಷರಗಳು ಬಿತ್ತರಿಸುವ ವಿಚಾರವಾದದ ಲಹರಿ
ಸಮತಾವಾದದ ಬೆಳಕಿನ ಕಿಂಡಿ.

ಚೆಲ್ಲಾಪಿಲ್ಲಿಯಾದ ಅಕ್ಷರಗಳಿಗೆ ಪದಗಳ ಹಂಗಿಲ್ಲ
ನಿನ್ನ ಬಣ್ಣಿಸುವ ಮಾತಿಗೂ ಹೊಳಪಿಲ್ಲ
ದಾರಿ ಕ್ರಮಿಸಿದೆ ಬಹುದೂರ ದೂರ..
ಬಾಳ ಬಯಲ ಅಂಗಳದಲಿ ನಿಂತು
ಎದೆಯ ಹಣತೆಯ ಮಂದ ಬೆಳಕಿನಲ್ಲಿ
ಕ್ರಮಿಸಿದ ಸುದೀರ್ಘ ಹಾದಿಯ ನೋಟ
ಅಂಕು ಡೊಂಕುಗಳ ಸಿಂಹಾವಲೋಕನ

ಕನ್ನಡದ ಕಂಪು ರಷ್ಯಾದವರೆಗೂ ಹರಡಿ
ರಾಷ್ಟ್ರಗಳ ಸ್ನೇಹ ಸೇತುಗಳ ಬಿಗಿ ಬಂಧ
ಸೋವಿಯತ್ ಲ್ಯಾಂಡಿನ ಗೌರವದ ಧಿರಿಸು
ತಾಯ್ನಾಡಿನ ನೆಹರು ಪ್ರಶಸ್ತಿಗಳ ಮುಡಿಗೇರಿಸಿ
ಅಸಂಖ್ಯಾತ ಶಿಷ್ಯ ಬಳಗದ ಗುರುವಾಗಿ
ಧಾರವಾಡದ ಕರ್ಮಭೂಮಿಯ ಕಿಂಕರವಾಗಿ
ವಟುವೃಕ್ಷದ ಬೇರು ಎಷ್ಟೊಂದು ಆಳ-ನೀರಾಳ

ದೀಪದಿಂದ ದೀಪ ಹಚ್ಚುವ ನೀಲಾಂಜನ
ಬೆಳಕು ಚೆಲ್ಲಿದೆ ಬುದ್ಧಪೂರ್ಣಿಮೆಯ ಬುದ್ಧಣ್ಣ
ಸುತ್ತ ಹರಡಿದೆ ನೋಡು ಪ್ರಚಂಡ ಪ್ರಭೆ
ಬೆಳಕೆಂದರೆ ದೀಪ, ದೀಪವೆಂದರೆ
ಹಿಂಗಮಿರೆಯೆಂಬ ಬೆಳಕಿನ ಸೆಳಕು
ಹಣತೆ, ಕಂದೀಲು, ಬಲ್ಬು, ದೀಪಗಳು
ಸೂರ್ಯ ಬೆಳಕಿಗೆಲ್ಲಿಯ ಸಾಟಿ ಹೇಳು?

ಉದಯರಾಗದಿಂದ ಉದಯಿಸಿದ ಸೂರ್ಯ
ಭೂಮಿಗೀತದಿಂದ ಬೈಲೋರಷ್ಯದವರೆಗೆ
ಹೊಸ ದಿಕ್ಕುಗಳ ಹುಡುಕಿದ ಸರದಾರನಿಗೆ
ದೇಶ, ಗಡಿ, ಭಾಷೆಗಳ ಗೆರೆ ಕೊರೆಯಲಾರೆನು.
ಹರಿವ ನದಿ, ಸುಳಿವ ಗಾಳಿ, ಸುಗಂಧಗಳಿಗೆ
ಬಂಧನದ ಕಟ್ಟುಗಳನು ಬಿಗಿಯಲಾರೆನು
ಸಮತಾವಾದದ ಸಂತ ಸಾಧಕನಿಗೆ
ಭಾಷೆ, ದೇಶ, ಗಡಿಗಳ ಗೆರೆ ಕೊರೆಯಲಾರೆನು
*****
(ಬುದ್ಧಣ್ಣ ಹಿಂಗಮಿರೆಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...