ವಚನ ಕಾಸಿನ ಬಿಸಿಗೆ ಕರಗುವ ಮೌಲ್ಯವುಳಿವುದೆಂತು? ಚಂದ್ರಶೇಖರ ಎ ಪಿMarch 16, 2023November 11, 2022 ಹಸಿ ಬಿಸಿಯ ಸ್ಥಿತ್ಯಂತರಕೆಂಥ ಕಲ್ಲಾದೊಡಂ ತುಸು ತುಸು ಒಡೆದಂತಿಮದಿ ಮಣ್ಣಕ್ಕು ಹುಸಿ ದುಡಿಮೆಯನುದಿನವು ನೂರ್ ಬಾರಿ ಬಿಸಿ ದುಡ್ಡಪ್ಪಾವರ್ತನೆಯ ವೇಗಕೆಮ್ಮ ಕೃಷಿ ಬದುಕಿನಾರೋಗ್ಯ ನುಚ್ಚು ನೂರಾಗುತಿದೆ - ವಿಜ್ಞಾನೇಶ್ವರಾ ***** Read More
ಇತರೆ ವಚನ ವಿಚಾರ – ಅಸಾಧ್ಯ ನಾಗಭೂಷಣಸ್ವಾಮಿ ಓ ಎಲ್March 16, 2023February 28, 2023 ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು [ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ-ಕಾಂಬುದು-ಕಾಣುವುದು, ಮಾಣು-ಬಿಡು] ಘಟ್ಟಿವಾಳಯ್ಯನ ವಚನ. ಈ... Read More
ವಚನ ಸಮ್ಮಾನ ಸಂಭ್ರಮವಿದೇನು ಸಮ್ಮೋಹನಕೆ? ಚಂದ್ರಶೇಖರ ಎ ಪಿMarch 9, 2023November 11, 2022 ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು - ವಿಜ್ಞಾನೇಶ್ವರಾ ***** Read More
ಇತರೆ ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು ನಾಗಭೂಷಣಸ್ವಾಮಿ ಓ ಎಲ್March 9, 2023February 28, 2023 ಅರಿಯಬಹುದು ಕುರುಹಿಡಬಾರದು ಭಾವಿಸಬಹುದು ಬೆರೆಸಬಾರದು ಕಾಣಬಹುದು ಕೈಗೆ ಸಿಲುಕದು ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣರು ಬಲ್ಲರು [ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ] ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-ಇಡಿಯಾದವನು. ಅವನು ನಿರಾಳ, ಅವನನ್ನು ಅರಿಯಬಹುದು,... Read More
ವಚನ ಕಾವ ಸರಕಾರವೇ ಕಾವಾಗಿ ಕಾಡಿದರೆ? ಚಂದ್ರಶೇಖರ ಎ ಪಿMarch 2, 2023November 11, 2022 ನೋವನೊರೆಸುವ ಬದಲೊಳಗೊಂದು ನೋವನಿನ್ನೊಂದು ನೋವಿಂದ ಮರೆಯಿ ಸುವ ತಂತ್ರಗಾರಿಕೆ ಯಾಕೋ? ರೈತ ಬಲ ಮೂ ಲವನಳಿಸಿ ಸಾಲ ಸಬ್ಸಿಡಿ ಮತ್ಯಾಕೋ? ಬೀದಿ ಜೀವನವೆಲ್ಲರದನುದಿನವು ಹೊಸ ಗುಂಡಿಗಳು - ವಿಜ್ಞಾನೇಶ್ವರಾ ***** Read More
ಇತರೆ ವಚನ ವಿಚಾರ – ಹುಡುಕಾಟ ನಾಗಭೂಷಣಸ್ವಾಮಿ ಓ ಎಲ್March 2, 2023February 28, 2023 ಅರಸಿ ಅರಸಿ ಹಾ ಹಾ ಎನುತಿದ್ದೆನು ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು... Read More
ವಚನ ಗೋಳೆಂದೊಡೇಂ? ಸಾಲ ಸುಳಿಗಾನ ಕಾರಣಮಿರಲು ಚಂದ್ರಶೇಖರ ಎ ಪಿFebruary 23, 2023November 11, 2022 ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ ದೊಳು ರೈತ ತಾ ಬೆಳೆದನಿವಾರ್ಯದೊಳು ಮಾರುವ ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ - ವಿಜ್ಞಾನೇಶ್ವರಾ ***** Read More
ಇತರೆ ವಚನ ವಿಚಾರ – ಹೀಗೆ ಸಂತೋಷ ನಾಗಭೂಷಣಸ್ವಾಮಿ ಓ ಎಲ್February 23, 2023January 27, 2023 ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ... Read More
ವಚನ ಏನು ಸಾವಯವವೋ ? ಅವರಿವರಿಗಾಗಿ ದುಡಿಯುತಿರೆ ಚಂದ್ರಶೇಖರ ಎ ಪಿFebruary 16, 2023November 11, 2022 ಅನ್ನ, ಹಾಲು, ತರಕಾರಿಗಳಲಿ, ಅಮಿತ ಬಗೆಯ ದನೆಮ್ಮ ತಾಯ್ನೆಲದೊಳುತ್ಪಾದಿಸಲದೊಂದು ಸಾವಯ ವನಡೆಯದನಿನ್ನಷ್ಟು ವಿಸ್ತರಿಸಿ ಬಡಗಿ, ಕಮ್ಮಾರ, ಕ್ಷೌರ ವೆನುತೆಷ್ಟೊಂದು ಕೆಲಸಗಳನರಿತೆಮ್ಮ ಸೇವೆಯನಲ್ಲಲ್ಲೇ ತಾನೆ ಮಾಡಿದೊಡುಳಿವ ಸಾಗಾಟದೊಳಿನ್ನಷ್ಟು ಸವಿಯುಂಟು - ವಿಜ್ಞಾನೇಶ್ವರ ***** Read More
ಇತರೆ ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ ನಾಗಭೂಷಣಸ್ವಾಮಿ ಓ ಎಲ್February 16, 2023January 27, 2023 ಅಯ್ಯಾ ನೀನೆನ್ನ ಮೊರೆಯನಾಲಿಸಿದಡಾಲಿಸು ಆಲಿಸದಿರ್ದಡೆ ಮಾಣು ಅಯ್ಯಾ ನೀನೆನ್ನ ದುಃಖವ ನೋಡಿದಡೆ ನೋಡು ನೋಡದಿರ್ದಡೆ ಮಾಣು ನಿನಗಿದು ವಿಧಿಯೆ ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ [ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,] ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು... Read More