Home / ಕವನ / ಕವಿತೆ / ಪ್ರೇಮ ದೂತ

ಪ್ರೇಮ ದೂತ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ
ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ

ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು
ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು

ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ
ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ

ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ
ದೇಹತೃಷೆಯ ಮೀರಿರುವ ಬಂಧನವು ಸವೆಯದಂಥ ಖಾದ್ಯ

ನಿನ್ನ ಹೃದಯ ದೇಗುಲವ ಸಿಂಗರಿಪ ಭಾಗ್ಯವಂತ ನಾನು
ನನ್ನ ಮನವ ಸಿಂಗರಿಪ ಮಾನಿನಿಯೆ ಚಿಂತೆ ಬೇಡವೇನು

ದೂರ ದೂರದಲಿ ಕಾಂಬ ಗುಡ್ಡವದು ಮಾಲೆಮಾಲೆ ನೀಲಿ
ಮುಳ್ಳುಕಲ್ಲುಗಳು ಅಲ್ಲಿ ಬಹಳ ಇವೆ ನಡೆಯಬೇಕು ತೇಲಿ

ಚೆಲುವೊ ಒಲವೊ ಬಾಳೆಲ್ಲ ಭವ್ಯತೆಗೆ ಏರೆ ಮಾತ್ರ ಯೋಗ್ಯ
ಬಣ್ಣ ಬದುಕು ಬರಡಾದ ಮೇಲು ಉಳಿಯುವುದು ಪ್ರೇಮ ಭಾಗ್ಯ

ಕೂಡುವಂಥ ಸುಖಕಿಂತ ಕೂಟ ಹಾರೈಕೆ ಸೊಗಸು ಏನೊ
ತಿನ್ನುವಂಥ ಸವಿಗಿಂತ ತಿನ್ನಲಿಹ ಬಯಕೆ ರುಚಿಯೊ ಏನೊ

ತನುವು ಹುಟ್ಟಿ ಬೆಳೆದಾಡಿ ಅಳಿಯುವುದು ನಿತ್ಯಜೀವ ಯಾತ್ರೆ
ಮನದ ಭಾವ ಶ್ರೀಮಂತ ಲೀಲೆಯದು ಸತ್ಯ ಚೈತ್ಯ ಯಾತ್ರೆ

ನಮ್ಮ ಜನ್ಮಗಳ ಗಂಟು ಎನ್ನುವರು ಗಂಡು ಹೆಣ್ಣು ಜೋಡಿ
ಜೋಡಿ ಜೋಡಿಗಳು ಒಂದೆ ಎಂದರೇಕಿಷ್ಟು ಹೆಚ್ಚು ರಾಡಿ

ಹಿಂದು ಮುಂದು ಜನುಮಗಳ ಕಂಡವರು ಯಾರೊ ಎಲ್ಲೋ ಏನೊ
ಇಂದು ನಾಳೆಗಳು ನಮ್ಮ ಕೈಯಲಿವೆ ಕೂಡಿ ಬಾಳೆ ಜೇನೊ

ಏನೂ ಅಳಿಯುವುದು ಏನೊ ಉಳಿಯುವುದು ಉಳಿವುದೊಂದೆ ಗುರಿಯು
ಇಹವು ಕಳೆದರೂ ಪರವು ಉಳಿಯುವುದು ಜೀವಿಗದುವೆ ಗುರಿಯು

ಅಂದು ಕೊಳ್ಳುವುದು ಆಡಿಕೊಳ್ಳುವುದು ಮಾತು ಬರಹವೊಂದು
ಮಾಡಿಕೊಳ್ಳುವುದು ಕಂಡು ಕೊಳ್ಳುವುದು ನಡತೆ ಬೇರೆಯೊಂದು

ಉದ್ದ ಉದ್ದ ಮೈಲುದ್ದ ಬರೆದರೇನೊಂದು ಮಾಡದಲ್ಲೆ
ಮೆರಗು ಬೆರಗು ಬುರುಗೆಲ್ಲ ಹೋಗಿರಲು ಪ್ರೇಮ ನೋಡೆ ನಲ್ಲೆ

ಏನು ಬಯಸದೆಯೆ ಬಂದುದನ್ನು ವರವೆಂದು ತಿಳಿಯೆ ಸುಖವು
ಗುಡ್ಡದಾಸೆ ಬರಿಕಡ್ಡಿಯಾಗಿ ಹೋದೀತು ಗುಳ್ಳೆ ಮುಖವು

ನನಗೆ ನೀನು ನಾ ನಿನಗೆ ಎನ್ನುವುದು ಕೆಲವು ದಿನದ ಸೆಳೆತ
ನೀನು ನಾನು ಬೇರೊಬ್ಬಗಾಗಿ ಎನ್ನುವುದು ಕೊನೆಯ ಎಳೆತ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...